‘ಇದು ಐತಿಹಾಸಿಕ ಚಿತ್ರ. ಇದರ ಕಥೆಗಾಗಿ ಸಾಕಷ್ಟು ಇತಿಹಾಸಕಾರರ ಜತೆ ಚರ್ಚೆ ಮಾಡಲಾಗಿದೆ. ಅರಮನೆ ಮಾದರಿಯ ಸೆಟ್ ಹಾಕಬೇಕಿದೆ. ಹಿಂದಿನ ಘಟನಾವಳಿಗಳೆಲ್ಲವನ್ನೂ ನೈಜವಾಗಿ ತೋರಿಸಲು ಬೇಕಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಯುವ ರಾಜ್ ಕುಮಾರ್ ಅವರು ಚಿತ್ರಕ್ಕೆ ಬೇಕಾದಂತೆ ಸಮರಕಲೆ, ಕುದುರೆ ಸವಾರಿ ಎಲ್ಲವನ್ನೂ ಕಲಿಯುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾರ್ಯಾಗಾರಗಳನ್ನೂ ನಡೆಸಿದ್ದೇವೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ.