ಮುಂಗಡವಾಗಿ ಪಡೆದ ಹಣವನ್ನು ಶ್ರೀರೆಡ್ಡಿ ಅವರು ಸೈಕ್ಲೋನ್ನಿಂದ ಬಳಲುತ್ತಿರುವ ಶ್ರೀಕಾಕುಳಂನ ಜನರಿಗೆ ದಾನವಾಗಿ ನೀಡಲಿದ್ದಾರಂತೆ. ಈ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ತೆಲುಗಿನ ನಿರ್ದೇಶಕ ಹಾಗೂ ನಟರ ವಿರುದ್ಧ ಆರೋಪಿಸಿದ್ದ ಬಳಿಕ ಶ್ರೀರೆಡ್ಡಿ ಅವರಿಗೆ ಅವಕಾಶಗಳು ಸಿಕ್ಕಿರಲಿಲ್ಲ. ಆರೋಪದ ಬಳಿಕ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಅವಕಾಶ ಸಿಕ್ಕಿದೆ.