<p>ರಜನೀಕಾಂತ್ ತಮ್ಮ ಮಗಳು ನಿರ್ದೇಶಿಸಿರುವ ಕೊಚಾಡಿಯನ್ ಚಿತ್ರಕ್ಕಾಗಿ ಹಾಡೊಂದನ್ನು ಹೇಳಲಿದ್ದಾರಂತೆ. ಈ ಸುದ್ದಿ ಅವರ ಅಭಿಮಾನಿ ಬಳಗಕ್ಕೆ ಸಂತಸವನ್ನೇ ತಂದಿದೆ. ರಜನಿ ತಮ್ಮ ಚಿತ್ರಕ್ಕೆ ಹಾಡಿ 21 ವರ್ಷಗಳೇ ಕಳೆದಿವೆ. ಇದಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. <br /> <br /> ಅಮಿತಾಬ್ ಸಹ `ಕಹಾನಿ~ ಚಿತ್ರಕ್ಕಾಗಿ ಗುರು ರವೀಂದ್ರನಾಥ್ ಟ್ಯಾಗೋರ್ ರಚಿತ `ಎಕ್ಲಾ ಚಲೋ ರೆ~ ಹಾಡು ಹೇಳಿದ್ದರು. ಅಮಿತಾಬ್ `ಸಿಲ್ಸಿಲಾ~, `ಯಾರಾನಾ~, `ಡಾನ್~, `ಹಂ~, `ಬಾಗ್ಬನ್~ ಮುಂತಾದ ಚಿತ್ರಗಳಲ್ಲೆಲ್ಲಾ ಹಾಡಿದ್ದಾರೆ.<br /> <br /> ಅಮೀರ್ ಖಾನ್ `ಗುಲಾಮ್~ ಚಿತ್ರದ `ಆತಿ ಕ್ಯಾ ಖಂಡಾಲಾ~ ಹಾಡಿಗೆ ಧ್ವನಿಯಾಗಿದ್ದರು. ಶಾರುಖ್ ಖಾನ್ ಜೋಷ್ ಚಿತ್ರದಲ್ಲಿ `ಅಪುನ್ ಬೋಲಾ, ತೂ ಮೇರಿ ಲೈಲಾ~ ಹಾಡಿ ಕುಣಿದಿದ್ದರು. <br /> <br /> ಸಿನೆಮಾ ನಟರೆಲ್ಲ ಹಾಡಿದರೆ ಹಿನ್ನೆಲೆ ಗಾಯಕರು ಏನು ಮಾಡಬೇಕು? ಇದಕ್ಕೆ ಶಾನ್ ಉತ್ತರ ನೀಡಿದ್ದಾರೆ. <br /> <br /> ಪಶ್ಚಿಮದಲ್ಲಿ ಎಲ್ಲ ನಟರೇ ಹಾಡು ಹೇಳುತ್ತಾರೆ. ಅಂಥ ಬೆಳವಣಿಗೆ ಸ್ವಾಗತಾರ್ಹವೇ. ಹಿನ್ನೆಲೆ ಗಾಯನಕ್ಕೆ ಈಗ ಮುಂಚಿನ ಮಾಧುರ್ಯ ಉಳಿದಿಲ್ಲ. ಗಾಯಕರೇ ಆಗಿರಬೇಕು, ಅಥವಾ ಸಂಗೀತ ಬಲ್ಲವರಾಗಬೇಕು ಎಂಬುದೇನೂ ಕಡ್ಡಾಯವಾಗಿಲ್ಲ. ಯಾರು ಬೇಕಾದರೂ ಹಾಡಬಹುದು ಎಂದಾಗಿದೆ ಎಂದು ಹೇಳಿದ್ದಾರೆ. <br /> <br /> ಹಾಡಿಗೆ ಮಾಧುರ್ಯವೂ ಬೇಕಾಗಿಲ್ಲ. ಎಲ್ಲ `ನಾನ್ಸೆನ್ಸ್~ ಹಾಡುಗಳ ಕಾಲ ಇದು. <br /> `ಕೊಲವೆರಿ ಡಿ~ ಇರಲಿ, `ಭಾಗ್ ಡಿ.ಕೆ.ಬೋಸ್~ ನಂಥ ಹಾಡುಗಳೇ ಇರಲಿ ಜನಪ್ರಿಯವಾಗುತ್ತಿವೆ. <br /> <br /> `ಮುನ್ನಭಾಯಿ~, ಅಥವಾ `ಜಲೇಬಿವಾಲಿ~ಯಂಥ ಹಾಡುಗಳಿಗೆ ಸಾಹಿತ್ಯದ ಹಂಗೂ ಇಲ್ಲ. ಹಾಡನ್ನು ಹಾಡಬೇಕೋ, ಹೇಳಬೇಕೋ ಎಂಬುದೇ ಅರ್ಥವಾಗದ ಈ ದಿನಗಳಲ್ಲಿ ಹಿನ್ನೆಲೆ ಗಾಯನ ತನ್ನ ಚರಿಷ್ಮಾ ಕಳೆದುಕೊಳ್ಳುತ್ತಿದ್ದಾನೆ ಎಂದು ಶಾನ್ ಅಭಿಪ್ರಾಯ ಪಟ್ಟಿದ್ದಾರೆ. <br /> <br /> ಇವರ ಮಾತಿಗೆ ಇಂಬುಗೊಡುವಂತೆ ಕಿಶೋರ್ ಕುಮಾರ್ ಮಗ ಅಮಿತ್ ಕುಮಾರ್ ಸಹ ಇಂಥ ಹಾಡುಗಳ ಬಗ್ಗೆ ಕಿಡಿ ಕಾರಿದ್ದಾರೆ. ಇವು ಜನಪ್ರಿಯತೆಯ ಸೋಗಿನಲ್ಲಿ ಸುಟ್ಟುಹೋಗುವ ಸುರುಸುರು ಬತ್ತಿಯಂಥ ಸಂಗೀತ. ಈ ಸಂಗೀತದಲ್ಲಿ ಮನದ ತಾಪವಿಲ್ಲ. ಭಾವನೆಗಳ ಕಾವಿಲ್ಲ. ಹೀಗೆ ಸಿಡಿದು ಬೂದಿಯಾಗುವ ಹಾಡುಗಳಿವು. <br /> <br /> ಹಾಡುಗಳು ಮನದ ಉರಿಯನ್ನು ತಂಪು ಮಾಡುವಂತಿರಬೇಕು. ಹಾಡುಗಳು ಮನದಲ್ಲಿ ಬೆಳಕಿನ ಕುಡಿ ಹೊತ್ತಿಸುವಂತಿರಬೇಕು. ಕ್ರಾಂತಿಯ ಕಿಡಿ ಜ್ವಲಿಸುವಂತೆ ಮಾಡಬೇಕು. ಅಂಥ ಹಾಡು, ಸಂಗೀತ, ಸಾಹಿತ್ಯ ಎಲ್ಲವೂ ಈಗ ಕಣ್ಮರೆಯಾಗುತ್ತಿದೆ ಎಂದು ಹೇಳಿದ್ದಾರೆ.<br /> ಹಿನ್ನೆಲೆ ಗಾಯಕರಾಗಿಯೇ ಮುಂದುವರಿಯಬೇಕೆಂದರೆ ಇದನ್ನು ಕೇವಲ ವೃತ್ತಿಯೆಂದು ಮಾತ್ರ ಪರಿಗಣಿಸಬೇಕಾಗಿದೆ.<br /> <br /> ನೀಡಿರುವ ಸಾಹಿತ್ಯವನ್ನು ನಿರ್ದೇಶಿಸಿದಂತೆ ಪಾಠ ಒಪ್ಪಿಸಬೇಕಾಗಿದೆ. ಸಂಗೀತ ತಪವಿದ್ದಂತೆ. ಇನ್ನು ಇಂಥ ಹಾಡುಗಳನ್ನು ನೀಡುವುದು ಅಸಾಧ್ಯ ಎಂದು ಶಾನ್ ಹೇಳಿಕೊಂಡಿದ್ದಾರೆ. ಇಂಥ ಹಾಡುಗಳನ್ನು ಹೇಳುವ ಬದಲು ಬೇರೆ ವೃತ್ತಿ ಆರಂಭಿಸುವುದು ಒಳಿತು.</p>.<p> ಈ ನಿಟ್ಟಿನಲ್ಲಿ ನಟರೇ ಇನ್ನು ಮುಂದೆ ಹಾಡು ಹೇಳುವುದನ್ನು ಆರಂಭಿಸಿದರೆ ಅದನ್ನು ಒಳ್ಳೆಯ ಬೆಳವಣಿಗೆ ಎಂದೇ ಕರೆಯಬಹುದಾಗಿದೆ. ಕೊನೆಯ ಪಕ್ಷ ಶಾಸ್ತ್ರೀಯವಾಗಿ ಸಂಗೀತ ಕಲಿತವರು ಅದೇ ಕ್ಷೇತ್ರದಲ್ಲಿಯೇ ಮುಂದುವರಿದಾರು ಎಂಬ ಆಶಾಭಾವ ಅವರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಜನೀಕಾಂತ್ ತಮ್ಮ ಮಗಳು ನಿರ್ದೇಶಿಸಿರುವ ಕೊಚಾಡಿಯನ್ ಚಿತ್ರಕ್ಕಾಗಿ ಹಾಡೊಂದನ್ನು ಹೇಳಲಿದ್ದಾರಂತೆ. ಈ ಸುದ್ದಿ ಅವರ ಅಭಿಮಾನಿ ಬಳಗಕ್ಕೆ ಸಂತಸವನ್ನೇ ತಂದಿದೆ. ರಜನಿ ತಮ್ಮ ಚಿತ್ರಕ್ಕೆ ಹಾಡಿ 21 ವರ್ಷಗಳೇ ಕಳೆದಿವೆ. ಇದಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. <br /> <br /> ಅಮಿತಾಬ್ ಸಹ `ಕಹಾನಿ~ ಚಿತ್ರಕ್ಕಾಗಿ ಗುರು ರವೀಂದ್ರನಾಥ್ ಟ್ಯಾಗೋರ್ ರಚಿತ `ಎಕ್ಲಾ ಚಲೋ ರೆ~ ಹಾಡು ಹೇಳಿದ್ದರು. ಅಮಿತಾಬ್ `ಸಿಲ್ಸಿಲಾ~, `ಯಾರಾನಾ~, `ಡಾನ್~, `ಹಂ~, `ಬಾಗ್ಬನ್~ ಮುಂತಾದ ಚಿತ್ರಗಳಲ್ಲೆಲ್ಲಾ ಹಾಡಿದ್ದಾರೆ.<br /> <br /> ಅಮೀರ್ ಖಾನ್ `ಗುಲಾಮ್~ ಚಿತ್ರದ `ಆತಿ ಕ್ಯಾ ಖಂಡಾಲಾ~ ಹಾಡಿಗೆ ಧ್ವನಿಯಾಗಿದ್ದರು. ಶಾರುಖ್ ಖಾನ್ ಜೋಷ್ ಚಿತ್ರದಲ್ಲಿ `ಅಪುನ್ ಬೋಲಾ, ತೂ ಮೇರಿ ಲೈಲಾ~ ಹಾಡಿ ಕುಣಿದಿದ್ದರು. <br /> <br /> ಸಿನೆಮಾ ನಟರೆಲ್ಲ ಹಾಡಿದರೆ ಹಿನ್ನೆಲೆ ಗಾಯಕರು ಏನು ಮಾಡಬೇಕು? ಇದಕ್ಕೆ ಶಾನ್ ಉತ್ತರ ನೀಡಿದ್ದಾರೆ. <br /> <br /> ಪಶ್ಚಿಮದಲ್ಲಿ ಎಲ್ಲ ನಟರೇ ಹಾಡು ಹೇಳುತ್ತಾರೆ. ಅಂಥ ಬೆಳವಣಿಗೆ ಸ್ವಾಗತಾರ್ಹವೇ. ಹಿನ್ನೆಲೆ ಗಾಯನಕ್ಕೆ ಈಗ ಮುಂಚಿನ ಮಾಧುರ್ಯ ಉಳಿದಿಲ್ಲ. ಗಾಯಕರೇ ಆಗಿರಬೇಕು, ಅಥವಾ ಸಂಗೀತ ಬಲ್ಲವರಾಗಬೇಕು ಎಂಬುದೇನೂ ಕಡ್ಡಾಯವಾಗಿಲ್ಲ. ಯಾರು ಬೇಕಾದರೂ ಹಾಡಬಹುದು ಎಂದಾಗಿದೆ ಎಂದು ಹೇಳಿದ್ದಾರೆ. <br /> <br /> ಹಾಡಿಗೆ ಮಾಧುರ್ಯವೂ ಬೇಕಾಗಿಲ್ಲ. ಎಲ್ಲ `ನಾನ್ಸೆನ್ಸ್~ ಹಾಡುಗಳ ಕಾಲ ಇದು. <br /> `ಕೊಲವೆರಿ ಡಿ~ ಇರಲಿ, `ಭಾಗ್ ಡಿ.ಕೆ.ಬೋಸ್~ ನಂಥ ಹಾಡುಗಳೇ ಇರಲಿ ಜನಪ್ರಿಯವಾಗುತ್ತಿವೆ. <br /> <br /> `ಮುನ್ನಭಾಯಿ~, ಅಥವಾ `ಜಲೇಬಿವಾಲಿ~ಯಂಥ ಹಾಡುಗಳಿಗೆ ಸಾಹಿತ್ಯದ ಹಂಗೂ ಇಲ್ಲ. ಹಾಡನ್ನು ಹಾಡಬೇಕೋ, ಹೇಳಬೇಕೋ ಎಂಬುದೇ ಅರ್ಥವಾಗದ ಈ ದಿನಗಳಲ್ಲಿ ಹಿನ್ನೆಲೆ ಗಾಯನ ತನ್ನ ಚರಿಷ್ಮಾ ಕಳೆದುಕೊಳ್ಳುತ್ತಿದ್ದಾನೆ ಎಂದು ಶಾನ್ ಅಭಿಪ್ರಾಯ ಪಟ್ಟಿದ್ದಾರೆ. <br /> <br /> ಇವರ ಮಾತಿಗೆ ಇಂಬುಗೊಡುವಂತೆ ಕಿಶೋರ್ ಕುಮಾರ್ ಮಗ ಅಮಿತ್ ಕುಮಾರ್ ಸಹ ಇಂಥ ಹಾಡುಗಳ ಬಗ್ಗೆ ಕಿಡಿ ಕಾರಿದ್ದಾರೆ. ಇವು ಜನಪ್ರಿಯತೆಯ ಸೋಗಿನಲ್ಲಿ ಸುಟ್ಟುಹೋಗುವ ಸುರುಸುರು ಬತ್ತಿಯಂಥ ಸಂಗೀತ. ಈ ಸಂಗೀತದಲ್ಲಿ ಮನದ ತಾಪವಿಲ್ಲ. ಭಾವನೆಗಳ ಕಾವಿಲ್ಲ. ಹೀಗೆ ಸಿಡಿದು ಬೂದಿಯಾಗುವ ಹಾಡುಗಳಿವು. <br /> <br /> ಹಾಡುಗಳು ಮನದ ಉರಿಯನ್ನು ತಂಪು ಮಾಡುವಂತಿರಬೇಕು. ಹಾಡುಗಳು ಮನದಲ್ಲಿ ಬೆಳಕಿನ ಕುಡಿ ಹೊತ್ತಿಸುವಂತಿರಬೇಕು. ಕ್ರಾಂತಿಯ ಕಿಡಿ ಜ್ವಲಿಸುವಂತೆ ಮಾಡಬೇಕು. ಅಂಥ ಹಾಡು, ಸಂಗೀತ, ಸಾಹಿತ್ಯ ಎಲ್ಲವೂ ಈಗ ಕಣ್ಮರೆಯಾಗುತ್ತಿದೆ ಎಂದು ಹೇಳಿದ್ದಾರೆ.<br /> ಹಿನ್ನೆಲೆ ಗಾಯಕರಾಗಿಯೇ ಮುಂದುವರಿಯಬೇಕೆಂದರೆ ಇದನ್ನು ಕೇವಲ ವೃತ್ತಿಯೆಂದು ಮಾತ್ರ ಪರಿಗಣಿಸಬೇಕಾಗಿದೆ.<br /> <br /> ನೀಡಿರುವ ಸಾಹಿತ್ಯವನ್ನು ನಿರ್ದೇಶಿಸಿದಂತೆ ಪಾಠ ಒಪ್ಪಿಸಬೇಕಾಗಿದೆ. ಸಂಗೀತ ತಪವಿದ್ದಂತೆ. ಇನ್ನು ಇಂಥ ಹಾಡುಗಳನ್ನು ನೀಡುವುದು ಅಸಾಧ್ಯ ಎಂದು ಶಾನ್ ಹೇಳಿಕೊಂಡಿದ್ದಾರೆ. ಇಂಥ ಹಾಡುಗಳನ್ನು ಹೇಳುವ ಬದಲು ಬೇರೆ ವೃತ್ತಿ ಆರಂಭಿಸುವುದು ಒಳಿತು.</p>.<p> ಈ ನಿಟ್ಟಿನಲ್ಲಿ ನಟರೇ ಇನ್ನು ಮುಂದೆ ಹಾಡು ಹೇಳುವುದನ್ನು ಆರಂಭಿಸಿದರೆ ಅದನ್ನು ಒಳ್ಳೆಯ ಬೆಳವಣಿಗೆ ಎಂದೇ ಕರೆಯಬಹುದಾಗಿದೆ. ಕೊನೆಯ ಪಕ್ಷ ಶಾಸ್ತ್ರೀಯವಾಗಿ ಸಂಗೀತ ಕಲಿತವರು ಅದೇ ಕ್ಷೇತ್ರದಲ್ಲಿಯೇ ಮುಂದುವರಿದಾರು ಎಂಬ ಆಶಾಭಾವ ಅವರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>