<p><span style="font-size: 48px;">ಜೀ</span> ಕನ್ನಡ ವಾಹಿನಿಯ `ಚಿ.ಸೌ. ಸಾವಿತ್ರಿ' ಧಾರಾವಾಹಿಯಲ್ಲಿ ನಾಯಕ ಸತ್ಯನಿಗೆ ಸಮಾನಾಂತರವಾಗಿ ಸಾಗುತ್ತಿರುವ ಪಾತ್ರದ ಹೆಸರು ಪ್ರತಾಪ್. ಈ ಪಾತ್ರ ವೀಕ್ಷಕರ ಮನದಲ್ಲಿ ವಿಸ್ತಾರವಾಗುತ್ತಾ ಸಾಗಿದಂತೆ ಆ ಪಾತ್ರಧಾರಿ ಪ್ರಕಾಶ್ ಶೆಟ್ಟಿ ಕಿರುತೆರೆಯಲ್ಲಿ ತಮ್ಮ ಇಮೇಜನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಕಾಶ್ ಶೆಟ್ಟಿಗೆ ತಮ್ಮ ವೃತ್ತಿಯಾನದಲ್ಲಿ ಅತ್ಯಂತ ವೇಗದ ತಿರುವು ನೀಡಿದ್ದು ಸಾವಿತ್ರಿಯೇ.<br /> <br /> ರಾಜೇಂದ್ರ ಸಿಂಗ್ರ `ಬದುಕು' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಯಾನ ಆರಂಭಿಸಿದ ಪ್ರಕಾಶ್, `ಆಂತರ್ಯ', `ಕಲ್ಯಾಣ ರೇಖೆ', `ರಾಘವೇಂದ್ರ ವೈಭವ', `ರಾಘವೇಂದ್ರ ಮಹಿಮೆ', `ಅರುಂಧತಿ', `ಯುಗಾದಿ' ಧಾರಾವಾಹಿಗಳ ಮೂಲಕ ವೀಕ್ಷಕರ ಮನದಲ್ಲಿದ್ದಾರೆ.</p>.<p>ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಪ್ರಕಾಶ್ಗೆ ವೃತ್ತಿ ದೆಸೆ ತಿರುಗಿದ್ದು `ಯುಗಾದಿ'ಯಿಂದ. `ಯುಗಾದಿ' ಧಾರಾವಾಹಿಯ ರಾಹುಲ್ನನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚಿಕೊಂಡಿದ್ದೇ ಪ್ರಮುಖ ತಿರುವು. ಬ್ಯಾಂಕ್ ಉದ್ಯೋಗದ ಜತೆ ಜತೆಯಲ್ಲಿಯೇ ನಟನೆಯಲ್ಲೂ ತೊಡಗಿದ್ದ ಅವರು ಉದ್ಯೋಗಕ್ಕೆ ರಾಜೀನಾಮೆ ನೀಡಿ ಪೂರ್ಣವಾಗಿ ನಟನೆಯ ಕಾಯಕದಲ್ಲಿ ತೊಡಗಿದ್ದು `ಯುಗಾದಿ'ಯಲ್ಲಿ ಸಿಕ್ಕ ಸಿಹಿಯಿಂದ.<br /> <br /> ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಜೋಗಿಮಕ್ಕಿ ಗ್ರಾಮದ ಪ್ರಕಾಶ್ ಶೆಟ್ಟಿಗೆ ನಟನೆಯ ಮೊದಲ ಪಾಠಶಾಲೆ ಅಜ್ಜನ ಮನೆ. ಅಜ್ಜ ಯಕ್ಷಗಾನಕ್ಕೆ ಗೆಜ್ಜೆಕಟ್ಟುತ್ತಿದ್ದರು. ಮನೆಯಲ್ಲಿ ಸಂಜೆಯ ವೇಳೆ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳು ಅವರ ಸಾಂಸ್ಕೃತಿಕ ಜೀವನವನ್ನು ಗಟ್ಟಿಗೊಳಿಸಿತು. ತಮ್ಮೂರಿನ `ದೀನ ಬಂಧು ಯುವಕ ಸಂಘ' ಪ್ರತಿ ವರ್ಷ ಆಯೋಜಿಸುವ ತುಳು ಮತ್ತು ಕನ್ನಡ ನಾಟಕಗಳಿಗೆ ಪ್ರಕಾಶ್ ಬಣ್ಣ ಹಚ್ಚಿದ್ದರು.<br /> <br /> ಕಾಲೇಜು ದಿನಗಳಲ್ಲಿ ಕ್ರಿಕೆಟ್ಪಟು ವಾಗುವ ಯತ್ನ ನಡೆಸಿದ್ದ ಪ್ರಕಾಶ್, ಆ ಕನಸು ಕೈಗೂಡದಿದ್ದಾಗ ಸೇರಿದ್ದು ಕಾಲೇಜಿನ ಕಲಾತಂಡವನ್ನು. ನಟನೆಯ ಸೆಳೆತ ಹೆಚ್ಚಾಗಿದ್ದು ಶಿವಮೊಗ್ಗದಲ್ಲಿ ಬಿ.ಕಾಂ. ಓದುವಾಗ. ಅಂತರ ವಿಶ್ವವಿದ್ಯಾಲಯ ನಾಟಕ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಬಹುಮಾನ ಪಡೆದು ತಮ್ಮ ನಟನೆಯ ಬಗ್ಗೆ ವಿಶ್ವಾಸ ಮೂಡಿಸಿಕೊಂಡರು. `ಮೋಡಣ್ಣನ ತಮ್ಮ', `ಕುರುಕ್ಷೇತ್ರ', `ಕೃಷ್ಣ ಸಂಧಾನ'- ಹೀಗೆ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಎಲ್ಲ ಪಾತ್ರಗಳಲ್ಲೂ ಅಭಿನಯಿಸುವ ಕಲೆ ಕರಗತ ಮಾಡಿಕೊಂಡರು.<br /> <br /> ಬಿ. ಜಯಶ್ರೀ ಅವರ `ಸ್ಪಂದನ' ರಂಗತಂಡದಲ್ಲಿ ಎರಡು ವರ್ಷ ಪಳಗಿದಾಗಲೇ ನಟನೆಯ ಒಳಸುಳಿಗಳು ಅವರಿಗೆ ತಿಳಿದದ್ದು. ರಂಗ ಚಟುವಟಿಕೆಗಳಲ್ಲಿ ಹಿಡಿತ ಸಿಕ್ಕ ನಂತರ ಹೊರಳಿದ್ದು ಕಿರುತೆರೆಗೆ. ಹಿಂದೂಸ್ತಾನಿ ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ.<br /> <br /> ಚಿ.ಸೌ. ಸಾವಿತ್ರಿ ಧಾರಾವಾಹಿಯಲ್ಲಿ ಆರಂಭದಲ್ಲಿ ಸಿಕ್ಕಿದ್ದು ಸಣ್ಣಪಾತ್ರ. ಆ ಪಾತ್ರ ವಿಸ್ತಾರವಾಗುತ್ತಾ ಸಾಗಿದಂತೆ ನಟನೆಯ ಬಗ್ಗೆ ಅವರ ವಿಶ್ವಾಸ ಇಮ್ಮಡಿಯಾಗಿದೆ. `ಜನರು ನನ್ನನ್ನು ಗುರುತಿಸುತ್ತಿರುವುದು ಪ್ರತಾಪ್ ಮೂಲಕ' ಎನ್ನುವ ಅವರಿಗೆ, ನಕಾರಾತ್ಮಕ ಪಾತ್ರಗಳೆಂದರೆ ಹೆಚ್ಚು ಇಷ್ಟ. ಆ ಪಾತ್ರಗಳು ಜನರ ಮನದಲ್ಲಿ ಹೆಚ್ಚು ಕಾಲ ನೆಲೆ ನಿಲ್ಲುತ್ತವೆ. ಅಲ್ಲದೆ ನಟನಿಗೂ ಪ್ರಬಲ ಐಡೆಂಟಿಟಿ ನೀಡುತ್ತವೆ' ಎನ್ನುವ ಅನಿಸಿಕೆ ಅವರದ್ದು.<br /> <br /> ತಮ್ಮ ಆಯ್ಕೆಯ ಎಡವಟ್ಟುಗಳಿಂದ ಕಲಾವಿದ ಹಿನ್ನಡೆ ಅನುಭವಿಸಬೇಕಾಗುತ್ತದೆ ಎನ್ನುವ ಪ್ರಕಾಶ್ಗೆ `ಬಣ್ಣದ ಬುಗುರಿ' ಆ ಅನುಭವ ನೀಡಿದೆಯಂತೆ. `ಬಣ್ಣದ ಬುಗುರಿ' ಜನರ ಮನಸ್ಸಿಗೆ ಗುನ್ನಾ ಹೊಡೆಯಲೇ ಇಲ್ಲ. ಅಂದಿನಿಂದ ಪಾತ್ರಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ಅವರಿಗೆ, ಸಿನಿಮಾದಲ್ಲಿ ಗುರ್ತಿಸಿಕೊಳ್ಳುವ ಕನಸೂ ಇದೆ.<br /> <strong>-ಡಿ.ಎಂ.ಕುರ್ಕೆ ಪ್ರಶಾಂತ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 48px;">ಜೀ</span> ಕನ್ನಡ ವಾಹಿನಿಯ `ಚಿ.ಸೌ. ಸಾವಿತ್ರಿ' ಧಾರಾವಾಹಿಯಲ್ಲಿ ನಾಯಕ ಸತ್ಯನಿಗೆ ಸಮಾನಾಂತರವಾಗಿ ಸಾಗುತ್ತಿರುವ ಪಾತ್ರದ ಹೆಸರು ಪ್ರತಾಪ್. ಈ ಪಾತ್ರ ವೀಕ್ಷಕರ ಮನದಲ್ಲಿ ವಿಸ್ತಾರವಾಗುತ್ತಾ ಸಾಗಿದಂತೆ ಆ ಪಾತ್ರಧಾರಿ ಪ್ರಕಾಶ್ ಶೆಟ್ಟಿ ಕಿರುತೆರೆಯಲ್ಲಿ ತಮ್ಮ ಇಮೇಜನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಕಾಶ್ ಶೆಟ್ಟಿಗೆ ತಮ್ಮ ವೃತ್ತಿಯಾನದಲ್ಲಿ ಅತ್ಯಂತ ವೇಗದ ತಿರುವು ನೀಡಿದ್ದು ಸಾವಿತ್ರಿಯೇ.<br /> <br /> ರಾಜೇಂದ್ರ ಸಿಂಗ್ರ `ಬದುಕು' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಯಾನ ಆರಂಭಿಸಿದ ಪ್ರಕಾಶ್, `ಆಂತರ್ಯ', `ಕಲ್ಯಾಣ ರೇಖೆ', `ರಾಘವೇಂದ್ರ ವೈಭವ', `ರಾಘವೇಂದ್ರ ಮಹಿಮೆ', `ಅರುಂಧತಿ', `ಯುಗಾದಿ' ಧಾರಾವಾಹಿಗಳ ಮೂಲಕ ವೀಕ್ಷಕರ ಮನದಲ್ಲಿದ್ದಾರೆ.</p>.<p>ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಪ್ರಕಾಶ್ಗೆ ವೃತ್ತಿ ದೆಸೆ ತಿರುಗಿದ್ದು `ಯುಗಾದಿ'ಯಿಂದ. `ಯುಗಾದಿ' ಧಾರಾವಾಹಿಯ ರಾಹುಲ್ನನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚಿಕೊಂಡಿದ್ದೇ ಪ್ರಮುಖ ತಿರುವು. ಬ್ಯಾಂಕ್ ಉದ್ಯೋಗದ ಜತೆ ಜತೆಯಲ್ಲಿಯೇ ನಟನೆಯಲ್ಲೂ ತೊಡಗಿದ್ದ ಅವರು ಉದ್ಯೋಗಕ್ಕೆ ರಾಜೀನಾಮೆ ನೀಡಿ ಪೂರ್ಣವಾಗಿ ನಟನೆಯ ಕಾಯಕದಲ್ಲಿ ತೊಡಗಿದ್ದು `ಯುಗಾದಿ'ಯಲ್ಲಿ ಸಿಕ್ಕ ಸಿಹಿಯಿಂದ.<br /> <br /> ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಜೋಗಿಮಕ್ಕಿ ಗ್ರಾಮದ ಪ್ರಕಾಶ್ ಶೆಟ್ಟಿಗೆ ನಟನೆಯ ಮೊದಲ ಪಾಠಶಾಲೆ ಅಜ್ಜನ ಮನೆ. ಅಜ್ಜ ಯಕ್ಷಗಾನಕ್ಕೆ ಗೆಜ್ಜೆಕಟ್ಟುತ್ತಿದ್ದರು. ಮನೆಯಲ್ಲಿ ಸಂಜೆಯ ವೇಳೆ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳು ಅವರ ಸಾಂಸ್ಕೃತಿಕ ಜೀವನವನ್ನು ಗಟ್ಟಿಗೊಳಿಸಿತು. ತಮ್ಮೂರಿನ `ದೀನ ಬಂಧು ಯುವಕ ಸಂಘ' ಪ್ರತಿ ವರ್ಷ ಆಯೋಜಿಸುವ ತುಳು ಮತ್ತು ಕನ್ನಡ ನಾಟಕಗಳಿಗೆ ಪ್ರಕಾಶ್ ಬಣ್ಣ ಹಚ್ಚಿದ್ದರು.<br /> <br /> ಕಾಲೇಜು ದಿನಗಳಲ್ಲಿ ಕ್ರಿಕೆಟ್ಪಟು ವಾಗುವ ಯತ್ನ ನಡೆಸಿದ್ದ ಪ್ರಕಾಶ್, ಆ ಕನಸು ಕೈಗೂಡದಿದ್ದಾಗ ಸೇರಿದ್ದು ಕಾಲೇಜಿನ ಕಲಾತಂಡವನ್ನು. ನಟನೆಯ ಸೆಳೆತ ಹೆಚ್ಚಾಗಿದ್ದು ಶಿವಮೊಗ್ಗದಲ್ಲಿ ಬಿ.ಕಾಂ. ಓದುವಾಗ. ಅಂತರ ವಿಶ್ವವಿದ್ಯಾಲಯ ನಾಟಕ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಬಹುಮಾನ ಪಡೆದು ತಮ್ಮ ನಟನೆಯ ಬಗ್ಗೆ ವಿಶ್ವಾಸ ಮೂಡಿಸಿಕೊಂಡರು. `ಮೋಡಣ್ಣನ ತಮ್ಮ', `ಕುರುಕ್ಷೇತ್ರ', `ಕೃಷ್ಣ ಸಂಧಾನ'- ಹೀಗೆ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಎಲ್ಲ ಪಾತ್ರಗಳಲ್ಲೂ ಅಭಿನಯಿಸುವ ಕಲೆ ಕರಗತ ಮಾಡಿಕೊಂಡರು.<br /> <br /> ಬಿ. ಜಯಶ್ರೀ ಅವರ `ಸ್ಪಂದನ' ರಂಗತಂಡದಲ್ಲಿ ಎರಡು ವರ್ಷ ಪಳಗಿದಾಗಲೇ ನಟನೆಯ ಒಳಸುಳಿಗಳು ಅವರಿಗೆ ತಿಳಿದದ್ದು. ರಂಗ ಚಟುವಟಿಕೆಗಳಲ್ಲಿ ಹಿಡಿತ ಸಿಕ್ಕ ನಂತರ ಹೊರಳಿದ್ದು ಕಿರುತೆರೆಗೆ. ಹಿಂದೂಸ್ತಾನಿ ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ.<br /> <br /> ಚಿ.ಸೌ. ಸಾವಿತ್ರಿ ಧಾರಾವಾಹಿಯಲ್ಲಿ ಆರಂಭದಲ್ಲಿ ಸಿಕ್ಕಿದ್ದು ಸಣ್ಣಪಾತ್ರ. ಆ ಪಾತ್ರ ವಿಸ್ತಾರವಾಗುತ್ತಾ ಸಾಗಿದಂತೆ ನಟನೆಯ ಬಗ್ಗೆ ಅವರ ವಿಶ್ವಾಸ ಇಮ್ಮಡಿಯಾಗಿದೆ. `ಜನರು ನನ್ನನ್ನು ಗುರುತಿಸುತ್ತಿರುವುದು ಪ್ರತಾಪ್ ಮೂಲಕ' ಎನ್ನುವ ಅವರಿಗೆ, ನಕಾರಾತ್ಮಕ ಪಾತ್ರಗಳೆಂದರೆ ಹೆಚ್ಚು ಇಷ್ಟ. ಆ ಪಾತ್ರಗಳು ಜನರ ಮನದಲ್ಲಿ ಹೆಚ್ಚು ಕಾಲ ನೆಲೆ ನಿಲ್ಲುತ್ತವೆ. ಅಲ್ಲದೆ ನಟನಿಗೂ ಪ್ರಬಲ ಐಡೆಂಟಿಟಿ ನೀಡುತ್ತವೆ' ಎನ್ನುವ ಅನಿಸಿಕೆ ಅವರದ್ದು.<br /> <br /> ತಮ್ಮ ಆಯ್ಕೆಯ ಎಡವಟ್ಟುಗಳಿಂದ ಕಲಾವಿದ ಹಿನ್ನಡೆ ಅನುಭವಿಸಬೇಕಾಗುತ್ತದೆ ಎನ್ನುವ ಪ್ರಕಾಶ್ಗೆ `ಬಣ್ಣದ ಬುಗುರಿ' ಆ ಅನುಭವ ನೀಡಿದೆಯಂತೆ. `ಬಣ್ಣದ ಬುಗುರಿ' ಜನರ ಮನಸ್ಸಿಗೆ ಗುನ್ನಾ ಹೊಡೆಯಲೇ ಇಲ್ಲ. ಅಂದಿನಿಂದ ಪಾತ್ರಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ಅವರಿಗೆ, ಸಿನಿಮಾದಲ್ಲಿ ಗುರ್ತಿಸಿಕೊಳ್ಳುವ ಕನಸೂ ಇದೆ.<br /> <strong>-ಡಿ.ಎಂ.ಕುರ್ಕೆ ಪ್ರಶಾಂತ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>