<p>ವಿಶ್ವ ಮಹಿಳಾ ದಿನದ ಪ್ರಯುಕ್ತ ದೂರದರ್ಶನದ ಚಂದನ ಕನ್ನಡ ವಾಹಿನಿಯಲ್ಲಿ ರಾತ್ರಿ 8ರಿಂದ 8.30ಕ್ಕೆ ಖ್ಯಾತ ಗಗನಸಖಿ ನೀರಜಾ ಭಾನೋಟ್ ಅವರ ಜೀವನ ಚರಿತ್ರೆ ಕುರಿತ 30 ನಿಮಿಷಗಳ ಶೈಕ್ಷಣಿಕ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.<br /> <br /> ಚಂಡೀಗಡ, ಬೆಂಗಳೂರು ವಿಮಾನ ನಿಲ್ದಾಣ, ಎಚ್.ಎ.ಎಲ್ ಗ್ರಂಥಾಲಯಗಳಲ್ಲಿ ಈ ಸಾಕ್ಷ್ಯಚಿತ್ರ ಚಿತ್ರೀಕರಿಸಲಾಗಿದೆ.<br /> <br /> ನೀರಜಾ ಭಾನೋಟ್ ಒಬ್ಬ ಸಾಹಸಿ ಮಹಿಳೆಯಾಗಿದ್ದು, 1986 ಸೆಪ್ಟೆಂಬರ್5ರಂದು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಈಕೆ ಕರ್ತವ್ಯ ನಿರ್ವಹಿಸುತ್ತಿದ್ದ `ಪಾನ್ ಅಮೆರಿಕಾ ನಂ73 ಬೋಯಿಂಗ್ 747~ ವಿಮಾನ ಉಗ್ರರಿಂದ ಹೈಜಾಕ್ ಆಗುತ್ತದೆ.<br /> <br /> ಇಂಥ ಸಮಯದಲ್ಲಿ 400 ಪ್ರಯಾಣಿಕರನ್ನು ವಿಮಾನದ ತುರ್ತುದ್ವಾರವನ್ನು ತೆಗೆದು ಪ್ರಾಣಾಪಾಯದಿಂದ ಪಾರು ಮಾಡುತ್ತಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಮೂವರು ಮಕ್ಕಳನ್ನು ಕಾಪಾಡಲು ಹೋಗಿ ಕೊನೆಗೆ ಉಗ್ರರ ಗುಂಡಿಗೆ ಎದೆಯೊಡ್ಡಿ ಪ್ರಾಣ ತ್ಯಾಗಮಾಡಿದ ಧೀರ ಮಹಿಳೆಯ ಕತೆಯನ್ನು ಸಾಕ್ಷ್ಯಚಿತ್ರದಲ್ಲಿ ನೋಡಬಹುದು.<br /> <br /> ಜನನಿ ಕ್ರಿಯೇಷನ್ಸ್ನ ನಿರ್ದೇಶಕ ಹಾಗೂ ನಿರ್ಮಾಪಕ ಅಯ್ಯಪ್ಪ ರಾಮತೀರ್ಥ ಅವರು ಈ ಚಿತ್ರಕ್ಕೆ ಕತೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ನೀಡಿದ್ದು, ಬಿ.ಎಚ್.ಮುರಳಿ ನಿರೂಪಣೆ ಮಾಡಿದ್ದಾರೆ. ನಯನಾ ಕಾವೇರಪ್ಪ ಭಾನೋಟ್ ಪಾತ್ರಕ್ಕೆ ಜೀವ ತುಂಬಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಶ್ವ ಮಹಿಳಾ ದಿನದ ಪ್ರಯುಕ್ತ ದೂರದರ್ಶನದ ಚಂದನ ಕನ್ನಡ ವಾಹಿನಿಯಲ್ಲಿ ರಾತ್ರಿ 8ರಿಂದ 8.30ಕ್ಕೆ ಖ್ಯಾತ ಗಗನಸಖಿ ನೀರಜಾ ಭಾನೋಟ್ ಅವರ ಜೀವನ ಚರಿತ್ರೆ ಕುರಿತ 30 ನಿಮಿಷಗಳ ಶೈಕ್ಷಣಿಕ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.<br /> <br /> ಚಂಡೀಗಡ, ಬೆಂಗಳೂರು ವಿಮಾನ ನಿಲ್ದಾಣ, ಎಚ್.ಎ.ಎಲ್ ಗ್ರಂಥಾಲಯಗಳಲ್ಲಿ ಈ ಸಾಕ್ಷ್ಯಚಿತ್ರ ಚಿತ್ರೀಕರಿಸಲಾಗಿದೆ.<br /> <br /> ನೀರಜಾ ಭಾನೋಟ್ ಒಬ್ಬ ಸಾಹಸಿ ಮಹಿಳೆಯಾಗಿದ್ದು, 1986 ಸೆಪ್ಟೆಂಬರ್5ರಂದು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಈಕೆ ಕರ್ತವ್ಯ ನಿರ್ವಹಿಸುತ್ತಿದ್ದ `ಪಾನ್ ಅಮೆರಿಕಾ ನಂ73 ಬೋಯಿಂಗ್ 747~ ವಿಮಾನ ಉಗ್ರರಿಂದ ಹೈಜಾಕ್ ಆಗುತ್ತದೆ.<br /> <br /> ಇಂಥ ಸಮಯದಲ್ಲಿ 400 ಪ್ರಯಾಣಿಕರನ್ನು ವಿಮಾನದ ತುರ್ತುದ್ವಾರವನ್ನು ತೆಗೆದು ಪ್ರಾಣಾಪಾಯದಿಂದ ಪಾರು ಮಾಡುತ್ತಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಮೂವರು ಮಕ್ಕಳನ್ನು ಕಾಪಾಡಲು ಹೋಗಿ ಕೊನೆಗೆ ಉಗ್ರರ ಗುಂಡಿಗೆ ಎದೆಯೊಡ್ಡಿ ಪ್ರಾಣ ತ್ಯಾಗಮಾಡಿದ ಧೀರ ಮಹಿಳೆಯ ಕತೆಯನ್ನು ಸಾಕ್ಷ್ಯಚಿತ್ರದಲ್ಲಿ ನೋಡಬಹುದು.<br /> <br /> ಜನನಿ ಕ್ರಿಯೇಷನ್ಸ್ನ ನಿರ್ದೇಶಕ ಹಾಗೂ ನಿರ್ಮಾಪಕ ಅಯ್ಯಪ್ಪ ರಾಮತೀರ್ಥ ಅವರು ಈ ಚಿತ್ರಕ್ಕೆ ಕತೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ನೀಡಿದ್ದು, ಬಿ.ಎಚ್.ಮುರಳಿ ನಿರೂಪಣೆ ಮಾಡಿದ್ದಾರೆ. ನಯನಾ ಕಾವೇರಪ್ಪ ಭಾನೋಟ್ ಪಾತ್ರಕ್ಕೆ ಜೀವ ತುಂಬಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>