ಮಂಡ್ಯ ಪರಿಸರದ ಹಳ್ಳಿಯೊಂದರಲ್ಲಿ ಉಂಡಾಡಿಗುಂಡರ ರೀತಿ ಬದುಕುತ್ತಿರುವ ನಾಲ್ಕು ಪಡ್ಡೆ ಹೈಕ್ಳು, ಅವರ ಹುಡುಗಾಟವೇ ‘ಮಂಡ್ಯ ಹೈದ’ ಚಿತ್ರದ ಕಥೆ. ‘ರಾಜಾಹುಲಿ’, ‘ಕಿರಾತಕ’ ಸಿನಿಮಾಗಳಲ್ಲಿನ ಮಾದರಿಯ ಹುಡುಗರ ತಂಡವಿದು. ಈ ತಂಡವನ್ನು ಮುನ್ನಡೆಸುವುದು ಚಿತ್ರದ ನಾಯಕ ಅಭಯ್. ಅಂಬರೀಶ್ ಅವರ ‘ಅಂತ’ ಸಿನಿಮಾದ ಕಟೌಟ್ ನಿಲ್ಲಿಸುವ ವಿಚಾರದ ಜಗಳದಿಂದ ಸಿನಿಮಾ ಪ್ರಾರಂಭವಾಗುತ್ತದೆ. ಫೈಟ್, ಬಿಲ್ಡಪ್ನೊಂದಿಗೆ ಆ ಜಗಳದೊಂದಿಗೆ ಪ್ರವೇಶ ಪಡೆಯುವ ನಾಯಕ ಅಭಯ್ ಮಾಸ್ ನಾಯಕನಾಗಲು ಹೊರಟ್ಟಿದ್ದಾರೆ ಎಂಬುದನ್ನು ನಿರ್ದೇಶಕರು ಪ್ರಾರಂಭದಲ್ಲಿಯೇ ತೋರಿಸಿಬಿಡುತ್ತಾರೆ.