ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ನಾಟಕ ಮಾನವೀಯ ಸೆಲೆಗಳ ಜೀವನದಿ

Last Updated 7 ನವೆಂಬರ್ 2019, 19:45 IST
ಅಕ್ಷರ ಗಾತ್ರ

‘ಜಿಸ್‌ ಲಾಹೋರ್‌ ನೈ ದೇಖ್ಯಾ ವೋ ಜನ್ಮ್ಯಾಹೀ ನೈ’ (ಯಾರು ಲಾಹೋರ್‌ ಕಂಡಿಲ್ಲವೋ ಅವರು ಹುಟ್ಟೇ ಇಲ್ಲ) ಎನ್ನುವ ನಾಟಕ ಭಾರತೀಯ ರಂಗ ಇತಿಹಾಸದಲ್ಲಿ ಪ್ರಮುಖ ಪ್ರಯೋಗ. ಮಾನವೀಯಘನತೆಯ ಸೂಚಕ.

ಲಾಹೋರ್‌ ಅನ್ನೇ ನೋಡಿಲ್ಲ ಅಂದರೆ ಹುಟ್ಟಿಯೂ ವ್ಯರ್ಥ ಎಂಬರ್ಥದಲ್ಲಿ ಒಂದು ಪ್ರದೇಶದ ಭವ್ಯ ನಾಗರಿಕತೆಯ ಪಲ್ಲಟದ ಕ್ಷಣವನ್ನು ದೇಶ ವಿಭಜನೆಯ ತಕ್ಷಣದ ಪರಿಣಾಮದಲ್ಲಿ ಕಟ್ಟಿಕೊಡುವ ಅದ್ಭುತ ಪ್ರಯತ್ನ. ಹಿಂದಿ ಲೇಖಕ ಅಸಗರ್‌ ವಜಾಹತ್‌ ಅವರ ಪೂರ್ಣ ಹೆಸರು ಸಯಿದ್‌ ಅಸಗರ್‌ ವಜಾಹತ್‌. ಈ ನಾಟಕಕಾರ ಮತ್ತು ಕಾದಂಬರಿಕಾರ ನವದೆಹಲಿಯ ಜಾಮಿಯಾ ಮಿಲಿಯಾ ಯುನಿವರ್ಸಿಟಿಯಲ್ಲಿ ಹಿಂದಿ ಪ್ರೊಫೆಸರ್‌ ಆಗಿದ್ದವರು.

1947ರ ಅವಧಿಯಲ್ಲಿನ ದೇಶವಿಭಜನೆ ಸಂದರ್ಭದ ಕಥನವಿದು. ವಿಭಜನೆಯ ತಕ್ಷಣದ ಗಾಯಗಳನ್ನು ಲಖನೌನಿಂದ ಲಾಹೋರ್‌ಗೆ ಸ್ಥಳಾಂತರಗೊಂಡಒಂದು ಮುಸ್ಲಿಂ ಕುಟುಂಬ ಮತ್ತು ಹಿಂದೂ ಕುಟುಂಬದ ಮುಖಾಮುಖಿಯ ಮೂಲಕ ಹೇಳುವ ಮಾನವೀಯ ಕಥನ. ಮತೀಯವಾದದ ಕರಾಳ ಚಹರೆಯ ಪರಿಚಯವೂ ಹೌದು. ತಮಗೆ ಲಾಹೋರ್‌ನಲ್ಲಿ ನಿಗದಿಯಾದ ಬಂಗಲೆಯೊಂದಕ್ಕೆ ಲಖನೌನಿಂದ ಮುಸ್ಲಿಂ ಕುಟುಂಬ ಬಂದಿಳಿಯುತ್ತದೆ. ಅಲ್ಲಿ ಬಂಗಲೆ ತೊರೆಯಲಿರುವ ಹಿಂದೂ ಕುಟುಂಬದ ಅಜ್ಜಿಯೊಂದಿಗೆ ಮುಸ್ಲಿಂ ಕುಟುಂಬದಮುಖಾಮುಖಿಯ ಮೂಲಕ ನಾಟಕ ಬಿಚ್ಚಿಕೊಳ್ಳುತ್ತದೆ. ಮುಸ್ಲಿಂ ಕುಟುಂಬ ಆ ಅಜ್ಜಿಯ ಅಂತ್ಯಸಂಸ್ಕಾರವನ್ನು ಆಕೆಯ ಸಂಪ್ರದಾಯದಂತೆ ನೆರವೇರಿಸಲು ಮುಂದಾದಾಗ ಸುತ್ತ ಏಳುವ ಮತೀಯ ಕ್ಷೋಭೆ ಕೊಲೆಯಲ್ಲಿಯೇ ಪರ್ಯಾವಸನಗೊಳ್ಳುತ್ತದೆ. ಇದರ ನಡುವೆಯೂ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳ ನಡುವೆ ಕ್ರಮೇಣ ಪುಟಿದೇಳುವ ಮಾನವೀಯ ಸೆಲೆಗಳನ್ನು ಪ್ರೇಕ್ಷಕನ ಹೃನ್ಮನಗಳಲ್ಲಿಜೀವಝರಿಯಂತೆ ಜಿನುಗಿಸುವ ಅದ್ಭುತ ಯತ್ನ ಈ ನಾಟಕದ್ದು.

ಇದನ್ನು 80ರ ದಶಕದಲ್ಲಿ ದೇಶದ ಹೆಸರಾಂತ ರಂಗನಿರ್ದೇಶಕ ಹಬೀಬ್‌ ತನ್ವೀರ್‌ (ಈಗ ಅವರಿಲ್ಲ) ಮೊದಲ ಬಾರಿಗೆ ರಂಗಕ್ಕೆ ಅಳವಡಿಸಿದ್ದರು. ಭಾರತದ ಹಲವು ಬಾಷೆಗಳಿಗೆ ಈ ನಾಟಕ ತರ್ಜುಮೆಯಾಗಿ ಹಲವಾರು ಪ್ರಯೋಗಗಳನ್ನು ಕಂಢಿದೆ. ಕನ್ನಡದಲ್ಲಿ ‘ರಾವೀ ನದಿ ತೀರದಲ್ಲಿ’ ಪ್ರಯೋಗವಾಗಿ ಅತ್ಯಂತ ಜನಪ್ರಿಯಗೊಂಡಿತ್ತು.

ನಾಟಕ: ‘ಜಿಸ್‌ ಲಾಹೋರ್‌ ನೈ ದೇಖ್ಯಾ ವೋ ಜನ್ಮ್ಯಾಹೀ ನೈ’

ರಚನೆ: ಅಸಗರ್‌ ವಜಾಹತ್‌

ನಿರ್ದೇಶನ: ಹಬೀಬ್‌ ತನ್ವೀರ್‌

ಪ್ರಸ್ತುತಿ: ನಯಾ ಥಿಯೇಟರ್‌ ಭೊಪಾಲ್‌

ಸ್ಥಳ: ಎನ್‌ಎಸ್‌ಡಿ ಸ್ಟುಡಿಯೊ ಥಿಯೇಟರ್‌, ಕಲಾಗ್ರಾಮ, ಮಲ್ಲತ್ತಹಳ್ಳಿ. ನವೆಂಬರ್‌ 8, ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT