ಬೆಂಗಳೂರು: ನಿರ್ದೇಶಕಿ ಮತ್ತು ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಧನುಷ್ ಜತೆಗಿನ ದಾಂಪತ್ಯ ಜೀವನ ಕೊನೆಗೊಳಿಸಿ ವಿಚ್ಛೇದನ ಪಡೆದುಕೊಂಡಿದ್ದಾರೆ.
ವಿಚ್ಛೇದನದ ಬಳಿಕ ಐಶ್ವರ್ಯಾ ಅವರು, ಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.
ಐಶ್ವರ್ಯಾ ಮತ್ತು ಧನುಷ್ ಅವರಿಗೆ ಲಿಂಗ ಮತ್ತು ಯಾತ್ರ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಆದರೆ ವಿಚ್ಛೇದನದ ಬಳಿಕ ಮಕ್ಕಳ ಜತೆ ಹೆಚ್ಚಿನ ಸಮಯ ಕಳೆಯಲಾಗುತ್ತಿಲ್ಲ ಎಂದು ಐಶ್ವರ್ಯಾ ಹೇಳಿಕೊಂಡಿದ್ದರು. ಜತೆಗೆ ವಿಶ್ವ ಕವನ ದಿನದ ಹಿನ್ನೆಲೆಯಲ್ಲಿ ಅವರು ತನ್ನಿಬ್ಬರು ಮಕ್ಕಳಿಗಾಗಿ ವಿಶೇಷ ಕವನ ಒಂದನ್ನು ರಚಿಸಿ, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರ ಐಶ್ವರ್ಯಾ ನಿರ್ದೇಶನದ ತಮಿಳು ಅಲ್ಬಮ್ ಹಾಡು ‘ಪಯಣಿ‘ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ, ಬಾಲಿವುಡ್ನಲ್ಲಿ ‘ಓ ಸಾಥಿ ಚಲ್‘ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದಾಗಿ ಐಶ್ವರ್ಯಾ ಘೋಷಿಸಿದ್ದಾರೆ.