<p><strong>ಮುಂಬೈ: </strong>ಬಾಲಿವುಡ್ನ ಹಿರಿಯ ನಟ, ನಿರ್ಮಾಪಕ ಮನೋಜ್ ಕುಮಾರ್ (87) ಶುಕ್ರವಾರ ಇಲ್ಲಿನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. </p><p>‘ಭಾರತ್’ದ ಆಶಯ ಬಿಂಬಿಸುವ, ದೇಶಭಕ್ತಿಯ ಸರಣಿ ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಇದೇ ಕಾರಣದಿಂದ ‘ಭಾರತ್ ಕುಮಾರ್’ ಎಂದೂ ಚಲನಚಿತ್ರವಲಯದಲ್ಲಿ ಹೆಸರಾಗಿದ್ದರು. ಜನಪ್ರಿಯ ‘ಉಪಕಾರ್, ಪೂರಬ್ ಔರ್ ಪಶ್ಚಿಮ್, ರೋಟಿ ಕಪಡಾ ಔರ್ ಮಕಾನ್’ ಅವರ ನಟನೆಯ ಪ್ರಮುಖ ಚಿತ್ರಗಳು.</p><p>ಕೆಲ ತಿಂಗಳಿಂದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ‘ತಂದೆ ಯಾತನೆಯಿಂದ ಈಗ ಪಾರಾಗಿದ್ದಾರೆ’ ಎಂದು ಮೃತರ ಪುತ್ರ, ನಟ ಕುನಾಲ್ ಪ್ರತಿಕ್ರಿಯಿಸಿದರು. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ. ಮೃತರಿಗೆ ಪತ್ನಿ ಶಶಿ ಮತ್ತು ಇಬ್ಬರು ಪುತ್ರರಿದ್ದಾರೆ.</p><p>ಮನೋಜ್ ಕುಮಾರ್ 1960, 1970ರ ದಶಕದಲ್ಲಿ ಜನಪ್ರಿಯತೆ ಉತ್ತುಂಗದಲ್ಲಿದ್ದರು. ದೇಶಭಕ್ತಿ ಅಲ್ಲದೆ, ಪ್ರಣಯ ಪ್ರಧಾನ ‘ಹಿಮಾಲಯ ಕೀ ಗೋಡ್ ಮೇ’, ‘ಪತ್ತರ್ ಕೇ ಸನಂ’ ಚಿತ್ರಗಳಲ್ಲೂ ನಟಿಸಿದ್ದರು.</p><p>ಅವಿಭಜಿತ ಭಾರತದ, ಈಗಿನ ಪಾಕಿಸ್ತಾನದ ಗ್ರಾಮದಲ್ಲಿ ಪಂಜಾಬಿ ಹಿಂದೂ ಕುಟುಂಬವೊಂದರಲ್ಲಿ ಜನಿಸಿದ್ದರು. ಅವರ ಮೂಲ ಹೆಸರು ಹರಿಕೃಷನ್ ಗೋಸ್ವಾಮಿ. ದೇಶ ವಿಭಜನೆಯ ಬಳಿಕ ಕುಟುಂಬ 1947ರಲ್ಲಿ ದೆಹಲಿಗೆ ವಲಸೆ ಬಂದಿತ್ತು. ದೆಹಲಿ ವಿ.ವಿ.ಯಲ್ಲಿ ಪದವಿ ಶಿಕ್ಷಣದ ಬಳಿಕ ಮುಂಬೈಗೆ ತೆರಳಿದ್ದರು.</p><p>ನಟ ದಿಲೀಪ್ ಕುಮಾರ್ ಅವರ ಅಭಿಮಾನಿಯಾಗಿದ್ದರು. ‘ದಿಲೀಪ್ ಕುಮಾರ್ ನಟನೆಯ ‘ಶಬ್ನಮ್’ ವೀಕ್ಷಿಸಿದ ಬಳಿಕ ಅವರಂತೇ ನಟನಾಗುವ ಹಂಬಲ ಹೊಂದಿದ್ದೆ. ಆಗ ನನ್ನ ವಯಸ್ಸು 11’ ಎಂದು ಪಿಟಿಐಗೆ 2021ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ವತಃ ಹೇಳಿಕೊಂಡಿದ್ದರು.</p><p>ಮುಂದೊಂದು ದಿನ ತಮ್ಮ ನಿರ್ಮಾಣದ ‘ಕ್ರಾಂತಿ’ಯಲ್ಲಿ ಸ್ವತಃ ದಿಲೀಪ್ ಕುಮಾರ್ ಅವರೇ ನಟಿಸುವಂತೆ ನೋಡಿಕೊಂಡರು. ದಿಲೀಪ್ ಕುಮಾರ್ ಅವರೊಂದಿಗೆ ‘ಆದ್ಮಿ’ ಚಿತ್ರದಲ್ಲೂ ನಟಿಸಿದ್ದರು.</p><p>2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ‘ಪದ್ಮಶ್ರೀ’ ಗೌರವವೂ ಸಂದಿತ್ತು.</p><p>ಬಾಲಿವುಡ್ನ ಪ್ರಮುಖರು ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಸಮಕಾಲೀನ ನಟರಾದ ಧರ್ಮೇಂದ್ರ, ಹೇಮಮಾಲಿನಿ, ಅವರು ‘ನಮ್ಮ ಆತ್ಮೀಯರಲ್ಲಿ ಒಬ್ಬರು’ ಎಂದು ಸ್ಮರಿಸಿದರು.</p><p>‘ರಾಷ್ಟ್ರ ನಾಯಕರು, ರೈತರು, ಯೋಧರ ಪಾತ್ರಗಳಿಗೆ ಜೀವ ತುಂಬಿದ್ದರು. ಅವರ ಚಿತ್ರಗಳು ವೀಕ್ಷಕರಲ್ಲಿ ದೇಶಭಕ್ತಿಯ ಭಾವನೆ ಬೆಳೆಸಿದ್ದವು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್‘ನಲ್ಲಿ ಸ್ಮರಿಸಿದ್ದಾರೆ.</p><p>‘ಮನೋಜ್ ಕುಮಾರ್ ಭಾರತ ಚಿತ್ರರಂಗದ ಪ್ರಮುಖ ನಟ. ದೇಶಭಕ್ತಿ ಬಿಂಬಿಸುವ ಪಾತ್ರಗಳಿಗಾಗಿ ಅವರು ಎಂದಿಗೂ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಬಾಲಿವುಡ್ನ ಹಿರಿಯ ನಟ, ನಿರ್ಮಾಪಕ ಮನೋಜ್ ಕುಮಾರ್ (87) ಶುಕ್ರವಾರ ಇಲ್ಲಿನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. </p><p>‘ಭಾರತ್’ದ ಆಶಯ ಬಿಂಬಿಸುವ, ದೇಶಭಕ್ತಿಯ ಸರಣಿ ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಇದೇ ಕಾರಣದಿಂದ ‘ಭಾರತ್ ಕುಮಾರ್’ ಎಂದೂ ಚಲನಚಿತ್ರವಲಯದಲ್ಲಿ ಹೆಸರಾಗಿದ್ದರು. ಜನಪ್ರಿಯ ‘ಉಪಕಾರ್, ಪೂರಬ್ ಔರ್ ಪಶ್ಚಿಮ್, ರೋಟಿ ಕಪಡಾ ಔರ್ ಮಕಾನ್’ ಅವರ ನಟನೆಯ ಪ್ರಮುಖ ಚಿತ್ರಗಳು.</p><p>ಕೆಲ ತಿಂಗಳಿಂದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ‘ತಂದೆ ಯಾತನೆಯಿಂದ ಈಗ ಪಾರಾಗಿದ್ದಾರೆ’ ಎಂದು ಮೃತರ ಪುತ್ರ, ನಟ ಕುನಾಲ್ ಪ್ರತಿಕ್ರಿಯಿಸಿದರು. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ. ಮೃತರಿಗೆ ಪತ್ನಿ ಶಶಿ ಮತ್ತು ಇಬ್ಬರು ಪುತ್ರರಿದ್ದಾರೆ.</p><p>ಮನೋಜ್ ಕುಮಾರ್ 1960, 1970ರ ದಶಕದಲ್ಲಿ ಜನಪ್ರಿಯತೆ ಉತ್ತುಂಗದಲ್ಲಿದ್ದರು. ದೇಶಭಕ್ತಿ ಅಲ್ಲದೆ, ಪ್ರಣಯ ಪ್ರಧಾನ ‘ಹಿಮಾಲಯ ಕೀ ಗೋಡ್ ಮೇ’, ‘ಪತ್ತರ್ ಕೇ ಸನಂ’ ಚಿತ್ರಗಳಲ್ಲೂ ನಟಿಸಿದ್ದರು.</p><p>ಅವಿಭಜಿತ ಭಾರತದ, ಈಗಿನ ಪಾಕಿಸ್ತಾನದ ಗ್ರಾಮದಲ್ಲಿ ಪಂಜಾಬಿ ಹಿಂದೂ ಕುಟುಂಬವೊಂದರಲ್ಲಿ ಜನಿಸಿದ್ದರು. ಅವರ ಮೂಲ ಹೆಸರು ಹರಿಕೃಷನ್ ಗೋಸ್ವಾಮಿ. ದೇಶ ವಿಭಜನೆಯ ಬಳಿಕ ಕುಟುಂಬ 1947ರಲ್ಲಿ ದೆಹಲಿಗೆ ವಲಸೆ ಬಂದಿತ್ತು. ದೆಹಲಿ ವಿ.ವಿ.ಯಲ್ಲಿ ಪದವಿ ಶಿಕ್ಷಣದ ಬಳಿಕ ಮುಂಬೈಗೆ ತೆರಳಿದ್ದರು.</p><p>ನಟ ದಿಲೀಪ್ ಕುಮಾರ್ ಅವರ ಅಭಿಮಾನಿಯಾಗಿದ್ದರು. ‘ದಿಲೀಪ್ ಕುಮಾರ್ ನಟನೆಯ ‘ಶಬ್ನಮ್’ ವೀಕ್ಷಿಸಿದ ಬಳಿಕ ಅವರಂತೇ ನಟನಾಗುವ ಹಂಬಲ ಹೊಂದಿದ್ದೆ. ಆಗ ನನ್ನ ವಯಸ್ಸು 11’ ಎಂದು ಪಿಟಿಐಗೆ 2021ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ವತಃ ಹೇಳಿಕೊಂಡಿದ್ದರು.</p><p>ಮುಂದೊಂದು ದಿನ ತಮ್ಮ ನಿರ್ಮಾಣದ ‘ಕ್ರಾಂತಿ’ಯಲ್ಲಿ ಸ್ವತಃ ದಿಲೀಪ್ ಕುಮಾರ್ ಅವರೇ ನಟಿಸುವಂತೆ ನೋಡಿಕೊಂಡರು. ದಿಲೀಪ್ ಕುಮಾರ್ ಅವರೊಂದಿಗೆ ‘ಆದ್ಮಿ’ ಚಿತ್ರದಲ್ಲೂ ನಟಿಸಿದ್ದರು.</p><p>2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ‘ಪದ್ಮಶ್ರೀ’ ಗೌರವವೂ ಸಂದಿತ್ತು.</p><p>ಬಾಲಿವುಡ್ನ ಪ್ರಮುಖರು ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಸಮಕಾಲೀನ ನಟರಾದ ಧರ್ಮೇಂದ್ರ, ಹೇಮಮಾಲಿನಿ, ಅವರು ‘ನಮ್ಮ ಆತ್ಮೀಯರಲ್ಲಿ ಒಬ್ಬರು’ ಎಂದು ಸ್ಮರಿಸಿದರು.</p><p>‘ರಾಷ್ಟ್ರ ನಾಯಕರು, ರೈತರು, ಯೋಧರ ಪಾತ್ರಗಳಿಗೆ ಜೀವ ತುಂಬಿದ್ದರು. ಅವರ ಚಿತ್ರಗಳು ವೀಕ್ಷಕರಲ್ಲಿ ದೇಶಭಕ್ತಿಯ ಭಾವನೆ ಬೆಳೆಸಿದ್ದವು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್‘ನಲ್ಲಿ ಸ್ಮರಿಸಿದ್ದಾರೆ.</p><p>‘ಮನೋಜ್ ಕುಮಾರ್ ಭಾರತ ಚಿತ್ರರಂಗದ ಪ್ರಮುಖ ನಟ. ದೇಶಭಕ್ತಿ ಬಿಂಬಿಸುವ ಪಾತ್ರಗಳಿಗಾಗಿ ಅವರು ಎಂದಿಗೂ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>