ನಟ ಅಜಿತ್ ಪರವಾಗಿ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಟ್ವೀಟ್ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಪೋಸ್ಟ್ನಲ್ಲಿ 'ಗೌರವಾನ್ವಿತ ಮಾಧ್ಯಮ ಸದಸ್ಯರಿಗೆ, ಸಾರ್ವಜನಿಕರಿಗೆ ಮತ್ತು ಅಭಿಮಾನಿಗಳಿಗೆ ಮನವಿ. ನನ್ನನ್ನು ಅಜಿತ್, ಅಜಿತ್ ಕುಮಾರ್ ಅಥವಾ ಕೇವಲ ಎಕೆ ಎಂದಷ್ಟೇ ಗುರುತಿಸಿ. ತಲ ಅಥವಾ ಬೇರೆ ರೀತಿಯ ಬಿರುದಾಂಕಿತಗಳನ್ನು ನನ್ನ ಹೆಸರಿನ ಮುಂದೆ ಸೇರಿಸಬೇಡಿ' ಎಂದು ನಟ ಅಜಿತ್ ಕುಮಾರ್ ವಿನಂತಿಸಿಕೊಂಡಿದ್ದಾರೆ.