<p>ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ನಟ ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಆರೋಗ್ಯ ಮತ್ತು ಚಿತ್ರರಂಗದ ಚಟುವಟಿಕೆ ಕುರಿತು ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.</p>.<p>‘ಆರೋಗ್ಯ ಸುಧಾರಿಸುತ್ತಿದೆ. ಈಗ ಮೊದಲಿನಂತೆ ವಾಕಿಂಗ್ ಮಾಡುತ್ತಿರುವೆ. ಬಹುತೇಕ ಸಹಜ ಜೀವನಕ್ಕೆ ಮರಳಿದ್ದೇನೆ. ಡ್ಯಾನ್ಸ್ ಮಾಡಲು ಶುರು ಮಾಡಿದ್ದೇನೆ. ಸಾಮಾನ್ಯವಾಗಿ ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಚೇತರಿಕೆಗೆ ಐದಾರು ತಿಂಗಳು ಬೇಕು. ಆದರೆ ಬೇಗ ಚೇತರಿಕೆಗೊಂಡಿದ್ದೇನೆ. ವೈದ್ಯರು ಪ್ರತಿ ಹತ್ತು ದಿನಕ್ಕೆ ಒಂದು ಸಲ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಾರೆ’ ಎಂದರು ಶಿವಣ್ಣ.</p>.<p>‘ಎರಡು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾದೆ. ರಾಮ್ಚರಣ್ ನಟನೆಯ ‘ಪೆದ್ದಿ’ ಚಿತ್ರದ ಚಿತ್ರೀಕರಣದಲ್ಲಿ ಎರಡು ದಿನ ಪಾಲ್ಗೊಂಡೆ. ‘131’ ಚಿತ್ರೀಕರಣ ಮುಗಿಸಿ ಇನ್ನೊಂದು ಚಿತ್ರ ಶುರು ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಸದ್ಯದಲ್ಲಿ ಪವನ್ ಒಡೆಯರ್ ಜೊತೆ ಸಿನಿಮಾ ಚಿತ್ರೀಕರಣ ಪ್ರಾರಂಭಿಸಬೇಕು’ ಎಂದು ಅವರು ತಿಳಿಸಿದರು. </p>.<p>‘ಪೆದ್ದಿಯಲ್ಲಿ ವಿಶೇಷ ಪಾತ್ರ. ಜನ ನೋಡಿದಾಗ ಕನೆಕ್ಟ್ ಆಗುತ್ತಾರೆ. ನನಗೆ ರಾಮಚರಣ್ ಮೇಲಿರುವ ಪ್ರೀತಿ, ಅವರಿಗೆ ನನ್ನ ಮೇಲಿನ ಪ್ರೀತಿ ಈ ಪಾತ್ರದಲ್ಲಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ನಟ ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಆರೋಗ್ಯ ಮತ್ತು ಚಿತ್ರರಂಗದ ಚಟುವಟಿಕೆ ಕುರಿತು ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.</p>.<p>‘ಆರೋಗ್ಯ ಸುಧಾರಿಸುತ್ತಿದೆ. ಈಗ ಮೊದಲಿನಂತೆ ವಾಕಿಂಗ್ ಮಾಡುತ್ತಿರುವೆ. ಬಹುತೇಕ ಸಹಜ ಜೀವನಕ್ಕೆ ಮರಳಿದ್ದೇನೆ. ಡ್ಯಾನ್ಸ್ ಮಾಡಲು ಶುರು ಮಾಡಿದ್ದೇನೆ. ಸಾಮಾನ್ಯವಾಗಿ ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಚೇತರಿಕೆಗೆ ಐದಾರು ತಿಂಗಳು ಬೇಕು. ಆದರೆ ಬೇಗ ಚೇತರಿಕೆಗೊಂಡಿದ್ದೇನೆ. ವೈದ್ಯರು ಪ್ರತಿ ಹತ್ತು ದಿನಕ್ಕೆ ಒಂದು ಸಲ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಾರೆ’ ಎಂದರು ಶಿವಣ್ಣ.</p>.<p>‘ಎರಡು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾದೆ. ರಾಮ್ಚರಣ್ ನಟನೆಯ ‘ಪೆದ್ದಿ’ ಚಿತ್ರದ ಚಿತ್ರೀಕರಣದಲ್ಲಿ ಎರಡು ದಿನ ಪಾಲ್ಗೊಂಡೆ. ‘131’ ಚಿತ್ರೀಕರಣ ಮುಗಿಸಿ ಇನ್ನೊಂದು ಚಿತ್ರ ಶುರು ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಸದ್ಯದಲ್ಲಿ ಪವನ್ ಒಡೆಯರ್ ಜೊತೆ ಸಿನಿಮಾ ಚಿತ್ರೀಕರಣ ಪ್ರಾರಂಭಿಸಬೇಕು’ ಎಂದು ಅವರು ತಿಳಿಸಿದರು. </p>.<p>‘ಪೆದ್ದಿಯಲ್ಲಿ ವಿಶೇಷ ಪಾತ್ರ. ಜನ ನೋಡಿದಾಗ ಕನೆಕ್ಟ್ ಆಗುತ್ತಾರೆ. ನನಗೆ ರಾಮಚರಣ್ ಮೇಲಿರುವ ಪ್ರೀತಿ, ಅವರಿಗೆ ನನ್ನ ಮೇಲಿನ ಪ್ರೀತಿ ಈ ಪಾತ್ರದಲ್ಲಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>