<p><strong>ಬೆಂಗಳೂರು: </strong>ಹಿರಿಯ ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಅವರ ಪತ್ನಿ ಹಾಗೂ ನಟಿ ಸರ್ವಮಂಗಳಾ (68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶನಿವಾರ ನಗರ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.</p>.<p>ಇವರಿಗೆ ಪುತ್ರರಾದ ಶಶಿ ಭೂಷಣ್ ಮತ್ತು ನಟ ಭರತ್ ಭೂಷಣ್ ಇದ್ದಾರೆ. ‘ಭಂಡ ನನ್ನ ಗಂಡ’, ‘ಹೆಂಡ್ತಿಯರೇ ಹುಷಾರ್’, ‘ಯಾರಿಗೂ ಹೇಳ್ಬೇಡಿ’, ‘ಹೆಂಡ್ತಿಯರ ಸವಾಲ್’ ಚಿತ್ರಗಳು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.</p>.<p>‘ಯಾರಿಗೂ ಹೇಳ್ಬೇಡಿ’ ಚಿತ್ರದಲ್ಲಿನ ‘ಚೆನ್ನಾಗಿ ಹೇಳಿದ್ರಿ’ ಸಂಭಾಷಣೆ ಜನಪ್ರಿಯಗೊಂಡಿದ್ದು, ಸರ್ವಮಂಗಳಾ ಅವರ ಹೆಸರಿನೊಂದಿಗೆ ‘ಚೆನ್ನಾಗಿ ಹೇಳಿದ್ರಿ’ ಡೈಲಾಗ್ ಕೂಡ ಅಂಟಿಕೊಂಡಿತ್ತು. ಶಂಕರ್ನಾಗ್ ಮತ್ತು ಮಹಾಲಕ್ಷ್ಮಿ ನಟನೆಯ ‘ಸಂಸಾರದ ಗುಟ್ಟು’, ಭವ್ಯ ನಟನೆಯ ‘ಸ್ವರ್ಗದಲ್ಲಿ ಮದುವೆ’ ಚಿತ್ರಗಳಿಗೂ ಚಿತ್ರಕಥೆ ಕೂಡ ಬರೆದಿದ್ದರು.</p>.<p>ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದ ಸರ್ವಮಂಗಳಾ ಅವರು, ‘ಮೌನರಾಗ’, ‘ಸಂಘಟನೆ’, ‘ತವರಿನ ಕಾಣಿಕೆ’, ‘ಪ್ರೇಮರಾಗ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕುಣಿಗಲ್ ನಾಗಭೂಷಣ್ ಅವರು 2013ರಲ್ಲಿ ತೀರಿಕೊಂಡ ನಂತರ ಸರ್ವಮಂಗಳ ಬಣ್ಣದ ಬದುಕಿನಿಂದ ವಿಮುಖರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹಿರಿಯ ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಅವರ ಪತ್ನಿ ಹಾಗೂ ನಟಿ ಸರ್ವಮಂಗಳಾ (68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶನಿವಾರ ನಗರ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.</p>.<p>ಇವರಿಗೆ ಪುತ್ರರಾದ ಶಶಿ ಭೂಷಣ್ ಮತ್ತು ನಟ ಭರತ್ ಭೂಷಣ್ ಇದ್ದಾರೆ. ‘ಭಂಡ ನನ್ನ ಗಂಡ’, ‘ಹೆಂಡ್ತಿಯರೇ ಹುಷಾರ್’, ‘ಯಾರಿಗೂ ಹೇಳ್ಬೇಡಿ’, ‘ಹೆಂಡ್ತಿಯರ ಸವಾಲ್’ ಚಿತ್ರಗಳು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.</p>.<p>‘ಯಾರಿಗೂ ಹೇಳ್ಬೇಡಿ’ ಚಿತ್ರದಲ್ಲಿನ ‘ಚೆನ್ನಾಗಿ ಹೇಳಿದ್ರಿ’ ಸಂಭಾಷಣೆ ಜನಪ್ರಿಯಗೊಂಡಿದ್ದು, ಸರ್ವಮಂಗಳಾ ಅವರ ಹೆಸರಿನೊಂದಿಗೆ ‘ಚೆನ್ನಾಗಿ ಹೇಳಿದ್ರಿ’ ಡೈಲಾಗ್ ಕೂಡ ಅಂಟಿಕೊಂಡಿತ್ತು. ಶಂಕರ್ನಾಗ್ ಮತ್ತು ಮಹಾಲಕ್ಷ್ಮಿ ನಟನೆಯ ‘ಸಂಸಾರದ ಗುಟ್ಟು’, ಭವ್ಯ ನಟನೆಯ ‘ಸ್ವರ್ಗದಲ್ಲಿ ಮದುವೆ’ ಚಿತ್ರಗಳಿಗೂ ಚಿತ್ರಕಥೆ ಕೂಡ ಬರೆದಿದ್ದರು.</p>.<p>ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದ ಸರ್ವಮಂಗಳಾ ಅವರು, ‘ಮೌನರಾಗ’, ‘ಸಂಘಟನೆ’, ‘ತವರಿನ ಕಾಣಿಕೆ’, ‘ಪ್ರೇಮರಾಗ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕುಣಿಗಲ್ ನಾಗಭೂಷಣ್ ಅವರು 2013ರಲ್ಲಿ ತೀರಿಕೊಂಡ ನಂತರ ಸರ್ವಮಂಗಳ ಬಣ್ಣದ ಬದುಕಿನಿಂದ ವಿಮುಖರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>