<p>ಹಿಂದೊಮ್ಮೆ ತೆಲುಗು ನಟ ಚಿರಂಜೀವಿಯನ್ನು ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದರು. ಅದು ಸ್ನೇಹಬಂಧನ! ರವಿಚಂದ್ರನ್ ಮಾಡಿದಂತಹ ಪ್ರಯತ್ನವನ್ನು ಈಗ ವೀರೇಂದ್ರಬಾಬು ಮಾಡುತ್ತಿದ್ದಾರೆ. ಕಥೆ, ನಿರ್ದೇಶನ, ನಿರ್ಮಾಣ ಹಾಗೂ ನಾಯಕನಟ- ಹೀಗೆ, ವೀರೇಂದ್ರಬಾಬು ಅವರು ಬಹುಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ‘ಸ್ವಯಂಕೃಷಿ’ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ಚಿರಂಜೀವಿ ನಟಿಸುವುದು ಈಗ ಹೆಚ್ಚೂ ಕಡಿಮೆ ಖಚಿತವಾಗಿದೆಯಂತೆ.<br /> <br /> ‘ನಾನೇಕೆ ನಿಮ್ಮ ಚಿತ್ರದಲ್ಲಿ ನಟಿಸಬೇಕು?’ <br /> ತಮ್ಮ ಚಿತ್ರದಲ್ಲಿ ನಟಿಸುವಂತೆ ಕೋರಿದ ವೀರೇಂದ್ರಬಾಬು ಅವರನ್ನು ಚಿರಂಜೀವಿ ಕೇಳಿದ ಪ್ರಶ್ನೆಯಿದು. ಇದಕ್ಕೆ ಬಾಬು ಅವರು ನೀಡಿದ ಉತ್ತರ: ‘ನೀವು (ಚಿರಂಜೀವಿ) ನಟಿಸಿದ ಸ್ವಯಂಕೃಷಿ ತೆಲುಗು ಚಿತ್ರದ ಹೆಸರನ್ನೇ ನಮ್ಮ ಚಿತ್ರಕ್ಕೂ ಇಟ್ಟಿದ್ದೇವೆ. ಜೀವನದಲ್ಲಿ ಸೋತು ಜಿಗುಪ್ಸೆ ಹೊಂದಿರುವ ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದೆಂಬ ಸಂದೇಶ ನಮ್ಮ ಚಿತ್ರದಲ್ಲಿದೆ.<br /> <br /> ಹಾಗಾಗಿ ಈ ಚಿತ್ರದಲ್ಲಿ ನೀವು ನಟಿಸಬೇಕು’. ಈ ವಿವರಣೆ ಚಿರಂಜೀವಿ ಅವರಿಗೆ ಸಮಾಧಾನ ಕೊಟ್ಟಿದ್ದು, ಅವರು ನಟಿಸಲು ಹೂಂ ಎಂದಿದ್ದಾರಂತೆ. ಅಂದಹಾಗೆ, ಕೆ.ವಿಶ್ವನಾಥ್ ನಿರ್ದೇಶಿಸಿದ್ದ ‘ಸ್ವಯಂಕೃಷಿ’ ಚಿತ್ರದ ನಟನೆಗಾಗಿ ಚಿರಂಜೀವಿ ಅವರಿಗೆ ಫಿಲಂಪೇರ್ ಹಾಗೂ ನಂದಿ ಪ್ರಶಸ್ತಿಗಳು ಲಭಿಸಿದ್ದವು. ಕನ್ನಡದ ‘ಸ್ವಯಂಕೃಷಿ’ ಚಿತ್ರದಲ್ಲಿ ಮತ್ತೊಂದು ವಿಶೇಷವೂ ಇದೆ, ಅಂಬರೀಷ್ ರೂಪದಲ್ಲಿ. ಈ ಚಿತ್ರದಲ್ಲಿನ ಮುಖ್ಯಮಂತ್ರಿ ಪಾತ್ರವನ್ನು ಅಂಬರೀಶ್ ಮಾಡಿದ್ದಾರಂತೆ. <br /> <br /> ಚಿರಂಜೀವಿ ಸೆಕೆಂಡ್ ಇನಿಂಗ್ಸ್!<br /> ಉಮಾಶ್ರೀ, ಸುಮನ್, ಬಿಯಾಂಕಾ ದೇಸಾಯಿ, ತಮನ್ನಾ, ಮುಮೈತ್ಖಾನ್ ತಾರಾಗಣದಲ್ಲಿ ಎದ್ದುಕಾಣುವ ಹೆಸರುಗಳು. <br /> ಆದರ್ಶ, ಹಾಸ್ಯ, ಪ್ರೇಮಕಥೆ ಒಳಗೊಂಡಿರುವ ಈ ಚಿತ್ರ 92 ದಿನಗಳ ಚಿತ್ರೀಕರಣ ಪೂರೈಸಿದೆ. ಇದರ ಹಾಡುಗಳ ಸಿ.ಡಿ. ಬಿಡುಗಡೆಯ ಕಾರ್ಯಕ್ರಮ ಪ್ರತಿ ಜಿಲ್ಲೆಯಲ್ಲೂ ಮಾದಲು ವೀರೇಂದ್ರಬಾಬು ಉದ್ದೇಶಿಸಿದ್ದು, ಈಗಾಗಲೇ ಏಳು ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.<br /> <br /> ಚಿತ್ರದ ಸಂಗೀತ ಅಭಿಮಾನ್ರಾಯ್ ಅವರದ್ದು. ನಾಲ್ಕು ಹಾಡುಗಳ ಚಿತ್ರೀಕರಣವನ್ನು ತಾಜ್ಮಹಲ್, ಕೆಂಪುಕೋಟೆ, ಮಲ್ಪೆ ಬೀಚ್, ಬೆಂಗಳೂರು ಮೊದಲಾದೆಡೆ ಚಿತ್ರೀಕರಿಸಿದ್ದಾರಂತೆ. ಕೊನೆಯ ಹಾಡನ್ನು ತಮ್ಮ ಹುಟ್ಟೂರು ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯಲ್ಲಿ ಬಾಬು ಇದೀಗ ಚಿತ್ರೀಕರಿಸುತ್ತಿದ್ದಾರೆ. ಈ ಚಿತ್ರೀಕರಣದ ಸಂದರ್ಭದಲ್ಲೇ ಮಾತಿಗೆ ಸಿಕ್ಕ ಅವರು ಕನ್ನಡಕ್ಕೆ ಚಿರಂಜೀವಿ ಪುನರಾಗಮನದ ಸುದ್ದಿಸಂತಸ ಹಂಚಿಕೊಂಡರು.<br /> <br /> ‘ಸ್ವಯಂಕೃಷಿ’ ಚಿತ್ರ ‘ಫ್ಯೂಚರ್ ಬೆಂಗಳೂರು’ ಚಿತ್ರಣವೂ ಹೌದಂತೆ. ಕ್ರೈಮ್, ಮೂಲಭೂತ ಸೌಲಭ್ಯ ಕೊರತೆ, ಟ್ರಾಫಿಕ್ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಬೆಂಗಳೂರಿಗಾಗಿ ಭವಿಷ್ಯದಲ್ಲಿ ಉತ್ತಮವಾಗಿ ಯೋಜನೆ ರೂಪಿಸಲು ಅಗತ್ಯವಾದ ದೂರದೃಷ್ಟಿಯ ಸಂದೇಶ ಚಿತ್ರದಲ್ಲಿದೆಯಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿಂದೊಮ್ಮೆ ತೆಲುಗು ನಟ ಚಿರಂಜೀವಿಯನ್ನು ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದರು. ಅದು ಸ್ನೇಹಬಂಧನ! ರವಿಚಂದ್ರನ್ ಮಾಡಿದಂತಹ ಪ್ರಯತ್ನವನ್ನು ಈಗ ವೀರೇಂದ್ರಬಾಬು ಮಾಡುತ್ತಿದ್ದಾರೆ. ಕಥೆ, ನಿರ್ದೇಶನ, ನಿರ್ಮಾಣ ಹಾಗೂ ನಾಯಕನಟ- ಹೀಗೆ, ವೀರೇಂದ್ರಬಾಬು ಅವರು ಬಹುಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ‘ಸ್ವಯಂಕೃಷಿ’ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ಚಿರಂಜೀವಿ ನಟಿಸುವುದು ಈಗ ಹೆಚ್ಚೂ ಕಡಿಮೆ ಖಚಿತವಾಗಿದೆಯಂತೆ.<br /> <br /> ‘ನಾನೇಕೆ ನಿಮ್ಮ ಚಿತ್ರದಲ್ಲಿ ನಟಿಸಬೇಕು?’ <br /> ತಮ್ಮ ಚಿತ್ರದಲ್ಲಿ ನಟಿಸುವಂತೆ ಕೋರಿದ ವೀರೇಂದ್ರಬಾಬು ಅವರನ್ನು ಚಿರಂಜೀವಿ ಕೇಳಿದ ಪ್ರಶ್ನೆಯಿದು. ಇದಕ್ಕೆ ಬಾಬು ಅವರು ನೀಡಿದ ಉತ್ತರ: ‘ನೀವು (ಚಿರಂಜೀವಿ) ನಟಿಸಿದ ಸ್ವಯಂಕೃಷಿ ತೆಲುಗು ಚಿತ್ರದ ಹೆಸರನ್ನೇ ನಮ್ಮ ಚಿತ್ರಕ್ಕೂ ಇಟ್ಟಿದ್ದೇವೆ. ಜೀವನದಲ್ಲಿ ಸೋತು ಜಿಗುಪ್ಸೆ ಹೊಂದಿರುವ ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದೆಂಬ ಸಂದೇಶ ನಮ್ಮ ಚಿತ್ರದಲ್ಲಿದೆ.<br /> <br /> ಹಾಗಾಗಿ ಈ ಚಿತ್ರದಲ್ಲಿ ನೀವು ನಟಿಸಬೇಕು’. ಈ ವಿವರಣೆ ಚಿರಂಜೀವಿ ಅವರಿಗೆ ಸಮಾಧಾನ ಕೊಟ್ಟಿದ್ದು, ಅವರು ನಟಿಸಲು ಹೂಂ ಎಂದಿದ್ದಾರಂತೆ. ಅಂದಹಾಗೆ, ಕೆ.ವಿಶ್ವನಾಥ್ ನಿರ್ದೇಶಿಸಿದ್ದ ‘ಸ್ವಯಂಕೃಷಿ’ ಚಿತ್ರದ ನಟನೆಗಾಗಿ ಚಿರಂಜೀವಿ ಅವರಿಗೆ ಫಿಲಂಪೇರ್ ಹಾಗೂ ನಂದಿ ಪ್ರಶಸ್ತಿಗಳು ಲಭಿಸಿದ್ದವು. ಕನ್ನಡದ ‘ಸ್ವಯಂಕೃಷಿ’ ಚಿತ್ರದಲ್ಲಿ ಮತ್ತೊಂದು ವಿಶೇಷವೂ ಇದೆ, ಅಂಬರೀಷ್ ರೂಪದಲ್ಲಿ. ಈ ಚಿತ್ರದಲ್ಲಿನ ಮುಖ್ಯಮಂತ್ರಿ ಪಾತ್ರವನ್ನು ಅಂಬರೀಶ್ ಮಾಡಿದ್ದಾರಂತೆ. <br /> <br /> ಚಿರಂಜೀವಿ ಸೆಕೆಂಡ್ ಇನಿಂಗ್ಸ್!<br /> ಉಮಾಶ್ರೀ, ಸುಮನ್, ಬಿಯಾಂಕಾ ದೇಸಾಯಿ, ತಮನ್ನಾ, ಮುಮೈತ್ಖಾನ್ ತಾರಾಗಣದಲ್ಲಿ ಎದ್ದುಕಾಣುವ ಹೆಸರುಗಳು. <br /> ಆದರ್ಶ, ಹಾಸ್ಯ, ಪ್ರೇಮಕಥೆ ಒಳಗೊಂಡಿರುವ ಈ ಚಿತ್ರ 92 ದಿನಗಳ ಚಿತ್ರೀಕರಣ ಪೂರೈಸಿದೆ. ಇದರ ಹಾಡುಗಳ ಸಿ.ಡಿ. ಬಿಡುಗಡೆಯ ಕಾರ್ಯಕ್ರಮ ಪ್ರತಿ ಜಿಲ್ಲೆಯಲ್ಲೂ ಮಾದಲು ವೀರೇಂದ್ರಬಾಬು ಉದ್ದೇಶಿಸಿದ್ದು, ಈಗಾಗಲೇ ಏಳು ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.<br /> <br /> ಚಿತ್ರದ ಸಂಗೀತ ಅಭಿಮಾನ್ರಾಯ್ ಅವರದ್ದು. ನಾಲ್ಕು ಹಾಡುಗಳ ಚಿತ್ರೀಕರಣವನ್ನು ತಾಜ್ಮಹಲ್, ಕೆಂಪುಕೋಟೆ, ಮಲ್ಪೆ ಬೀಚ್, ಬೆಂಗಳೂರು ಮೊದಲಾದೆಡೆ ಚಿತ್ರೀಕರಿಸಿದ್ದಾರಂತೆ. ಕೊನೆಯ ಹಾಡನ್ನು ತಮ್ಮ ಹುಟ್ಟೂರು ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯಲ್ಲಿ ಬಾಬು ಇದೀಗ ಚಿತ್ರೀಕರಿಸುತ್ತಿದ್ದಾರೆ. ಈ ಚಿತ್ರೀಕರಣದ ಸಂದರ್ಭದಲ್ಲೇ ಮಾತಿಗೆ ಸಿಕ್ಕ ಅವರು ಕನ್ನಡಕ್ಕೆ ಚಿರಂಜೀವಿ ಪುನರಾಗಮನದ ಸುದ್ದಿಸಂತಸ ಹಂಚಿಕೊಂಡರು.<br /> <br /> ‘ಸ್ವಯಂಕೃಷಿ’ ಚಿತ್ರ ‘ಫ್ಯೂಚರ್ ಬೆಂಗಳೂರು’ ಚಿತ್ರಣವೂ ಹೌದಂತೆ. ಕ್ರೈಮ್, ಮೂಲಭೂತ ಸೌಲಭ್ಯ ಕೊರತೆ, ಟ್ರಾಫಿಕ್ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಬೆಂಗಳೂರಿಗಾಗಿ ಭವಿಷ್ಯದಲ್ಲಿ ಉತ್ತಮವಾಗಿ ಯೋಜನೆ ರೂಪಿಸಲು ಅಗತ್ಯವಾದ ದೂರದೃಷ್ಟಿಯ ಸಂದೇಶ ಚಿತ್ರದಲ್ಲಿದೆಯಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>