ಸುದ್ದಿಗೋಷ್ಠಿ ಪರಸ್ಪರ ಹೊಗಳಿಕೆಯ ವೇದಿಕೆಯಾಗಿ ಮಾರ್ಪಟ್ಟಿತ್ತು. ಮಾತುಗಾರರ ಸಂತೆಯೇ ನೆರೆದಿದ್ದರಿಂದ ಸಿನಿಮೇತರ ಮಾತುಗಳಿಗೂ ಕೊರತೆಯಿರಲಿಲ್ಲ. ಸಿನಿಮಾ ಶೀರ್ಷಿಕೆ ಮತ್ತು ಸಿನಿಮಾ ಭಾಷೆಗೆ ಅನುಗುಣವಾಗಿ ಎಲ್ಲರೂ ಸರದಿಯಲ್ಲಿ `ದಾಸ್ವಾಳ' ಇಡುವುದರಲ್ಲಿ ಮಗ್ನರಾಗಿದ್ದರು ಎನ್ನಬಹುದು.
`ದಾಸ್ವಾಳ' ಚಿತ್ರದ ಮೂರು ಹಾಡುಗಳ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡ ಚಿತ್ರತಂಡ, ಅದುವರೆಗಿನ ಅನುಭವಗಳನ್ನು ಹಂಚಿಕೊಂಡಿತು. ಚಿತ್ರ ಅಂದುಕೊಂಡಂತೆ ಚೆನ್ನಾಗಿ ಮೂಡಿಬಂದಿದೆ ಎಂಬ ಆತ್ಮವಿಶ್ವಾಸದ ನುಡಿ ನಿರ್ದೇಶಕ ಎಂ.ಎಸ್, ರಮೇಶ್ ಅವರದ್ದು. ಆದರೆ ಚಿತ್ರೀಕರಣದ ಶುರುವಿನಿಂದಲೂ ಚಿತ್ರತಂಡದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡವರು ನಿರ್ಮಾಪಕ ಅಣಜಿ ನಾಗರಾಜ್.