<p>ನಟ ಶ್ರೀನಗರ ಕಿಟ್ಟಿ ಮುಖದಲ್ಲಿ ಬೇಸರದ ಕಳೆ ಆವರಿಸಿದೆ. ಎಸ್. ನಾರಾಯಣ್ ನಿರ್ದೇಶನದಲ್ಲಿ ಅವರು ನಟಿಸಿರುವ `ಅಪ್ಪಯ್ಯ~ ನಿರೀಕ್ಷೆ ಮೂಡಿಸಿರುವ, ಬಿಡುಗಡೆಯಾಗಬೇಕಿರುವ ಚಿತ್ರ.<br /> <br /> ಕಿಟ್ಟಿ ಮತ್ತು ಪತ್ನಿ ಭಾವನಾ ನಿರ್ಮಿಸಿರುವ ಮಕ್ಕಳ ಸಿನಿಮಾ `ಬಾಲ್ಪೆನ್~ ಮೇ ತಿಂಗಳ ಮೊದಲ ವಾರದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈ ಎರಡು ಸಂಭ್ರಮದ ಘಳಿಗೆ ನಡುವೆಯೂ ಅವರಲ್ಲಿ ನೋವು ತುಂಬಿಕೊಳ್ಳಲು ಕಾರಣ ಎಸ್.ನಾರಾಯಣ್.<br /> <br /> ನಿರ್ಮಾಪಕ-ನಿರ್ದೇಶಕ ಎಸ್. ನಾರಾಯಣ್ ಇನ್ನು ಮುಂದೆ ಚಿತ್ರ ಮಾಡುವುದಿಲ್ಲ ಎಂದು ಘೋಷಿಸಿರುವುದು ಚರ್ಚೆಯಲ್ಲಿರುವ ಸುದ್ದಿ. ತಮ್ಮ ಈ ನಿರ್ಧಾರಕ್ಕೆ ಅವರು ನೀಡಿರುವ ಕಾರಣಗಳಲ್ಲಿ ನಾಯಕರ ಅಸಹಕಾರವೂ ಒಂದು. ಈ ಕಾರಣವೇ ಕಿಟ್ಟಿ ಅಸಮಾಧಾನಕ್ಕೆ ಮೂಲ. <br /> <br /> ನಾರಾಯಣ್ ಚಿತ್ರರಂಗದಿಂದ ಬೇಸತ್ತುಕೊಂಡು ಅದರಿಂದ ಹಿಂದೆ ಸರಿಯಲು ನಿರ್ಧರಿಸಿದ್ದರೆ ಈ ರೀತಿ ಬಹಿರಂಗವಾಗಿ ಹೇಳಿಕೊಳ್ಳಬಾರದಿತ್ತು. ಸಿನಿಮಾ ಮಾಡದೇ ಸುಮ್ಮನಿರಬಹುದಾಗಿತ್ತು. ಅವರು ತೀರ್ಮಾನ ತೆಗೆದುಕೊಂಡ ಸಮಯವೂ ಸರಿಯಲ್ಲ ಎನ್ನುತ್ತಾರೆ ಕಿಟ್ಟಿ.<br /> <br /> ನಾಯಕರು ಸರಿಯಾಗಿ ಸಹಕರಿಸುತ್ತಿಲ್ಲ ಎಂದರೆ ನಾನು ಅಥವಾ `ಮುಂಜಾನೆ~ಯಲ್ಲಿ ಗಣೇಶ್ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಮ್ಮಿಂದ ಎಂದೂ ತೊಂದರೆಯಾಗಿಲ್ಲ. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಹಾಜರಾಗಿದ್ದೇನೆ. ಚಿತ್ರದಲ್ಲಿ ಬದ್ಧತೆಯಿಂದ ತೊಡಗಿಕೊಂಡಿದ್ದೇನೆ. ಹೀಗಿದ್ದೂ ನಾರಾಯಣ್ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎನ್ನುವುದು ಅವರ ಬೇಸರ.<br /> <br /> `ಅಪ್ಪಯ್ಯ~ ಚಿತ್ರದ ಬಿಡುಗಡೆಗೆ ಇನ್ನೂ ಸಮಯವಿದೆ. ಪ್ರಚಾರ ಕಾರ್ಯಗಳೂ ನಡೆಯಬೇಕಿದೆ. ಹೀಗಿರುವಾಗ ಎಸ್. ನಾರಾಯಣ್ ಅವರ ಈ ನಡವಳಿಕೆ ಚಿತ್ರದ ಮೇಲೆ ಮಾತ್ರವಲ್ಲ ತಮ್ಮ ಮೇಲೂ ಪರಿಣಾಮ ಬೀರಲಿದೆ ಎಂಬುದು ಕಿಟ್ಟಿ ಕಳವಳ.<br /> <br /> ಸತತ ಸೋಲುಗಳಿಂದ ಕಂಗೆಟ್ಟಿರುವ ಎಸ್.ನಾರಾಯಣ್ ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿರುವುದಕ್ಕೆ ಕಾರಣಗಳು ಹಲವು. ಅಪಾರ ಭರವಸೆ ಇಟ್ಟುಕೊಂಡಿದ್ದ `ಶೈಲು~ ಅಷ್ಟೇನೂ ಯಶ ಕಾಣಲಿಲ್ಲ. ಅದರ ಬೆನ್ನಲ್ಲೇ ಮತ್ತೆ ಗಣೇಶ್ರನ್ನು ಹಾಕಿಕೊಂಡು ತೆರೆಗೆ ತಂದ `ಮುಂಜಾನೆ~ ಜನರಿಗೆ ಮುಂಜಾವಿನ ಪುಳಕ ನೀಡಲಿಲ್ಲ. ಮಗ ಪಂಕಜ್ರನ್ನು ನಾಯಕನನ್ನಾಗಿ ಬೆಳೆಸುವ ಪ್ರಯತ್ನಗಳೂ ಕೈ ಹಿಡಿಯಲಿಲ್ಲ.<br /> <br /> ಹಾಗೆಂದು ನಾರಾಯಣ್ ಖಾಲಿ ಕುಳಿತಿರಲಿಲ್ಲ. ಶ್ರೀನಗರ ಕಿಟ್ಟಿ ಮತ್ತು ಭಾಮಾ ನಟಿಸಿರುವ `ಅಪ್ಪಯ್ಯ~ ಚಿತ್ರೀಕರಣವನ್ನೂ ಅಷ್ಟೇ ವೇಗವಾಗಿ ನಡೆಸಿ, `ಚೌಡಯ್ಯ~ಕ್ಕೂ ತರಾತುರಿಯಲ್ಲಿಯೇ ಆ್ಯಕ್ಷನ್ ಕಟ್ ಹೇಳಲು ಪ್ರಾರಂಭಿಸಿದ್ದರು.<br /> <br /> ಲಕ್ಷ್ಮೀ ನರಸಿಂಹ, ನೆನಪಿದೆಯಾ ಓ ಗೆಳತಿ, ದೊಡ್ ಮನುಷ್ಯ, ದಾಂಡಿಗ, ಹೀಗೆ ನಾರಾಯಣ್ ಕುಲುಮೆಯಿಂದ ಹೊರಬರಬೇಕಾದ ಚಿತ್ರಗಳ ದೀರ್ಘ ಪಟ್ಟಿಯೇ ಇದೆ. ಜನರಿಗೆ ಬೇಡವಾಗಿದ್ದೇನೆಂದು ನಾರಾಯಣ್ ನೋವಿನಿಂದ ಚಿತ್ರರಂಗದಿಂದ ದೂರಸರಿಯಲು ಹೊರಟಿರುವುದರಿಂದ ಈ ಚಿತ್ರಗಳ ಗತಿ ಡೋಲಾಯಮಾನ. <br /> <br /> ಯಾರಾದರೂ ಅವಕಾಶ ಕೊಟ್ಟರೆ ನಟಿಸುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ. ಅವರ ನಿರ್ಧಾರದಿಂದ ಅವರನ್ನೇ ನೆಚ್ಚಿಕೊಂಡಿದ್ದವರ ಬದುಕು ಅತಂತ್ರವಾಗಿದ್ದರೆ, ಅವರ ಮಗ ಪಂಕಜ್ ಸಿನಿಮಾ ಭವಿಷ್ಯವೂ ತೂಗೂಯ್ಯಾಲೆಯಲ್ಲಿದೆ. ಮೊದಲ ಬಾರಿಗೆ ಮಾತೃ ಸಂಸ್ಥೆಯ ಹೊರಗಿನ ಬ್ಯಾನರ್ನಲ್ಲಿ ನಟಿಸುತ್ತಿರುವ `ರಣ~ ಪಂಕಜ್ ಭವಿಷ್ಯವನ್ನು ನಿರ್ಧರಿಸಲಿದೆ.<br /> <br /> ನಾರಾಯಣ್ ಚಿತ್ರರಂಗದಿಂದ ದೂರವಾದರೆ ಮುಂದೇನು ಎಂಬ ಪ್ರಶ್ನೆಗಳಿಗೆ ಉತ್ತರ ಕಿರುತೆರೆಯಲ್ಲಿ ಸಿಗುವ ಸಾಧ್ಯತೆಗಳಿವೆ. ಕಿರುತೆರೆ ಅವರಿಗೆ ಹೊಸತಲ್ಲ. `ಪಾರ್ವತಿ~, `ಭಾಗೀರಥಿ~, `ಸುಮತಿ~, `ಅಂಬಿಕಾ~ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಾರಾಯಣ್ ಬೆಳ್ಳಿತೆರೆಯಿಂದ ಮತ್ತೊಮ್ಮೆ ಕಿರುತೆರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ಶ್ರೀನಗರ ಕಿಟ್ಟಿ ಮುಖದಲ್ಲಿ ಬೇಸರದ ಕಳೆ ಆವರಿಸಿದೆ. ಎಸ್. ನಾರಾಯಣ್ ನಿರ್ದೇಶನದಲ್ಲಿ ಅವರು ನಟಿಸಿರುವ `ಅಪ್ಪಯ್ಯ~ ನಿರೀಕ್ಷೆ ಮೂಡಿಸಿರುವ, ಬಿಡುಗಡೆಯಾಗಬೇಕಿರುವ ಚಿತ್ರ.<br /> <br /> ಕಿಟ್ಟಿ ಮತ್ತು ಪತ್ನಿ ಭಾವನಾ ನಿರ್ಮಿಸಿರುವ ಮಕ್ಕಳ ಸಿನಿಮಾ `ಬಾಲ್ಪೆನ್~ ಮೇ ತಿಂಗಳ ಮೊದಲ ವಾರದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈ ಎರಡು ಸಂಭ್ರಮದ ಘಳಿಗೆ ನಡುವೆಯೂ ಅವರಲ್ಲಿ ನೋವು ತುಂಬಿಕೊಳ್ಳಲು ಕಾರಣ ಎಸ್.ನಾರಾಯಣ್.<br /> <br /> ನಿರ್ಮಾಪಕ-ನಿರ್ದೇಶಕ ಎಸ್. ನಾರಾಯಣ್ ಇನ್ನು ಮುಂದೆ ಚಿತ್ರ ಮಾಡುವುದಿಲ್ಲ ಎಂದು ಘೋಷಿಸಿರುವುದು ಚರ್ಚೆಯಲ್ಲಿರುವ ಸುದ್ದಿ. ತಮ್ಮ ಈ ನಿರ್ಧಾರಕ್ಕೆ ಅವರು ನೀಡಿರುವ ಕಾರಣಗಳಲ್ಲಿ ನಾಯಕರ ಅಸಹಕಾರವೂ ಒಂದು. ಈ ಕಾರಣವೇ ಕಿಟ್ಟಿ ಅಸಮಾಧಾನಕ್ಕೆ ಮೂಲ. <br /> <br /> ನಾರಾಯಣ್ ಚಿತ್ರರಂಗದಿಂದ ಬೇಸತ್ತುಕೊಂಡು ಅದರಿಂದ ಹಿಂದೆ ಸರಿಯಲು ನಿರ್ಧರಿಸಿದ್ದರೆ ಈ ರೀತಿ ಬಹಿರಂಗವಾಗಿ ಹೇಳಿಕೊಳ್ಳಬಾರದಿತ್ತು. ಸಿನಿಮಾ ಮಾಡದೇ ಸುಮ್ಮನಿರಬಹುದಾಗಿತ್ತು. ಅವರು ತೀರ್ಮಾನ ತೆಗೆದುಕೊಂಡ ಸಮಯವೂ ಸರಿಯಲ್ಲ ಎನ್ನುತ್ತಾರೆ ಕಿಟ್ಟಿ.<br /> <br /> ನಾಯಕರು ಸರಿಯಾಗಿ ಸಹಕರಿಸುತ್ತಿಲ್ಲ ಎಂದರೆ ನಾನು ಅಥವಾ `ಮುಂಜಾನೆ~ಯಲ್ಲಿ ಗಣೇಶ್ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಮ್ಮಿಂದ ಎಂದೂ ತೊಂದರೆಯಾಗಿಲ್ಲ. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಹಾಜರಾಗಿದ್ದೇನೆ. ಚಿತ್ರದಲ್ಲಿ ಬದ್ಧತೆಯಿಂದ ತೊಡಗಿಕೊಂಡಿದ್ದೇನೆ. ಹೀಗಿದ್ದೂ ನಾರಾಯಣ್ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎನ್ನುವುದು ಅವರ ಬೇಸರ.<br /> <br /> `ಅಪ್ಪಯ್ಯ~ ಚಿತ್ರದ ಬಿಡುಗಡೆಗೆ ಇನ್ನೂ ಸಮಯವಿದೆ. ಪ್ರಚಾರ ಕಾರ್ಯಗಳೂ ನಡೆಯಬೇಕಿದೆ. ಹೀಗಿರುವಾಗ ಎಸ್. ನಾರಾಯಣ್ ಅವರ ಈ ನಡವಳಿಕೆ ಚಿತ್ರದ ಮೇಲೆ ಮಾತ್ರವಲ್ಲ ತಮ್ಮ ಮೇಲೂ ಪರಿಣಾಮ ಬೀರಲಿದೆ ಎಂಬುದು ಕಿಟ್ಟಿ ಕಳವಳ.<br /> <br /> ಸತತ ಸೋಲುಗಳಿಂದ ಕಂಗೆಟ್ಟಿರುವ ಎಸ್.ನಾರಾಯಣ್ ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿರುವುದಕ್ಕೆ ಕಾರಣಗಳು ಹಲವು. ಅಪಾರ ಭರವಸೆ ಇಟ್ಟುಕೊಂಡಿದ್ದ `ಶೈಲು~ ಅಷ್ಟೇನೂ ಯಶ ಕಾಣಲಿಲ್ಲ. ಅದರ ಬೆನ್ನಲ್ಲೇ ಮತ್ತೆ ಗಣೇಶ್ರನ್ನು ಹಾಕಿಕೊಂಡು ತೆರೆಗೆ ತಂದ `ಮುಂಜಾನೆ~ ಜನರಿಗೆ ಮುಂಜಾವಿನ ಪುಳಕ ನೀಡಲಿಲ್ಲ. ಮಗ ಪಂಕಜ್ರನ್ನು ನಾಯಕನನ್ನಾಗಿ ಬೆಳೆಸುವ ಪ್ರಯತ್ನಗಳೂ ಕೈ ಹಿಡಿಯಲಿಲ್ಲ.<br /> <br /> ಹಾಗೆಂದು ನಾರಾಯಣ್ ಖಾಲಿ ಕುಳಿತಿರಲಿಲ್ಲ. ಶ್ರೀನಗರ ಕಿಟ್ಟಿ ಮತ್ತು ಭಾಮಾ ನಟಿಸಿರುವ `ಅಪ್ಪಯ್ಯ~ ಚಿತ್ರೀಕರಣವನ್ನೂ ಅಷ್ಟೇ ವೇಗವಾಗಿ ನಡೆಸಿ, `ಚೌಡಯ್ಯ~ಕ್ಕೂ ತರಾತುರಿಯಲ್ಲಿಯೇ ಆ್ಯಕ್ಷನ್ ಕಟ್ ಹೇಳಲು ಪ್ರಾರಂಭಿಸಿದ್ದರು.<br /> <br /> ಲಕ್ಷ್ಮೀ ನರಸಿಂಹ, ನೆನಪಿದೆಯಾ ಓ ಗೆಳತಿ, ದೊಡ್ ಮನುಷ್ಯ, ದಾಂಡಿಗ, ಹೀಗೆ ನಾರಾಯಣ್ ಕುಲುಮೆಯಿಂದ ಹೊರಬರಬೇಕಾದ ಚಿತ್ರಗಳ ದೀರ್ಘ ಪಟ್ಟಿಯೇ ಇದೆ. ಜನರಿಗೆ ಬೇಡವಾಗಿದ್ದೇನೆಂದು ನಾರಾಯಣ್ ನೋವಿನಿಂದ ಚಿತ್ರರಂಗದಿಂದ ದೂರಸರಿಯಲು ಹೊರಟಿರುವುದರಿಂದ ಈ ಚಿತ್ರಗಳ ಗತಿ ಡೋಲಾಯಮಾನ. <br /> <br /> ಯಾರಾದರೂ ಅವಕಾಶ ಕೊಟ್ಟರೆ ನಟಿಸುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ. ಅವರ ನಿರ್ಧಾರದಿಂದ ಅವರನ್ನೇ ನೆಚ್ಚಿಕೊಂಡಿದ್ದವರ ಬದುಕು ಅತಂತ್ರವಾಗಿದ್ದರೆ, ಅವರ ಮಗ ಪಂಕಜ್ ಸಿನಿಮಾ ಭವಿಷ್ಯವೂ ತೂಗೂಯ್ಯಾಲೆಯಲ್ಲಿದೆ. ಮೊದಲ ಬಾರಿಗೆ ಮಾತೃ ಸಂಸ್ಥೆಯ ಹೊರಗಿನ ಬ್ಯಾನರ್ನಲ್ಲಿ ನಟಿಸುತ್ತಿರುವ `ರಣ~ ಪಂಕಜ್ ಭವಿಷ್ಯವನ್ನು ನಿರ್ಧರಿಸಲಿದೆ.<br /> <br /> ನಾರಾಯಣ್ ಚಿತ್ರರಂಗದಿಂದ ದೂರವಾದರೆ ಮುಂದೇನು ಎಂಬ ಪ್ರಶ್ನೆಗಳಿಗೆ ಉತ್ತರ ಕಿರುತೆರೆಯಲ್ಲಿ ಸಿಗುವ ಸಾಧ್ಯತೆಗಳಿವೆ. ಕಿರುತೆರೆ ಅವರಿಗೆ ಹೊಸತಲ್ಲ. `ಪಾರ್ವತಿ~, `ಭಾಗೀರಥಿ~, `ಸುಮತಿ~, `ಅಂಬಿಕಾ~ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಾರಾಯಣ್ ಬೆಳ್ಳಿತೆರೆಯಿಂದ ಮತ್ತೊಮ್ಮೆ ಕಿರುತೆರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>