<p>ತನ್ನತ್ತ ನುಗ್ಗಿ ಬರುತ್ತಿದ್ದ ರೌಡಿಗಳನ್ನು ಹೊಡೆದು ಉರುಳಿಸುತ್ತಿದ್ದರು ಪ್ರಜ್ವಲ್ ದೇವರಾಜ್. ಕೆಲವೇ ಅಂತರದಲ್ಲಿ ಬೆದರಿದ ಹರಿಣಿಯಂತೆ ನಿಂತಿದ್ದರು ಐಂದ್ರಿತಾ ರೇ. `ಕಟ್~ ಎಂದು ಬ್ರೇಕ್ ಹಾಕಿದ ಸಾಹಸ ನಿರ್ದೇಶಕ ರವಿವರ್ಮ, ಪೆಟ್ಟು ತಿನ್ನುವ ರೌಡಿಗೆ ಹೇಗೆ ಉರುಳಿ ಬೀಳಬೇಕೆಂಬ ಪಾಠ ಹೇಳಿಕೊಟ್ಟರು.<br /> <br /> ಬೆಂಗಳೂರಿನ ಬಿಜಿಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ `ಜಿದ್ದಿ~ ಚಿತ್ರದ ಹೊಡೆದಾಟ ಸನ್ನಿವೇಶದ ಚಿತ್ರೀಕರಣ ಸಂದರ್ಭವದು. ಕಾಲೇಜಿನಲ್ಲಿ ನಡೆಯುವ ಸಾಹಸ ದೃಶ್ಯಗಳನ್ನು ಛಾಯಾಗ್ರಾಹಕ ನಿರಂಜನ್ ಬಾಬು ಸೆರೆಹಿಡಿಯುತ್ತಿದ್ದರು. ಬಳಿಕ ಚಿತ್ರತಂಡ ಸುದ್ದಿಗೋಷ್ಠಿಗಾಗಿ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಪಡೆಯಿತು.<br /> <br /> `ಜಿದ್ದಿ~ ಮಲಯಾಳಂ ನ `ಪುದಿಯೋಗಂ~ ಚಿತ್ರದ ರೀಮೇಕ್. ನಾಯಕ ಹಳ್ಳಿ ಹೈದ. ಓದಲು ನಗರಕ್ಕೆ ಬರುವ ಆತನಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೊತೆ ವೈಷಮ್ಯ ಬೆಳೆಯುತ್ತದೆ. ನಾಯಕಿ ಸಹ ಅದೇ ಕಾಲೇಜಿಗೆ ಸೇರಿಕೊಂಡಿರುತ್ತಾಳೆ. <br /> <br /> ನಾಯಕಿಗೆ ನಾಯಕನ ಮೇಲೆ ಪ್ರೀತಿ. ಖಳನಾಯಕನಿಗೆ ನಾಯಕಿ ಮೇಲೆ ಪ್ರೀತಿ. ಇಬ್ಬರ ನಡುವೆ ಸೂಕ್ಷ್ಮ ಮನಸ್ಸಿನ ನಾಯಕನ ಮೇಲೆ ಏನೆಲ್ಲಾ ಪರಿಣಾಮವಾಗುತ್ತದೆ ಎಂಬುದು ಚಿತ್ರದ ಕಥೆ.<br /> <br /> `ಜಿದ್ದಿ~ ಎಂದರೆ ಹಠಮಾರಿ, ಸೇಡು ಎಂದರ್ಥ ಎಂದು ವಿವರಿಸಿದರು ನಿರ್ದೇಶಕ ಅನಂತ ರಾಜು. ಹಳ್ಳಿಯ ಸನ್ನಿವೇಶಗಳಿಗಾಗಿ ಚಿತ್ರತಂಡ ಚೆನ್ನಪಟ್ಟಣ, ಅರಸೀಕೆರೆ ಮತ್ತು ಮೇಲುಕೋಟೆಗಳಿಗೆ ತೆರಳಲಿದೆ. ಉಳಿದಂತೆ ಇತರ ಭಾಗವೆಲ್ಲಾ ಬೆಂಗಳೂರಿನಲ್ಲಿಯೇ ನಡೆಯಲಿದೆ.<br /> <br /> ಯೋಗರಾಜ್ ಭಟ್ ಬರೆದ ಹಾಡೊಂದನ್ನು ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದೆ. ಅದು ಭಟ್ಟರ ಟಿಪಿಕಲ್ ಶೈಲಿಯಲ್ಲಿ ಮೂಡಿಬಂದ ಹಾಡು. ಹೀಗಾಗಿ ಆ ಹಾಡು ಹಿಟ್ ಆಗಲಿದೆ ಎಂಬ ಭರವಸೆ ನಾಯಕ ನಟ ಪ್ರಜ್ವಲ್ ದೇವರಾಜ್ ಅವರದು. <br /> <br /> ನಟಿ ಐಂದ್ರಿತಾ ರೇ ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರತಂಡವೂ ಚೆನ್ನಾಗಿದೆ. ಒಳ್ಳೆ ಸಿನಿಮಾ ಮಾಡುತ್ತಿರುವ ಖುಷಿ ಇದೆ ಎಂದು ಕೆಲವೇ ಪದಗಳಿಗೆ ಮಾತು ಮುಗಿಸಿದರು.<br /> <br /> ಚಿತ್ರದಲ್ಲಿ ಖಳನಾಯಕ ಹಾಗೂ ನಾಯಕಿಯ ಕುಟುಂಬಗಳು ಉತ್ತಮ ಬಾಂಧವ್ಯ ಹೊಂದಿರುತ್ತವೆ. ಖಳನಾಯಕನ ಪಾತ್ರಧಾರಿ ತಿಲಕ್ ತಮ್ಮದು ಎಕ್ಸೈಟಿಂಗ್ ಪಾತ್ರ ಎಂದರು. ಮಾಮೂಲಿ ಖಳನಾಯಕರಂತೆ ಆರ್ಭಟಿಸಿ ಹೋಗುವ ಪಾತ್ರವಲ್ಲ. ಸಾಕಷ್ಟು ವೈವಿಧ್ಯಮಯವಾಗಿದೆ ಎಂದರು. <br /> <br /> ವಿಜಯ್ ಸುರಾನಾ ಹಾಗೂ ಅಮರ್ಚಂದ್ ಜೈನ್ ಜೋಡಿ ಒಟ್ಟಾಗಿ ಸೇರಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು. ಗಿರಿಧರ್ ದಿವಾನ್ ಸಂಗೀತ ಹೊಸೆಯುವ ಹೊಣೆ ಹೊತ್ತಿದ್ದಾರೆ. ಅಕ್ಟೋಬರ್ ಒಳಗೆ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ಅನಂತ ರಾಜು ಅವರದು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತನ್ನತ್ತ ನುಗ್ಗಿ ಬರುತ್ತಿದ್ದ ರೌಡಿಗಳನ್ನು ಹೊಡೆದು ಉರುಳಿಸುತ್ತಿದ್ದರು ಪ್ರಜ್ವಲ್ ದೇವರಾಜ್. ಕೆಲವೇ ಅಂತರದಲ್ಲಿ ಬೆದರಿದ ಹರಿಣಿಯಂತೆ ನಿಂತಿದ್ದರು ಐಂದ್ರಿತಾ ರೇ. `ಕಟ್~ ಎಂದು ಬ್ರೇಕ್ ಹಾಕಿದ ಸಾಹಸ ನಿರ್ದೇಶಕ ರವಿವರ್ಮ, ಪೆಟ್ಟು ತಿನ್ನುವ ರೌಡಿಗೆ ಹೇಗೆ ಉರುಳಿ ಬೀಳಬೇಕೆಂಬ ಪಾಠ ಹೇಳಿಕೊಟ್ಟರು.<br /> <br /> ಬೆಂಗಳೂರಿನ ಬಿಜಿಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ `ಜಿದ್ದಿ~ ಚಿತ್ರದ ಹೊಡೆದಾಟ ಸನ್ನಿವೇಶದ ಚಿತ್ರೀಕರಣ ಸಂದರ್ಭವದು. ಕಾಲೇಜಿನಲ್ಲಿ ನಡೆಯುವ ಸಾಹಸ ದೃಶ್ಯಗಳನ್ನು ಛಾಯಾಗ್ರಾಹಕ ನಿರಂಜನ್ ಬಾಬು ಸೆರೆಹಿಡಿಯುತ್ತಿದ್ದರು. ಬಳಿಕ ಚಿತ್ರತಂಡ ಸುದ್ದಿಗೋಷ್ಠಿಗಾಗಿ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಪಡೆಯಿತು.<br /> <br /> `ಜಿದ್ದಿ~ ಮಲಯಾಳಂ ನ `ಪುದಿಯೋಗಂ~ ಚಿತ್ರದ ರೀಮೇಕ್. ನಾಯಕ ಹಳ್ಳಿ ಹೈದ. ಓದಲು ನಗರಕ್ಕೆ ಬರುವ ಆತನಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೊತೆ ವೈಷಮ್ಯ ಬೆಳೆಯುತ್ತದೆ. ನಾಯಕಿ ಸಹ ಅದೇ ಕಾಲೇಜಿಗೆ ಸೇರಿಕೊಂಡಿರುತ್ತಾಳೆ. <br /> <br /> ನಾಯಕಿಗೆ ನಾಯಕನ ಮೇಲೆ ಪ್ರೀತಿ. ಖಳನಾಯಕನಿಗೆ ನಾಯಕಿ ಮೇಲೆ ಪ್ರೀತಿ. ಇಬ್ಬರ ನಡುವೆ ಸೂಕ್ಷ್ಮ ಮನಸ್ಸಿನ ನಾಯಕನ ಮೇಲೆ ಏನೆಲ್ಲಾ ಪರಿಣಾಮವಾಗುತ್ತದೆ ಎಂಬುದು ಚಿತ್ರದ ಕಥೆ.<br /> <br /> `ಜಿದ್ದಿ~ ಎಂದರೆ ಹಠಮಾರಿ, ಸೇಡು ಎಂದರ್ಥ ಎಂದು ವಿವರಿಸಿದರು ನಿರ್ದೇಶಕ ಅನಂತ ರಾಜು. ಹಳ್ಳಿಯ ಸನ್ನಿವೇಶಗಳಿಗಾಗಿ ಚಿತ್ರತಂಡ ಚೆನ್ನಪಟ್ಟಣ, ಅರಸೀಕೆರೆ ಮತ್ತು ಮೇಲುಕೋಟೆಗಳಿಗೆ ತೆರಳಲಿದೆ. ಉಳಿದಂತೆ ಇತರ ಭಾಗವೆಲ್ಲಾ ಬೆಂಗಳೂರಿನಲ್ಲಿಯೇ ನಡೆಯಲಿದೆ.<br /> <br /> ಯೋಗರಾಜ್ ಭಟ್ ಬರೆದ ಹಾಡೊಂದನ್ನು ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದೆ. ಅದು ಭಟ್ಟರ ಟಿಪಿಕಲ್ ಶೈಲಿಯಲ್ಲಿ ಮೂಡಿಬಂದ ಹಾಡು. ಹೀಗಾಗಿ ಆ ಹಾಡು ಹಿಟ್ ಆಗಲಿದೆ ಎಂಬ ಭರವಸೆ ನಾಯಕ ನಟ ಪ್ರಜ್ವಲ್ ದೇವರಾಜ್ ಅವರದು. <br /> <br /> ನಟಿ ಐಂದ್ರಿತಾ ರೇ ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರತಂಡವೂ ಚೆನ್ನಾಗಿದೆ. ಒಳ್ಳೆ ಸಿನಿಮಾ ಮಾಡುತ್ತಿರುವ ಖುಷಿ ಇದೆ ಎಂದು ಕೆಲವೇ ಪದಗಳಿಗೆ ಮಾತು ಮುಗಿಸಿದರು.<br /> <br /> ಚಿತ್ರದಲ್ಲಿ ಖಳನಾಯಕ ಹಾಗೂ ನಾಯಕಿಯ ಕುಟುಂಬಗಳು ಉತ್ತಮ ಬಾಂಧವ್ಯ ಹೊಂದಿರುತ್ತವೆ. ಖಳನಾಯಕನ ಪಾತ್ರಧಾರಿ ತಿಲಕ್ ತಮ್ಮದು ಎಕ್ಸೈಟಿಂಗ್ ಪಾತ್ರ ಎಂದರು. ಮಾಮೂಲಿ ಖಳನಾಯಕರಂತೆ ಆರ್ಭಟಿಸಿ ಹೋಗುವ ಪಾತ್ರವಲ್ಲ. ಸಾಕಷ್ಟು ವೈವಿಧ್ಯಮಯವಾಗಿದೆ ಎಂದರು. <br /> <br /> ವಿಜಯ್ ಸುರಾನಾ ಹಾಗೂ ಅಮರ್ಚಂದ್ ಜೈನ್ ಜೋಡಿ ಒಟ್ಟಾಗಿ ಸೇರಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು. ಗಿರಿಧರ್ ದಿವಾನ್ ಸಂಗೀತ ಹೊಸೆಯುವ ಹೊಣೆ ಹೊತ್ತಿದ್ದಾರೆ. ಅಕ್ಟೋಬರ್ ಒಳಗೆ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ಅನಂತ ರಾಜು ಅವರದು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>