<p>ಸಿನಿಮಾ ಮಂದಿ ಹೊಸತಾಗಿ ಏನನ್ನಾದರೂ ಮಾಡಬೇಕು ಎಂದು ಯೋಚಿಸುತ್ತಲೇ ಇರುತ್ತಾರೆ. ಚಿತ್ರ ಬಿಡುಗಡೆಗೆ ಮುನ್ನ ನಡೆಯುವ ಬಹುತೇಕ ಚಟುವಟಿಕೆಗಳಲ್ಲಿ ಅವರು ಹೊಸ ರೀತಿಯಲ್ಲಿ ಯೋಚಿಸುತ್ತಿರುವ ಸೂಚನೆಗಳನ್ನಂತೂ ಕೊಡುತ್ತಾರೆ. <br /> <br /> ಬಿಡುಗಡೆಯ ನಂತರ ಚಿತ್ರದ ಹಣೆಬರಹ ಏನಾಗುತ್ತದೋ, ಬೇರೆ ಮಾತು.`ತೂಫಾನ್~ ಚಿತ್ರದ ನಿರ್ದೇಶಕ ಸ್ಮೈಲ್ ಸೀನು ಕೂಡ `ಡಿಫರೆಂಟ್~ ಆಗಿ ಏನನ್ನಾದರೂ ಮಾಡಬೇಕು ಎಂಬ ಉಮೇದು ಇರುವಂಥವರು.ಚಿತ್ರದ ಹಾಡುಗಳ ಆಡಿಯೋ ಸೀಡಿಯನ್ನು ಮೀನಿನ ಜಾಡಿಯಲ್ಲಿ ಇಟ್ಟಿದ್ದೇ ಇದಕ್ಕೆ ಸಾಕ್ಷಿ. <br /> <br /> `ತೂಫಾನ್~ನಲ್ಲಿ ಅಭಿನಯಿಸಿರುವ ಆಕರ್ಷ್ ಮೀನಿನ ಟ್ಯಾಂಕೊಳಗೆ ಕೈಯಿಟ್ಟದ್ದೇ ಮೀನುಗಳು ಗಲಿಬಿಲಿಗೊಂಡು ತುಸು ದೂರಕ್ಕೆ ಈಜಿದವು. ಅಲ್ಲಿಂದ ಸೀಡಿ ಹೊರಗೆ ತೆಗೆದ ಆಕರ್ಷ್ ಏನೋ ಸಾಧನೆ ಮಾಡಿದಂತೆ ನಿಂದರು. <br /> <br /> ಸಾಮಾನ್ಯವಾಗಿ ಚಿತ್ರದ ಬಜೆಟ್ ಎಷ್ಟು ಎಂಬುದನ್ನು ನಿರ್ದೇಶಕರು ಹೇಳುವುದೇ ಇಲ್ಲ. ಸೀನು ಇದಕ್ಕೆ ಅಪವಾದ. `ತೂಫಾನ್~ಗಾಗಿ ಇದುವರೆಗೆ ಎರಡು ಕೋಟಿ ರೂಪಾಯಿಯನ್ನು ಅವರು ಖರ್ಚು ಮಾಡಿಸಿದ್ದಾರೆ. ಬಿಡುಗಡೆ ಹೊತ್ತಿಗೆ ಇನ್ನೂ ಒಂದು ಕೋಟಿ ಬೇಕಂತೆ. ನಿರ್ಮಾಪಕ ಜಡೇಗೌಡರು ಎರಡು ವರ್ಷ ಗಣಿ ಮರ್ಚೆಂಟ್ ಆಗಿದ್ದವರು. ರಿಯಲ್ ಎಸ್ಟೇಟ್ನಲ್ಲಿ ಕೂಡ ಕೈಯಾಡಿಸಿದ್ದಾರೆ.<br /> <br /> ಸದ್ಯಕ್ಕೆ ಗ್ರಾನೈಟ್ ವ್ಯಾಪಾರದಲ್ಲಿ ತೊಡಗಿದ್ದಾರೆ. ವ್ಯವಹಾರ ದೊಡ್ಡದಾಗಿರುವುದರಿಂದ ಮೂರು ಕೋಟಿ ಅವರಿಗೆ ಅಂಥ ದೊಡ್ಡ ಮೊತ್ತವೇನೂ ಅಲ್ಲ. <br /> ಚಿತ್ರರಂಗಕ್ಕೆ ತಾವೇ ಇಷ್ಟಪಟ್ಟು ಬಂದಿರುವುದಾಗಿ ಹೇಳಿದ ಗೌಡರಿಗೆ ಒಳ್ಳೆಯ ಸಿನಿಮಾ ಕೊಡುವ ಹಂಬಲವಿದೆ. 45 ದಿನಗಳ ಚಿತ್ರೀಕರಣವನ್ನು ಅವರು ಆಸ್ಥೆಯಿಂದ ನಿಗಾ ಮಾಡಿದ್ದಾರೆ. <br /> <br /> ನಾಯಕ ಯಶಸ್ಗೆ ಇದು ನಾಲ್ಕನೇ ಚಿತ್ರ. ಇದರಲ್ಲಾದರೂ ಗೆಲುವು ಸಿಕ್ಕೀತೇ ಎಂಬ ಆಸೆಗಣ್ಣು ಅವರದ್ದು. ಬಲಗಣ್ಣಿನ ಬಳಿ ಪೆಟ್ಟಾಗಿದ್ದ ಕಾರಣ ಕೆಲವು ದಿನ ಚಿತ್ರೀಕರಣದಲ್ಲಿ ತೊಡಗುವುದು ಅವರಿಗೆ ಕಷ್ಟವಾಗಿತ್ತಂತೆ. ಅದೇ ಕಾರಣಕ್ಕೆ ಚಿತ್ರೀಕರಣದಲ್ಲಿ ತುಸು ವಿಳಂಬವಾಯಿತು ಎಂದು ಸೀನು ಹೇಳಿದರು.<br /> <br /> `ತೂಫಾನ್~ನಲ್ಲಿ ಇಪ್ಪತ್ತು ನಿಮಿಷಗಳ ಅವಧಿಯ ಕ್ಲೈಮ್ಯಾಕ್ಸ್ ಇರುತ್ತದೆ. ನಿರ್ದೇಶಕರ ಪ್ರಕಾರ ಇದು ಕೂಡ ಹೊಸತನ! ಎರಡು ಬಿಟ್ ಹಾಗೂ ಒಂದು ಹಾಡಿನ ಚಿತ್ರೀಕರಣವಿನ್ನೂ ಬಾಕಿ ಇದೆ. <br /> <br /> ಚಿತ್ರದ ಗೀತೆಗಳಿಗೆ ಎಲ್ವಿನ್ ಜೋಶ್ವಾ ಮಟ್ಟು ಹಾಕಿದ್ದಾರೆ. ಚೆನ್ನೈನಲ್ಲಿ ರೀರೆಕಾರ್ಡಿಂಗ್ ಮಾಡಿದ್ದು, ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶ ಅವರದ್ದು. ಚಿತ್ರಕ್ಕೆ ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಅವರಿಗೆ ಖುದ್ದು ಗಾಯಕ ಬಾಲಸುಬ್ರಹ್ಮಣ್ಯಂ ಹೊಗಳಿಕೆಯ ಸರ್ಟಿಫಿಕೇಟ್ ನೀಡಿದ್ದು ಖುಷಿ ಕೊಟ್ಟಿದೆ. <br /> <br /> ಆನಂದ್ ಆಡಿಯೋ `ತೂಫಾನ್~ ಗೀತೆಗಳನ್ನು ಮಾರುಕಟ್ಟೆಗೆ ತಂದಿದೆ. ಚಿತ್ರದ ತಾರಾಬಳಗದಲ್ಲಿರುವ ರವೀಂದ್ರನಾಥ್, ವಿದ್ಯಾಮೂರ್ತಿ ಮೊದಲಾದವರು ಒಳ್ಳೆಯ ಸಿನಿಮಾ ಮಾಡುವ ನಿರ್ಮಾಪಕರ ಉಮೇದನ್ನು ಮೆಚ್ಚಿಕೊಂಡು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿನಿಮಾ ಮಂದಿ ಹೊಸತಾಗಿ ಏನನ್ನಾದರೂ ಮಾಡಬೇಕು ಎಂದು ಯೋಚಿಸುತ್ತಲೇ ಇರುತ್ತಾರೆ. ಚಿತ್ರ ಬಿಡುಗಡೆಗೆ ಮುನ್ನ ನಡೆಯುವ ಬಹುತೇಕ ಚಟುವಟಿಕೆಗಳಲ್ಲಿ ಅವರು ಹೊಸ ರೀತಿಯಲ್ಲಿ ಯೋಚಿಸುತ್ತಿರುವ ಸೂಚನೆಗಳನ್ನಂತೂ ಕೊಡುತ್ತಾರೆ. <br /> <br /> ಬಿಡುಗಡೆಯ ನಂತರ ಚಿತ್ರದ ಹಣೆಬರಹ ಏನಾಗುತ್ತದೋ, ಬೇರೆ ಮಾತು.`ತೂಫಾನ್~ ಚಿತ್ರದ ನಿರ್ದೇಶಕ ಸ್ಮೈಲ್ ಸೀನು ಕೂಡ `ಡಿಫರೆಂಟ್~ ಆಗಿ ಏನನ್ನಾದರೂ ಮಾಡಬೇಕು ಎಂಬ ಉಮೇದು ಇರುವಂಥವರು.ಚಿತ್ರದ ಹಾಡುಗಳ ಆಡಿಯೋ ಸೀಡಿಯನ್ನು ಮೀನಿನ ಜಾಡಿಯಲ್ಲಿ ಇಟ್ಟಿದ್ದೇ ಇದಕ್ಕೆ ಸಾಕ್ಷಿ. <br /> <br /> `ತೂಫಾನ್~ನಲ್ಲಿ ಅಭಿನಯಿಸಿರುವ ಆಕರ್ಷ್ ಮೀನಿನ ಟ್ಯಾಂಕೊಳಗೆ ಕೈಯಿಟ್ಟದ್ದೇ ಮೀನುಗಳು ಗಲಿಬಿಲಿಗೊಂಡು ತುಸು ದೂರಕ್ಕೆ ಈಜಿದವು. ಅಲ್ಲಿಂದ ಸೀಡಿ ಹೊರಗೆ ತೆಗೆದ ಆಕರ್ಷ್ ಏನೋ ಸಾಧನೆ ಮಾಡಿದಂತೆ ನಿಂದರು. <br /> <br /> ಸಾಮಾನ್ಯವಾಗಿ ಚಿತ್ರದ ಬಜೆಟ್ ಎಷ್ಟು ಎಂಬುದನ್ನು ನಿರ್ದೇಶಕರು ಹೇಳುವುದೇ ಇಲ್ಲ. ಸೀನು ಇದಕ್ಕೆ ಅಪವಾದ. `ತೂಫಾನ್~ಗಾಗಿ ಇದುವರೆಗೆ ಎರಡು ಕೋಟಿ ರೂಪಾಯಿಯನ್ನು ಅವರು ಖರ್ಚು ಮಾಡಿಸಿದ್ದಾರೆ. ಬಿಡುಗಡೆ ಹೊತ್ತಿಗೆ ಇನ್ನೂ ಒಂದು ಕೋಟಿ ಬೇಕಂತೆ. ನಿರ್ಮಾಪಕ ಜಡೇಗೌಡರು ಎರಡು ವರ್ಷ ಗಣಿ ಮರ್ಚೆಂಟ್ ಆಗಿದ್ದವರು. ರಿಯಲ್ ಎಸ್ಟೇಟ್ನಲ್ಲಿ ಕೂಡ ಕೈಯಾಡಿಸಿದ್ದಾರೆ.<br /> <br /> ಸದ್ಯಕ್ಕೆ ಗ್ರಾನೈಟ್ ವ್ಯಾಪಾರದಲ್ಲಿ ತೊಡಗಿದ್ದಾರೆ. ವ್ಯವಹಾರ ದೊಡ್ಡದಾಗಿರುವುದರಿಂದ ಮೂರು ಕೋಟಿ ಅವರಿಗೆ ಅಂಥ ದೊಡ್ಡ ಮೊತ್ತವೇನೂ ಅಲ್ಲ. <br /> ಚಿತ್ರರಂಗಕ್ಕೆ ತಾವೇ ಇಷ್ಟಪಟ್ಟು ಬಂದಿರುವುದಾಗಿ ಹೇಳಿದ ಗೌಡರಿಗೆ ಒಳ್ಳೆಯ ಸಿನಿಮಾ ಕೊಡುವ ಹಂಬಲವಿದೆ. 45 ದಿನಗಳ ಚಿತ್ರೀಕರಣವನ್ನು ಅವರು ಆಸ್ಥೆಯಿಂದ ನಿಗಾ ಮಾಡಿದ್ದಾರೆ. <br /> <br /> ನಾಯಕ ಯಶಸ್ಗೆ ಇದು ನಾಲ್ಕನೇ ಚಿತ್ರ. ಇದರಲ್ಲಾದರೂ ಗೆಲುವು ಸಿಕ್ಕೀತೇ ಎಂಬ ಆಸೆಗಣ್ಣು ಅವರದ್ದು. ಬಲಗಣ್ಣಿನ ಬಳಿ ಪೆಟ್ಟಾಗಿದ್ದ ಕಾರಣ ಕೆಲವು ದಿನ ಚಿತ್ರೀಕರಣದಲ್ಲಿ ತೊಡಗುವುದು ಅವರಿಗೆ ಕಷ್ಟವಾಗಿತ್ತಂತೆ. ಅದೇ ಕಾರಣಕ್ಕೆ ಚಿತ್ರೀಕರಣದಲ್ಲಿ ತುಸು ವಿಳಂಬವಾಯಿತು ಎಂದು ಸೀನು ಹೇಳಿದರು.<br /> <br /> `ತೂಫಾನ್~ನಲ್ಲಿ ಇಪ್ಪತ್ತು ನಿಮಿಷಗಳ ಅವಧಿಯ ಕ್ಲೈಮ್ಯಾಕ್ಸ್ ಇರುತ್ತದೆ. ನಿರ್ದೇಶಕರ ಪ್ರಕಾರ ಇದು ಕೂಡ ಹೊಸತನ! ಎರಡು ಬಿಟ್ ಹಾಗೂ ಒಂದು ಹಾಡಿನ ಚಿತ್ರೀಕರಣವಿನ್ನೂ ಬಾಕಿ ಇದೆ. <br /> <br /> ಚಿತ್ರದ ಗೀತೆಗಳಿಗೆ ಎಲ್ವಿನ್ ಜೋಶ್ವಾ ಮಟ್ಟು ಹಾಕಿದ್ದಾರೆ. ಚೆನ್ನೈನಲ್ಲಿ ರೀರೆಕಾರ್ಡಿಂಗ್ ಮಾಡಿದ್ದು, ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶ ಅವರದ್ದು. ಚಿತ್ರಕ್ಕೆ ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಅವರಿಗೆ ಖುದ್ದು ಗಾಯಕ ಬಾಲಸುಬ್ರಹ್ಮಣ್ಯಂ ಹೊಗಳಿಕೆಯ ಸರ್ಟಿಫಿಕೇಟ್ ನೀಡಿದ್ದು ಖುಷಿ ಕೊಟ್ಟಿದೆ. <br /> <br /> ಆನಂದ್ ಆಡಿಯೋ `ತೂಫಾನ್~ ಗೀತೆಗಳನ್ನು ಮಾರುಕಟ್ಟೆಗೆ ತಂದಿದೆ. ಚಿತ್ರದ ತಾರಾಬಳಗದಲ್ಲಿರುವ ರವೀಂದ್ರನಾಥ್, ವಿದ್ಯಾಮೂರ್ತಿ ಮೊದಲಾದವರು ಒಳ್ಳೆಯ ಸಿನಿಮಾ ಮಾಡುವ ನಿರ್ಮಾಪಕರ ಉಮೇದನ್ನು ಮೆಚ್ಚಿಕೊಂಡು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>