ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ತಿಮ್ಮಪ್ಪನ ಬಳಿ ಶಿವರಾಜ್‌ಕುಮಾರ್‌ ಕೋರಿದ್ದೇನು?

Last Updated 13 ಡಿಸೆಂಬರ್ 2019, 9:33 IST
ಅಕ್ಷರ ಗಾತ್ರ

‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಮತ್ತು ಗೀತಾ ಶಿವರಾಜ್‌ಕುಮಾರ್‌ ದಂಪತಿಗೆ ದೇವರ ಮೇಲೆ ಅಪಾರ ಭಕ್ತಿ. ಈ ಇಬ್ಬರೂ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಕೋರಿದ್ದರು.

ಮತ್ತೊಂದೆಡೆ ಶಿವಣ್ಣ ಅವರ ಎಲ್ಲಾ ಸಿನಿಮಾ ಕಾರ್ಯಕ್ರಮಗಳಲ್ಲೂ ಗೀತಾ ಅವರು ಭಾಗಿಯಾಗುತ್ತಾರೆ. ಕೆಲವೊಮ್ಮೆ ವಿದೇಶಗಳಲ್ಲಿ ನಡೆಯುವ ಶೂಟಿಂಗ್‌ ವೇಳೆಯೂ ಅವರು ಶಿವಣ್ಣನ ಜೊತೆ ಇರುತ್ತಾರೆ.

‘ಆಯುಷ್ಮಾನ್‌ಭವ’ ಚಿತ್ರದ ಬಿಡುಗಡೆಯ ಬಳಿಕ ಶಿವಣ್ಣ ‘ಭಜರಂಗಿ 2’ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಬೆಂಗಳೂರಿನಲ್ಲಿ ಈ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಈ ನಡುವೆಯೇ ಬಿಡುವು ಮಾಡಿಕೊಂಡು ಶಿವರಾಜ್‌ಕುಮಾರ್ ದಂಪತಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದೆ. ಗೀತಾ ಅವರು ತಿಮ್ಮಪ್ಪನಿಗೆ ತಮ್ಮ ಮುಡಿ ಅರ್ಪಿಸಿದ್ದಾರೆ.

ಈ ಕುರಿತು ಶಿವಣ್ಣ ಅವರು, ‘2019ರಲ್ಲಿ ನಮ್ಮ ಎಲ್ಲಾ ಕಷ್ಟಗಳಲ್ಲಿ ಕೈಹಿಡಿದ ಆ ತಿರುಪತಿ ತಿಮ್ಮಪ್ಪನಿಗೆ ನಮ್ಮ ಅರ್ಪಣೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅವರ ಈ ಪೋಸ್ಟ್‌ಗೆ ‘ನಿಮ್ಮ ಸುಖ, ಸಂತೋಷ, ಆರೋಗ್ಯವೇ ಅಭಿಮಾನಿಗಳ ಭಾಗ್ಯ’ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT