‘₹200 ಕೋಟಿ ಕೇವಲ ಸಂಗ್ರಹವಾದ ಹಣ ಅಷ್ಟೇ. ನಮ್ಮ ಸಿನಿಮಾ ಸಾಕಷ್ಟು ಜನರ ಮನಸ್ಸನ್ನು ಗೆದ್ದಿರುವುದು ಖುಷಿಯ ವಿಷಯ’ ಎಂದು ಸೋನಾಕ್ಷಿ ಹೇಳಿದ್ದಾರೆ. ಇದಕ್ಕೆ ನಟ ಅಕ್ಷಯ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ‘ಇಸ್ರೊ’ ತಂಡಕ್ಕೆ ನಾವು ಧನ್ಯವಾದ ಹೇಳಲೇಬೇಕು. ಅವರ ಸಹಕಾರ ಇಲ್ಲದೇ ನಮ್ಮ ಸಿನಿಮಾ ಅಪೂರ್ಣ. ಅವರ ಸಾಧನೆಯನ್ನು ನಾವು ತೆರೆಮೇಲೆ ತೋರಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ’ ಎಂದು ಅವರು ಬರೆದಿದ್ದಾರೆ.ವಿದ್ಯಾ ಬಾಲನ್, ತಾಪ್ಸಿ ಪನ್ನು, ಕೃತಿ ಕಲ್ಹಾರಿ, ನಿತ್ಯಾ ಮೆನನ್ ಅಭಿನಯಿಸಿರುವ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.