<p>`ಎಲ್ಲೆಲ್ಲೋ ಓಡುವ ಮನಸೇ.. ಯಾಕಿಂಥ ಹುಚ್ಚುಚ್ಚು ಮನಸೇ..~- ಈ ಹಾಡನ್ನು ನೋಡಿದಾಗ ಅಲ್ಲಿ ನೃತ್ಯ ನಿರ್ದೇಶಕರ ಅಗತ್ಯ ಏನಿದೆ? ಎಂಬ ಪ್ರಶ್ನೆ ಸುಳಿದು ಹೋಗುತ್ತದೆ.<br /> <br /> `ಆದರೆ ಅಬ್ಬರದ ಹಾಡಿನಲ್ಲಿ ನೃತ್ಯ ನಿರ್ದೇಶಕರಿಗೆ ಇರುವಷ್ಟೇ ಪ್ರಾಮುಖ್ಯತೆ ಇಂಥ ನಿರ್ದಿಷ್ಟ ವಿಚಾರ ಇರುವ ಹಾಡುಗಳಿಗೂ ಇರುತ್ತದೆ~ ಎನ್ನುತ್ತಾರೆ ಮುರಳಿ. ಪ್ರಸ್ತುತ ಅವರು ಇಂಥ ಮಾಧುರ್ಯ ತುಂಬಿದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ.<br /> <br /> `ಮೆಲೋಡಿ ಹಾಡುಗಳಿಗೆ ನೃತ್ಯ ನಿರ್ದೇಶಕರ ಅಗತ್ಯ ಏನಿದೆ ಎನ್ನುತ್ತಾರೆ. ಆದರೆ ಒಂದು ಹಾಡನ್ನು ನಮಗೆ ವಹಿಸಿದ ಮೇಲೆ ಅದು ಹೇಗಿದ್ದರೂ ಅದಕ್ಕೆ ಅಗತ್ಯ ಇರುವ ಕಾಸ್ಟ್ಯೂಮ್ನಿಂದ ಹಿಡಿದು ಹಾಡು ಹೇಗೆ ರೂಪು ತಳೆಯಬೇಕು ಎನ್ನುವತನಕ ನಮ್ಮ ಸಹಕಾರ ಇರುತ್ತದೆ~ ಎನ್ನುತ್ತಾರೆ ಮುರಳಿ. <br /> <br /> ಮುರಳಿ ಅವರ ಊರು ಬೆಂಗಳೂರು. ಓದಿದ್ದು ಪಿಯುಸಿ. ಚಿಕ್ಕಂದಿನಿಂದ ಇದ್ದ ನೃತ್ಯ ಮಾಡುವ ಅವರ ಹವ್ಯಾಸವನ್ನು ಕುಟುಂಬ ಬೆಂಬಲಿಸಿತು. ಕನಸುಗಳನ್ನು ಹೊತ್ತ ಅವರು ಗಾಂಧಿನಗರದ ಹಾದಿ ಹಿಡಿದರು.<br /> <br /> ಮೊದಲ ಬಾರಿಗೆ `ಸಿಂಹದ ಮರಿ~ ಚಿತ್ರದ ಹಾಡಿನಲ್ಲಿ ಸಹನರ್ತಕನಾಗಿ ಹಾಜರಿ ಹಾಕಿದರು. ಫೈವ್ಸ್ಟಾರ್ ಗಣೇಶ್, ಮದನ್ ಹರಿಣಿ, ರಘು ಮುಂತಾದವರ ಬಳಿ ಸಹ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದರು. ಇದೀಗ ಸ್ವತಂತ್ರವಾಗಿ ನೃತ್ಯ ನಿರ್ದೇಶನದ ನೇತೃತ್ವ ವಹಿಸಿಕೊಂಡಿರುವ ಅವರಿಗೆ ವಿಭಿನ್ನ ರೀತಿಯ ನೃತ್ಯ ಪ್ರಯೋಗ ಮಾಡುವಾಸೆ.<br /> <br /> ಸಿನಿಮಾ ನೃತ್ಯ ನಿರ್ದೇಶನದೊಂದಿಗೆ `ಡಾನ್ಸ್ ವರ್ಲ್ಡ್~ ಹೆಸರಿನ ನೃತ್ಯ ಶಾಲೆಯನ್ನು ನಿರ್ವಹಿಸುತ್ತಿರುವ ಮುರಳಿ, ಅಲ್ಲಿ ಇಂದಿನ ಟ್ರೆಂಡ್ಗೆ ತಕ್ಕ ಡಾನ್ಸ್ ಕಲಿಸುತ್ತಾರಂತೆ. ಸಿನಿಮಾದಲ್ಲೂ ಅವಕಾಶಗಳನ್ನು ಪಡೆಯುತ್ತಾ ಸಾಗುತ್ತಿರುವ ಅವರು ಸದ್ಯಕ್ಕೆ `ಗೋವಿಂದಾಯ ನಮಃ~ ಚಿತ್ರದ `ಪ್ಯಾರ್ಗೆ ಆಗ್ಬುಟ್ಟೈತೆ..~ ಹಾಡು ಯಶಸ್ವಿಯಾದ ಗುಂಗಿನಲ್ಲಿದ್ದಾರೆ.<br /> <br /> `ಇದುವರೆಗೂ ಸಾಕಷ್ಟು ಕಾನ್ಸೆಪ್ಟ್ ಇರುವ ಹಾಡುಗಳನ್ನು ಮಾಡಿದ್ದರೂ `ಪ್ಯಾರ್ ಆಗ್ಬುಟ್ಟೈತೆ..~ಗೆ ಸಿಕ್ಕ ಪ್ರಶಂಸೆ ಮತ್ಯಾವುದಕ್ಕೂ ಸಿಕ್ಕಿಲ್ಲ. ಇದರಿಂದ ಅವಕಾಶವೇನೂ ಹೆಚ್ಚಿಲ್ಲ. ಆದರೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ~ ಎಂದು ಸಂತಸ ವ್ಯಕ್ತಪಡಿಸುತ್ತಾರೆ.<br /> <br /> `ಯಶವಂತ್~ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಮುರಳಿ ಮೊದಲ ಅವಕಾಶ ನೀಡಿದ ನಿರ್ದೇಶಕ ದಯಾಳ್ ಅವರಿಗೆ ಆಭಾರಿ ಎನ್ನುತ್ತಾರೆ. ನಂತರ `ಅಂಬಾರಿ~, `ರಾಕಿ~, `ಮಳೆಯಲಿ ಜೊತೆಯಲಿ~, `ಸಂಗಮ~, `ಸರ್ಕಸ್~ ಮುಂತಾದ ಚಿತ್ರಗಳ ಹಾಡುಗಳಿಗೆ ಕೆಲಸ ಮಾಡಿದ್ದಾರೆ.<br /> <br /> ಯೋಗರಾಜ ಭಟ್ಟರ `ಮನಸಾರೆ~ ಮತ್ತು `ಪಂಚರಂಗಿ~ ಚಿತ್ರದ `ಲೈಫು ಇಷ್ಟೇನೆ..~ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ನಂತರ ಅವಕಾಶಗಳು ಜಾಸ್ತಿಯಾದವು ಎನ್ನುವ ಮುರಳಿ ಅವರಿಗೆ ಟಪ್ಪಾಂಗುಚಿ ಹಾಡುಗಳನ್ನು ನಿರ್ದೇಶಿಸುವುದೆಂದರೆ ಬಲು ಇಷ್ಟ. <br /> <br /> `ಹಣ ಕೊಡದಿದ್ದರೂ ಸರಿಯೇ ಕ್ರಿಯಾಶೀಲವಾಗಿ ಕೆಲಸ ಮಾಡಲು ಅವಕಾಶ ನೀಡಿದರೆ ಮತ್ತು ಸೆಟ್ನಲ್ಲಿ ಗೌರವ ಕೊಟ್ಟರೆ ಸಾಕು~ ಎನ್ನುವ ಮುರಳಿ ಅವರಿಗೆ `ರಾಕಿ~ ಚಿತ್ರದ ಹಾಡುಗಳಿಗೆ ಮೈನವಿರೇಳಿಸುವ ನೃತ್ಯ ನಿರ್ದೇಶನ ಮಾಡಿದ್ದು ಇಷ್ಟವಾಗಿದೆ.<br /> <br /> ಬಿಡುಗಡೆಯಾಗಬೇಕಿರುವ `ಡ್ರಾಮಾ~, `ಜಾನೂ~ ಚಿತ್ರಗಳ ಗೀತೆಗಳಿಗೆ ಮತ್ತು `ಟೀನೇಜ್~ ಚಿತ್ರದ ನೀರೊಳಗಿನ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. `ಎಲ್ಲಾ ರೀತಿಯ ಹಾಡುಗಳಿಗೂ ಮೈಕುಣಿಸಿ ತಣಿಯಬೇಕೆಂಬ ಆಸೆ ನನ್ನದು.<br /> <br /> ಕೆಲವೊಮ್ಮೆ ನಾಯಕನ ಮಿತಿಯನ್ನು ಅನುಸರಿಸಿ ನಾವು ನಡೆಯಬೇಕಿರುತ್ತದೆ. ಸೆಟ್ನಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕಿರುತ್ತದೆ. ಕಡಿಮೆ ಅವಧಿಯಲ್ಲಿ ಕೆಲಸ ಮಾಡಿ ಎಂದಾಗ ನಮ್ಮ ಕ್ರಿಯಾಶೀಲತೆಗೆ ಧಕ್ಕೆಯಾಗುತ್ತದೆ~ ಎನ್ನುತ್ತಾರೆ ಮುರಳಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಎಲ್ಲೆಲ್ಲೋ ಓಡುವ ಮನಸೇ.. ಯಾಕಿಂಥ ಹುಚ್ಚುಚ್ಚು ಮನಸೇ..~- ಈ ಹಾಡನ್ನು ನೋಡಿದಾಗ ಅಲ್ಲಿ ನೃತ್ಯ ನಿರ್ದೇಶಕರ ಅಗತ್ಯ ಏನಿದೆ? ಎಂಬ ಪ್ರಶ್ನೆ ಸುಳಿದು ಹೋಗುತ್ತದೆ.<br /> <br /> `ಆದರೆ ಅಬ್ಬರದ ಹಾಡಿನಲ್ಲಿ ನೃತ್ಯ ನಿರ್ದೇಶಕರಿಗೆ ಇರುವಷ್ಟೇ ಪ್ರಾಮುಖ್ಯತೆ ಇಂಥ ನಿರ್ದಿಷ್ಟ ವಿಚಾರ ಇರುವ ಹಾಡುಗಳಿಗೂ ಇರುತ್ತದೆ~ ಎನ್ನುತ್ತಾರೆ ಮುರಳಿ. ಪ್ರಸ್ತುತ ಅವರು ಇಂಥ ಮಾಧುರ್ಯ ತುಂಬಿದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ.<br /> <br /> `ಮೆಲೋಡಿ ಹಾಡುಗಳಿಗೆ ನೃತ್ಯ ನಿರ್ದೇಶಕರ ಅಗತ್ಯ ಏನಿದೆ ಎನ್ನುತ್ತಾರೆ. ಆದರೆ ಒಂದು ಹಾಡನ್ನು ನಮಗೆ ವಹಿಸಿದ ಮೇಲೆ ಅದು ಹೇಗಿದ್ದರೂ ಅದಕ್ಕೆ ಅಗತ್ಯ ಇರುವ ಕಾಸ್ಟ್ಯೂಮ್ನಿಂದ ಹಿಡಿದು ಹಾಡು ಹೇಗೆ ರೂಪು ತಳೆಯಬೇಕು ಎನ್ನುವತನಕ ನಮ್ಮ ಸಹಕಾರ ಇರುತ್ತದೆ~ ಎನ್ನುತ್ತಾರೆ ಮುರಳಿ. <br /> <br /> ಮುರಳಿ ಅವರ ಊರು ಬೆಂಗಳೂರು. ಓದಿದ್ದು ಪಿಯುಸಿ. ಚಿಕ್ಕಂದಿನಿಂದ ಇದ್ದ ನೃತ್ಯ ಮಾಡುವ ಅವರ ಹವ್ಯಾಸವನ್ನು ಕುಟುಂಬ ಬೆಂಬಲಿಸಿತು. ಕನಸುಗಳನ್ನು ಹೊತ್ತ ಅವರು ಗಾಂಧಿನಗರದ ಹಾದಿ ಹಿಡಿದರು.<br /> <br /> ಮೊದಲ ಬಾರಿಗೆ `ಸಿಂಹದ ಮರಿ~ ಚಿತ್ರದ ಹಾಡಿನಲ್ಲಿ ಸಹನರ್ತಕನಾಗಿ ಹಾಜರಿ ಹಾಕಿದರು. ಫೈವ್ಸ್ಟಾರ್ ಗಣೇಶ್, ಮದನ್ ಹರಿಣಿ, ರಘು ಮುಂತಾದವರ ಬಳಿ ಸಹ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದರು. ಇದೀಗ ಸ್ವತಂತ್ರವಾಗಿ ನೃತ್ಯ ನಿರ್ದೇಶನದ ನೇತೃತ್ವ ವಹಿಸಿಕೊಂಡಿರುವ ಅವರಿಗೆ ವಿಭಿನ್ನ ರೀತಿಯ ನೃತ್ಯ ಪ್ರಯೋಗ ಮಾಡುವಾಸೆ.<br /> <br /> ಸಿನಿಮಾ ನೃತ್ಯ ನಿರ್ದೇಶನದೊಂದಿಗೆ `ಡಾನ್ಸ್ ವರ್ಲ್ಡ್~ ಹೆಸರಿನ ನೃತ್ಯ ಶಾಲೆಯನ್ನು ನಿರ್ವಹಿಸುತ್ತಿರುವ ಮುರಳಿ, ಅಲ್ಲಿ ಇಂದಿನ ಟ್ರೆಂಡ್ಗೆ ತಕ್ಕ ಡಾನ್ಸ್ ಕಲಿಸುತ್ತಾರಂತೆ. ಸಿನಿಮಾದಲ್ಲೂ ಅವಕಾಶಗಳನ್ನು ಪಡೆಯುತ್ತಾ ಸಾಗುತ್ತಿರುವ ಅವರು ಸದ್ಯಕ್ಕೆ `ಗೋವಿಂದಾಯ ನಮಃ~ ಚಿತ್ರದ `ಪ್ಯಾರ್ಗೆ ಆಗ್ಬುಟ್ಟೈತೆ..~ ಹಾಡು ಯಶಸ್ವಿಯಾದ ಗುಂಗಿನಲ್ಲಿದ್ದಾರೆ.<br /> <br /> `ಇದುವರೆಗೂ ಸಾಕಷ್ಟು ಕಾನ್ಸೆಪ್ಟ್ ಇರುವ ಹಾಡುಗಳನ್ನು ಮಾಡಿದ್ದರೂ `ಪ್ಯಾರ್ ಆಗ್ಬುಟ್ಟೈತೆ..~ಗೆ ಸಿಕ್ಕ ಪ್ರಶಂಸೆ ಮತ್ಯಾವುದಕ್ಕೂ ಸಿಕ್ಕಿಲ್ಲ. ಇದರಿಂದ ಅವಕಾಶವೇನೂ ಹೆಚ್ಚಿಲ್ಲ. ಆದರೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ~ ಎಂದು ಸಂತಸ ವ್ಯಕ್ತಪಡಿಸುತ್ತಾರೆ.<br /> <br /> `ಯಶವಂತ್~ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಮುರಳಿ ಮೊದಲ ಅವಕಾಶ ನೀಡಿದ ನಿರ್ದೇಶಕ ದಯಾಳ್ ಅವರಿಗೆ ಆಭಾರಿ ಎನ್ನುತ್ತಾರೆ. ನಂತರ `ಅಂಬಾರಿ~, `ರಾಕಿ~, `ಮಳೆಯಲಿ ಜೊತೆಯಲಿ~, `ಸಂಗಮ~, `ಸರ್ಕಸ್~ ಮುಂತಾದ ಚಿತ್ರಗಳ ಹಾಡುಗಳಿಗೆ ಕೆಲಸ ಮಾಡಿದ್ದಾರೆ.<br /> <br /> ಯೋಗರಾಜ ಭಟ್ಟರ `ಮನಸಾರೆ~ ಮತ್ತು `ಪಂಚರಂಗಿ~ ಚಿತ್ರದ `ಲೈಫು ಇಷ್ಟೇನೆ..~ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ನಂತರ ಅವಕಾಶಗಳು ಜಾಸ್ತಿಯಾದವು ಎನ್ನುವ ಮುರಳಿ ಅವರಿಗೆ ಟಪ್ಪಾಂಗುಚಿ ಹಾಡುಗಳನ್ನು ನಿರ್ದೇಶಿಸುವುದೆಂದರೆ ಬಲು ಇಷ್ಟ. <br /> <br /> `ಹಣ ಕೊಡದಿದ್ದರೂ ಸರಿಯೇ ಕ್ರಿಯಾಶೀಲವಾಗಿ ಕೆಲಸ ಮಾಡಲು ಅವಕಾಶ ನೀಡಿದರೆ ಮತ್ತು ಸೆಟ್ನಲ್ಲಿ ಗೌರವ ಕೊಟ್ಟರೆ ಸಾಕು~ ಎನ್ನುವ ಮುರಳಿ ಅವರಿಗೆ `ರಾಕಿ~ ಚಿತ್ರದ ಹಾಡುಗಳಿಗೆ ಮೈನವಿರೇಳಿಸುವ ನೃತ್ಯ ನಿರ್ದೇಶನ ಮಾಡಿದ್ದು ಇಷ್ಟವಾಗಿದೆ.<br /> <br /> ಬಿಡುಗಡೆಯಾಗಬೇಕಿರುವ `ಡ್ರಾಮಾ~, `ಜಾನೂ~ ಚಿತ್ರಗಳ ಗೀತೆಗಳಿಗೆ ಮತ್ತು `ಟೀನೇಜ್~ ಚಿತ್ರದ ನೀರೊಳಗಿನ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. `ಎಲ್ಲಾ ರೀತಿಯ ಹಾಡುಗಳಿಗೂ ಮೈಕುಣಿಸಿ ತಣಿಯಬೇಕೆಂಬ ಆಸೆ ನನ್ನದು.<br /> <br /> ಕೆಲವೊಮ್ಮೆ ನಾಯಕನ ಮಿತಿಯನ್ನು ಅನುಸರಿಸಿ ನಾವು ನಡೆಯಬೇಕಿರುತ್ತದೆ. ಸೆಟ್ನಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕಿರುತ್ತದೆ. ಕಡಿಮೆ ಅವಧಿಯಲ್ಲಿ ಕೆಲಸ ಮಾಡಿ ಎಂದಾಗ ನಮ್ಮ ಕ್ರಿಯಾಶೀಲತೆಗೆ ಧಕ್ಕೆಯಾಗುತ್ತದೆ~ ಎನ್ನುತ್ತಾರೆ ಮುರಳಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>