<p>ವಿಷ್ಣು ಇಲ್ಲದ ಮನೆ ಅಂಗಳ. ಅಲ್ಲಿ ಮುಗುಳ್ನಗುತ್ತಿದ್ದ ದೊಡ್ಡ ವಿಷ್ಣು ಭಾವಚಿತ್ರ. ಅದರ ಮುಂದೆ ನಿರಾಸೆ ತುಂಬಿಕೊಂಡು ಕುಳಿತಿದ್ದರು ಭಾರತಿ ವಿಷ್ಣುವರ್ಧನ್. ಅವರು ನಿಧನಿಧಾನವಾಗಿ ಆಡಿದ ವಿಷಾದ ತುಂಬಿದ ಮಾತುಗಳಲ್ಲಿ ನೋವು ಬೆರೆತಿತ್ತು.<br /> <br /> `ನನ್ನ ಪತಿಯನ್ನು ನನಗೇ ಕೊಟ್ಟಿದ್ದರೆ ಇಷ್ಟೊತ್ತಿಗೆ ಸಣ್ಣ ಜಾಗದಲ್ಲಿ ಅವರ ಸಮಾಧಿ ಮಾಡಿ ಕೈಲಾದಷ್ಟು ಕೆಲಸ ಮಾಡುತ್ತಿದ್ದೆ. ಈಗ ಸರ್ಕಾರ ತಾನೂ ಮಾಡುತ್ತಿಲ್ಲ. ನಮ್ಮ ಕೈಗಳನ್ನೂ ಕಟ್ಟಿಹಾಕಿದೆ~ ಎಂದು ನೋವಿನಿಂದ ನುಡಿದರು.<br /> <br /> `ಒಂದೂವರೆ ವರ್ಷದಿಂದ ಸ್ಮಾರಕದ ವಿಚಾರದಲ್ಲಿ ಇಂದು ನಾಳೆ ಎಂದು ಸತಾಯಿಸುತ್ತಿರುವ ಸರ್ಕಾರದವರು ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಮುಂದಿನ ವಾರ ಅಂತಿಮವಾಗಿ ಒಂದು ಬಾರಿ ಭೇಟಿ ಮಾಡಿ ವಿಷಯ ತಿಳಿಸುವೆ. <br /> <br /> ಸೆಪ್ಟೆಂಬರ್18ರೊಳಗೆ ಸರ್ಕಾರದಿಂದ ಅಂತಿಮ ತೀರ್ಮಾನ ಬರದಿದ್ದರೆ ಇನ್ನು ಮುಂದೆ ನಾನು ಈ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ. ಅದನ್ನು ಕೈಚೆಲ್ಲಿ ಬಿಡುವೆ. ನನ್ನನ್ನು ಅಭಿಮಾನಿಗಳು ಕ್ಷಮಿಸಬೇಕು. ನನ್ನ ಪತಿ ಎಂದೂ ಯಾರ ಮುಂದೆಯೂ ಕೈಚಾಚಿ ಬಲವಂತ ಪಡಿಸಿದವರಲ್ಲ.<br /> <br /> ಅದರಿಂದ ನಾನೂ ಯಾರ ಮುಂದೆಯೂ ಕೈಚಾಚಲು ಇಷ್ಟಪಡುವುದಿಲ್ಲ. ಅಭಿಮಾನ್ ಸ್ಟುಡಿಯೋದ ಆಂತರಿಕ ಸಮಸ್ಯೆಯನ್ನು ಸರ್ಕಾರಕ್ಕೆ ಬಗೆಹರಿಸುವುದು ಕಷ್ಟವಲ್ಲ. ನಟ ಬಾಲಕೃಷ್ಣ ಅವರ ಕುಟುಂಬದವರಿಗೆ ಸ್ಟುಡಿಯೋ ಸೇರಿಹೋಗಿದೆ. ನಾವು ಏನೂ ಮಾಡಲು ಆಗುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ.<br /> <br /> ಅಲ್ಲಿ `ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ~ ನಿರ್ಮಿಸಬೇಕೆಂದು ತೀರ್ಮಾನಿಸಲಾಗಿತ್ತು. ರಾಜ್ಯ ಸರ್ಕಾರ ತಕರಾರು ಸರಿಪಡಿಸಿ ಜಾಗ ಕೊಡದಿದ್ದರೆ ಅದು ಹೇಗೆ ಸಾಧ್ಯ?~ ಎಂದು ಅವರು ಬೇಸರಿಸಿಕೊಂಡರು.<br /> <br /> `ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ತಮ್ಮ ನಿರ್ಮಾಣದ ಚಿತ್ರಕ್ಕೆ `ವಿಷ್ಣುವರ್ಧನ~ ಎಂದು ಹೆಸರಿಡಬೇಕು ಎಂದು ತೀರ್ಮಾನಿಸಿದರು. ನಾನು ವಿರೋಧಿಸಿದೆ. ಇದೀಗ ನಿರ್ಮಾಪಕರ ಸಂಘದಲ್ಲಿ ಸಂಧಾನ ನಡೆದು, ಚಿತ್ರವನ್ನು ನಮಗೆ ತೋರಿಸಿದ ನಂತರ ನಾವು ಒಪ್ಪಿದರಷ್ಟೇ ಚಿತ್ರಕ್ಕೆ ಆ ಹೆಸರು ಇಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.<br /> <br /> ನಮ್ಮ ಒಪ್ಪಿಗೆ ಸಿಗುವವರೆಗೂ `ಪ್ರೊಡಕ್ಷನ್-48~ ಎಂದೇ ಚಿತ್ರವನ್ನು ಹೆಸರಿಸಬೇಕು ಎಂದು ಹೇಳಲಾಗಿದೆ. ಆದರೂ `ವಿಷ್ಣುವರ್ಧನ~ ಹೆಸರಿನಲ್ಲಿ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಎಲ್ಲಿಯೂ ಸಂಧಾನದ ಬಗ್ಗೆ ಪ್ರಸ್ತಾಪ ಇಲ್ಲ. ಇದರಿಂದ ತುಂಬಾ ನೋವಾಗಿದೆ~ ಎಂದು ಭಾರವಾದ ದನಿಯಲ್ಲಿ ನುಡಿದರು.<br /> <br /> ಸೆ.18 ವಿಷ್ಣುವರ್ಧನ್ ಅವರ 61ನೇ ವರ್ಷದ ಹುಟ್ಟುಹಬ್ಬ ಸಮಾರಂಭದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತಿ ವಿಷ್ಣುವರ್ಧನ್ ಮಾತುಗಳು ಹೀಗೆ ಭಾರವಾಗಿದ್ದವು.<br /> <br /> ಹಿರಿಯ ನಟ ಶಿವರಾಂ. ವಿಷ್ಣುವರ್ಧನ್ ಹಿರಿಯ ಸೋದರ ರವಿಕುಮಾರ್, ನಟ ಅನಿರುದ್ಧ್ ಹಾಜರಿದ್ದರು.<br /> <br /> <strong>ಕಾರ್ಯಕ್ರಮಗಳು</strong><br /> ಸೆ.17ರಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಪ್ರವೇಶ ಉಚಿತ. ಮುಖ್ಯಮಂತ್ರಿ ಸದಾನಂದ ಗೌಡ ಸಮಾರಂಭ ಉದ್ಘಾಟಿಸಲಿದ್ದಾರೆ. <br /> ಸೆ.18ರಂದು ಜಯನಗರದ ಉದ್ಯಾನವನಕ್ಕೆ `ಸಾಹಸ ಸಿಂಹ ಡಾ.ವಿಷ್ಣುವರ್ಧನ್ ವಿಶ್ರಾಂತಿ ವನ~ ಎಂದು ಸರ್ಕಾರ ಹೆಸರಿಡಲಿದೆ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿ ರಕ್ತದಾನ ಶಿಬಿರ, ಸೂಪರ್ ಸ್ಪೆಶಾಲಿಟಿ ಐ ಹಾಸ್ಪಿಟಲ್ನ ಡಾ.ಮುರಳೀಧರ್ ನೇತೃತ್ವದಲ್ಲಿ ನೇತ್ರದಾನ ಮತ್ತು ತಪಾಸಣಾ ಶಿಬಿರ, ಡಾ.ಶ್ರೀನಿವಾಸ್ ನೇತೃತ್ವದಲ್ಲಿ ಹೋಮಿಯೋಪತಿ ವೈದ್ಯಕೀಯ ತಪಾಸಣೆ ಶಿಬಿರ ನಡೆಯಲಿದೆ. <br /> <br /> ಸಮಾಧಿ ಸ್ಥಳದಲ್ಲಿ ದೇವರಚಿಕ್ಕನಹಳ್ಳಿಯ ಸಿಂಹಾದ್ರಿ ಸಂಘದ ವೆಂಕಟೇಶ್ ಅವರು ಸೆ.17 ಮತ್ತು ಸೆ.18ರಂದು ಅಭಿಮಾನಿಗಳಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಷ್ಣು ಇಲ್ಲದ ಮನೆ ಅಂಗಳ. ಅಲ್ಲಿ ಮುಗುಳ್ನಗುತ್ತಿದ್ದ ದೊಡ್ಡ ವಿಷ್ಣು ಭಾವಚಿತ್ರ. ಅದರ ಮುಂದೆ ನಿರಾಸೆ ತುಂಬಿಕೊಂಡು ಕುಳಿತಿದ್ದರು ಭಾರತಿ ವಿಷ್ಣುವರ್ಧನ್. ಅವರು ನಿಧನಿಧಾನವಾಗಿ ಆಡಿದ ವಿಷಾದ ತುಂಬಿದ ಮಾತುಗಳಲ್ಲಿ ನೋವು ಬೆರೆತಿತ್ತು.<br /> <br /> `ನನ್ನ ಪತಿಯನ್ನು ನನಗೇ ಕೊಟ್ಟಿದ್ದರೆ ಇಷ್ಟೊತ್ತಿಗೆ ಸಣ್ಣ ಜಾಗದಲ್ಲಿ ಅವರ ಸಮಾಧಿ ಮಾಡಿ ಕೈಲಾದಷ್ಟು ಕೆಲಸ ಮಾಡುತ್ತಿದ್ದೆ. ಈಗ ಸರ್ಕಾರ ತಾನೂ ಮಾಡುತ್ತಿಲ್ಲ. ನಮ್ಮ ಕೈಗಳನ್ನೂ ಕಟ್ಟಿಹಾಕಿದೆ~ ಎಂದು ನೋವಿನಿಂದ ನುಡಿದರು.<br /> <br /> `ಒಂದೂವರೆ ವರ್ಷದಿಂದ ಸ್ಮಾರಕದ ವಿಚಾರದಲ್ಲಿ ಇಂದು ನಾಳೆ ಎಂದು ಸತಾಯಿಸುತ್ತಿರುವ ಸರ್ಕಾರದವರು ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಮುಂದಿನ ವಾರ ಅಂತಿಮವಾಗಿ ಒಂದು ಬಾರಿ ಭೇಟಿ ಮಾಡಿ ವಿಷಯ ತಿಳಿಸುವೆ. <br /> <br /> ಸೆಪ್ಟೆಂಬರ್18ರೊಳಗೆ ಸರ್ಕಾರದಿಂದ ಅಂತಿಮ ತೀರ್ಮಾನ ಬರದಿದ್ದರೆ ಇನ್ನು ಮುಂದೆ ನಾನು ಈ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ. ಅದನ್ನು ಕೈಚೆಲ್ಲಿ ಬಿಡುವೆ. ನನ್ನನ್ನು ಅಭಿಮಾನಿಗಳು ಕ್ಷಮಿಸಬೇಕು. ನನ್ನ ಪತಿ ಎಂದೂ ಯಾರ ಮುಂದೆಯೂ ಕೈಚಾಚಿ ಬಲವಂತ ಪಡಿಸಿದವರಲ್ಲ.<br /> <br /> ಅದರಿಂದ ನಾನೂ ಯಾರ ಮುಂದೆಯೂ ಕೈಚಾಚಲು ಇಷ್ಟಪಡುವುದಿಲ್ಲ. ಅಭಿಮಾನ್ ಸ್ಟುಡಿಯೋದ ಆಂತರಿಕ ಸಮಸ್ಯೆಯನ್ನು ಸರ್ಕಾರಕ್ಕೆ ಬಗೆಹರಿಸುವುದು ಕಷ್ಟವಲ್ಲ. ನಟ ಬಾಲಕೃಷ್ಣ ಅವರ ಕುಟುಂಬದವರಿಗೆ ಸ್ಟುಡಿಯೋ ಸೇರಿಹೋಗಿದೆ. ನಾವು ಏನೂ ಮಾಡಲು ಆಗುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ.<br /> <br /> ಅಲ್ಲಿ `ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ~ ನಿರ್ಮಿಸಬೇಕೆಂದು ತೀರ್ಮಾನಿಸಲಾಗಿತ್ತು. ರಾಜ್ಯ ಸರ್ಕಾರ ತಕರಾರು ಸರಿಪಡಿಸಿ ಜಾಗ ಕೊಡದಿದ್ದರೆ ಅದು ಹೇಗೆ ಸಾಧ್ಯ?~ ಎಂದು ಅವರು ಬೇಸರಿಸಿಕೊಂಡರು.<br /> <br /> `ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ತಮ್ಮ ನಿರ್ಮಾಣದ ಚಿತ್ರಕ್ಕೆ `ವಿಷ್ಣುವರ್ಧನ~ ಎಂದು ಹೆಸರಿಡಬೇಕು ಎಂದು ತೀರ್ಮಾನಿಸಿದರು. ನಾನು ವಿರೋಧಿಸಿದೆ. ಇದೀಗ ನಿರ್ಮಾಪಕರ ಸಂಘದಲ್ಲಿ ಸಂಧಾನ ನಡೆದು, ಚಿತ್ರವನ್ನು ನಮಗೆ ತೋರಿಸಿದ ನಂತರ ನಾವು ಒಪ್ಪಿದರಷ್ಟೇ ಚಿತ್ರಕ್ಕೆ ಆ ಹೆಸರು ಇಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.<br /> <br /> ನಮ್ಮ ಒಪ್ಪಿಗೆ ಸಿಗುವವರೆಗೂ `ಪ್ರೊಡಕ್ಷನ್-48~ ಎಂದೇ ಚಿತ್ರವನ್ನು ಹೆಸರಿಸಬೇಕು ಎಂದು ಹೇಳಲಾಗಿದೆ. ಆದರೂ `ವಿಷ್ಣುವರ್ಧನ~ ಹೆಸರಿನಲ್ಲಿ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಎಲ್ಲಿಯೂ ಸಂಧಾನದ ಬಗ್ಗೆ ಪ್ರಸ್ತಾಪ ಇಲ್ಲ. ಇದರಿಂದ ತುಂಬಾ ನೋವಾಗಿದೆ~ ಎಂದು ಭಾರವಾದ ದನಿಯಲ್ಲಿ ನುಡಿದರು.<br /> <br /> ಸೆ.18 ವಿಷ್ಣುವರ್ಧನ್ ಅವರ 61ನೇ ವರ್ಷದ ಹುಟ್ಟುಹಬ್ಬ ಸಮಾರಂಭದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತಿ ವಿಷ್ಣುವರ್ಧನ್ ಮಾತುಗಳು ಹೀಗೆ ಭಾರವಾಗಿದ್ದವು.<br /> <br /> ಹಿರಿಯ ನಟ ಶಿವರಾಂ. ವಿಷ್ಣುವರ್ಧನ್ ಹಿರಿಯ ಸೋದರ ರವಿಕುಮಾರ್, ನಟ ಅನಿರುದ್ಧ್ ಹಾಜರಿದ್ದರು.<br /> <br /> <strong>ಕಾರ್ಯಕ್ರಮಗಳು</strong><br /> ಸೆ.17ರಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಪ್ರವೇಶ ಉಚಿತ. ಮುಖ್ಯಮಂತ್ರಿ ಸದಾನಂದ ಗೌಡ ಸಮಾರಂಭ ಉದ್ಘಾಟಿಸಲಿದ್ದಾರೆ. <br /> ಸೆ.18ರಂದು ಜಯನಗರದ ಉದ್ಯಾನವನಕ್ಕೆ `ಸಾಹಸ ಸಿಂಹ ಡಾ.ವಿಷ್ಣುವರ್ಧನ್ ವಿಶ್ರಾಂತಿ ವನ~ ಎಂದು ಸರ್ಕಾರ ಹೆಸರಿಡಲಿದೆ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿ ರಕ್ತದಾನ ಶಿಬಿರ, ಸೂಪರ್ ಸ್ಪೆಶಾಲಿಟಿ ಐ ಹಾಸ್ಪಿಟಲ್ನ ಡಾ.ಮುರಳೀಧರ್ ನೇತೃತ್ವದಲ್ಲಿ ನೇತ್ರದಾನ ಮತ್ತು ತಪಾಸಣಾ ಶಿಬಿರ, ಡಾ.ಶ್ರೀನಿವಾಸ್ ನೇತೃತ್ವದಲ್ಲಿ ಹೋಮಿಯೋಪತಿ ವೈದ್ಯಕೀಯ ತಪಾಸಣೆ ಶಿಬಿರ ನಡೆಯಲಿದೆ. <br /> <br /> ಸಮಾಧಿ ಸ್ಥಳದಲ್ಲಿ ದೇವರಚಿಕ್ಕನಹಳ್ಳಿಯ ಸಿಂಹಾದ್ರಿ ಸಂಘದ ವೆಂಕಟೇಶ್ ಅವರು ಸೆ.17 ಮತ್ತು ಸೆ.18ರಂದು ಅಭಿಮಾನಿಗಳಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>