<p><strong>ಶೀಘ್ರ `ಸೈಲೆನ್ಸ್~</strong></p>.<p>ಎಂ. ಕೃಷ್ಣಮೂರ್ತಿ ನಿರ್ಮಿಸುತ್ತಿರುವ `ಸೈಲೆನ್ಸ್~ ಚಿತ್ರದ ಚಿತ್ರೀಕರಣ ಮತ್ತು ನಂತರದ ಚಟುವಟಿಕೆಗಳು ಮುಗಿದಿವೆ. ಕಳೆದ ವಾರ ಸೆನ್ಸಾರ್ ಮಂಡಳಿ ಚಿತ್ರಕ್ಕೆ `ಎ~ ಪ್ರಮಾಣಪತ್ರ ನೀಡಿದೆ. <br /> <br /> ಎ. ವೇಣುಗೋಪಾಲ್ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಂ.ಆರ್. ಚವಾಣ್ ಛಾಯಾಗ್ರಹಣ, ವಿಜಯಭಾರತಿ ಸಂಗೀತ, ಕನ್ನಡಿಗ ಶಿವು ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ಪ್ರಸಾದ್ ತ್ರಿಭುವನ, ಕಪಿಲ್ ನೃತ್ಯ ನಿರ್ದೇಶನ, ಶ್ಯಾಂ ಸಂಕಲನವಿದೆ. ಕುಮಾರ್, ಸುರೇಖಾ, ಪಲ್ಲವಿ, ನಿಶಾ ಶೆಟ್ಟಿ, ಥ್ರಿಲ್ಲರ್ಮಂಜು, ರಮೇಶ್ಭಟ್, ಸಂಗಮೇಶ್, ಪದ್ಮಜಾರಾವ್, ಬಿರಾದರ್ ಅಭಿನಯಿಸಿದ್ದಾರೆ.</p>.<p><br /> <strong>ಹಾಡಿನಲ್ಲಿ `ಪ್ರೇಮಿಗಳ ದಿನ~ </strong><br /> `ಪ್ರೇಮಿಗಳ ದಿನ~ ಚಿತ್ರಕ್ಕಾಗಿ ಸುದರ್ಶನ್ ಅವರು ಬರೆದಿರುವ `ಬಚ್ಚಿಟ್ಟ ಮನಸಿದು ಕೂಡಿಟ್ಟ ವಯಸ್ಸಿದು ನಮಗಿಲ್ಲ ಯಾವ ಟೆನ್ಷನ್~ ಎಂಬ ಗೀತೆಗೆ ರಾಕೇಶ್ ಹಾಗೂ ರೂಪ ನಟರಾಜ್ ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದರು. <br /> <br /> ಅರವಿಂದ್ ನೃತ್ಯ ನಿರ್ದೇಶನ ಮಾಡಿದ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ಮೇಲು ಸೇತುವೆ ಮುಂತಾದ ಕಡೆ ನಡೆದಿದೆ. <br /> <br /> ನಿರ್ಮಾಣ ನಿರ್ದೇಶನದ ಹೊಣೆ ಸಂತೋಷ್ಕುಮಾರ್ ಅವರದ್ದು. ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. <br /> <br /> <strong>ವಿದೇಶದಲ್ಲಿ ಸಾಗರ್ </strong><br /> ನಿರ್ಮಾಪಕ ರಾಮು ನಿರ್ಮಿಸುತ್ತಿರುವ `ಸಾಗರ್~ ಚಿತ್ರಕ್ಕಾಗಿ ಇತ್ತೀಚೆಗೆ ವಿದೇಶದಲ್ಲಿ ಎರಡು ಗೀತೆಗಳನ್ನು ಚಿತ್ರಿಸಲಾಗಿದೆ. ಚಿನ್ನಿಪ್ರಕಾಶ್ ಚಿತ್ರದ ನೃತ್ಯ ನಿರ್ದೇಶಕರು. <br /> <br /> ಸಿಂಗಪೂರ್ ಹಾಗೂ ಆಸ್ಟ್ರೇಲಿಯಾಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಹಾಡಿನ ಹಲವಾರು ಸನ್ನಿವೇಶಗಳನ್ನು ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಎಂ.ಡಿ.ಶ್ರೀಧರ್ ಚಿತ್ರಿಸಿ ಕೊಂಡರು. <br /> <br /> <strong>`ಸಂಸಾರದಲ್ಲಿ ಗೋಲ್ಮಾಲ್~ ಚಿತ್ರೀಕರಣ ಪೂರ್ಣ<br /> </strong>`ಸಂಸಾರದಲ್ಲಿ ಗೋಲ್ಮಾಲ್~ ಚಿತ್ರದಲ್ಲಿ ಐವರು ಸತಿಪತಿಗಳಾಗಿ ಊಮಾಶ್ರೀ-ರಾಜು ತಾಳಿಕೋಟೆ, ಮೋಹನ್-ಅನು ಪ್ರಭಾಕರ್, ಸಿಹಿಕಹಿ ಚಂದ್ರು -ತಾರಾ, ತಬಲಾ ನಾಣಿ - ಲಕ್ಷ್ಮಿ ಭಾಗವತರ್, ಸಾಧು ಕೋಕಿಲ - ನಯನಾ ಕೃಷ್ಣ ಅಭಿನಯಿಸುತ್ತಿದ್ದಾರೆ.<br /> <br /> ಇತ್ತೀಚೆಗೆ ಚಿತ್ರದ ಚಿತ್ರೀಕರಣ ಮುಗಿದಿದೆ. ಹಾಸ್ಯಮಯ ಕತೆಯುಳ್ಳ ಈ ಚಿತ್ರವನ್ನು ಪ್ರಭಾಕರ್ ರೆಡ್ಡಿ ನಿರ್ಮಿಸಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೀಘ್ರ `ಸೈಲೆನ್ಸ್~</strong></p>.<p>ಎಂ. ಕೃಷ್ಣಮೂರ್ತಿ ನಿರ್ಮಿಸುತ್ತಿರುವ `ಸೈಲೆನ್ಸ್~ ಚಿತ್ರದ ಚಿತ್ರೀಕರಣ ಮತ್ತು ನಂತರದ ಚಟುವಟಿಕೆಗಳು ಮುಗಿದಿವೆ. ಕಳೆದ ವಾರ ಸೆನ್ಸಾರ್ ಮಂಡಳಿ ಚಿತ್ರಕ್ಕೆ `ಎ~ ಪ್ರಮಾಣಪತ್ರ ನೀಡಿದೆ. <br /> <br /> ಎ. ವೇಣುಗೋಪಾಲ್ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಂ.ಆರ್. ಚವಾಣ್ ಛಾಯಾಗ್ರಹಣ, ವಿಜಯಭಾರತಿ ಸಂಗೀತ, ಕನ್ನಡಿಗ ಶಿವು ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ಪ್ರಸಾದ್ ತ್ರಿಭುವನ, ಕಪಿಲ್ ನೃತ್ಯ ನಿರ್ದೇಶನ, ಶ್ಯಾಂ ಸಂಕಲನವಿದೆ. ಕುಮಾರ್, ಸುರೇಖಾ, ಪಲ್ಲವಿ, ನಿಶಾ ಶೆಟ್ಟಿ, ಥ್ರಿಲ್ಲರ್ಮಂಜು, ರಮೇಶ್ಭಟ್, ಸಂಗಮೇಶ್, ಪದ್ಮಜಾರಾವ್, ಬಿರಾದರ್ ಅಭಿನಯಿಸಿದ್ದಾರೆ.</p>.<p><br /> <strong>ಹಾಡಿನಲ್ಲಿ `ಪ್ರೇಮಿಗಳ ದಿನ~ </strong><br /> `ಪ್ರೇಮಿಗಳ ದಿನ~ ಚಿತ್ರಕ್ಕಾಗಿ ಸುದರ್ಶನ್ ಅವರು ಬರೆದಿರುವ `ಬಚ್ಚಿಟ್ಟ ಮನಸಿದು ಕೂಡಿಟ್ಟ ವಯಸ್ಸಿದು ನಮಗಿಲ್ಲ ಯಾವ ಟೆನ್ಷನ್~ ಎಂಬ ಗೀತೆಗೆ ರಾಕೇಶ್ ಹಾಗೂ ರೂಪ ನಟರಾಜ್ ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದರು. <br /> <br /> ಅರವಿಂದ್ ನೃತ್ಯ ನಿರ್ದೇಶನ ಮಾಡಿದ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ಮೇಲು ಸೇತುವೆ ಮುಂತಾದ ಕಡೆ ನಡೆದಿದೆ. <br /> <br /> ನಿರ್ಮಾಣ ನಿರ್ದೇಶನದ ಹೊಣೆ ಸಂತೋಷ್ಕುಮಾರ್ ಅವರದ್ದು. ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. <br /> <br /> <strong>ವಿದೇಶದಲ್ಲಿ ಸಾಗರ್ </strong><br /> ನಿರ್ಮಾಪಕ ರಾಮು ನಿರ್ಮಿಸುತ್ತಿರುವ `ಸಾಗರ್~ ಚಿತ್ರಕ್ಕಾಗಿ ಇತ್ತೀಚೆಗೆ ವಿದೇಶದಲ್ಲಿ ಎರಡು ಗೀತೆಗಳನ್ನು ಚಿತ್ರಿಸಲಾಗಿದೆ. ಚಿನ್ನಿಪ್ರಕಾಶ್ ಚಿತ್ರದ ನೃತ್ಯ ನಿರ್ದೇಶಕರು. <br /> <br /> ಸಿಂಗಪೂರ್ ಹಾಗೂ ಆಸ್ಟ್ರೇಲಿಯಾಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಹಾಡಿನ ಹಲವಾರು ಸನ್ನಿವೇಶಗಳನ್ನು ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಎಂ.ಡಿ.ಶ್ರೀಧರ್ ಚಿತ್ರಿಸಿ ಕೊಂಡರು. <br /> <br /> <strong>`ಸಂಸಾರದಲ್ಲಿ ಗೋಲ್ಮಾಲ್~ ಚಿತ್ರೀಕರಣ ಪೂರ್ಣ<br /> </strong>`ಸಂಸಾರದಲ್ಲಿ ಗೋಲ್ಮಾಲ್~ ಚಿತ್ರದಲ್ಲಿ ಐವರು ಸತಿಪತಿಗಳಾಗಿ ಊಮಾಶ್ರೀ-ರಾಜು ತಾಳಿಕೋಟೆ, ಮೋಹನ್-ಅನು ಪ್ರಭಾಕರ್, ಸಿಹಿಕಹಿ ಚಂದ್ರು -ತಾರಾ, ತಬಲಾ ನಾಣಿ - ಲಕ್ಷ್ಮಿ ಭಾಗವತರ್, ಸಾಧು ಕೋಕಿಲ - ನಯನಾ ಕೃಷ್ಣ ಅಭಿನಯಿಸುತ್ತಿದ್ದಾರೆ.<br /> <br /> ಇತ್ತೀಚೆಗೆ ಚಿತ್ರದ ಚಿತ್ರೀಕರಣ ಮುಗಿದಿದೆ. ಹಾಸ್ಯಮಯ ಕತೆಯುಳ್ಳ ಈ ಚಿತ್ರವನ್ನು ಪ್ರಭಾಕರ್ ರೆಡ್ಡಿ ನಿರ್ಮಿಸಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>