<p>ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ 150ನೇ ಜಯಂತಿ ಪ್ರಯುಕ್ತ ‘ಗಾಂಧಿ ಜಯಂತಿ’ ನಾಟಕ ಪ್ರದರ್ಶಿಸಲಾಗುತ್ತಿದೆ.</p>.<p>ಇಂದಿನ ರಾಜಕೀಯ ಪರಿಸ್ಥಿತಿ, ಭ್ರಷ್ಟ ರಾಜಕಾರಣಿಗಳು, ಲಂಚಾವತಾರ, ಚುನಾವಣೆ, ವಿಧಾನಸಭೆ, ಲೋಕಸಭೆ ಕಲಾಪಗಳನ್ನು ಕುರಿತು ಗಾಂಧೀಜಿಯ ಪ್ರತಿಕ್ರಿಯೆ ಏನಿರಬಹುದು ಎಂಬ ಕಲ್ಪನೆಯನ್ನು ತೆರೆಯ ಮೇಲೆ ತರಲಾಗಿದೆ.</p>.<p>ನಾಟಕದ ತೆಲುಗು ಮೂಲ–ವಿಜಯಭಾಸ್ಕರ್, ಕನ್ನಡ ಅನುವಾದ–ಲಕ್ಷ್ಮೀದೇವಿ, ನಿರ್ವಹಣೆ–ಕೆಎಸ್ಡಿಎಲ್ ಚಂದ್ರು, ನಿರ್ದೇಶನ–ಮೈಕೋ ಶಿವಣ್ಣ.</p>.<p>ಸ್ಥಳ–ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ, ಅಕ್ಟೋಬರ್ 11, ಸಂಜೆ 6.</p>.<p>**</p>.<p><strong>‘ಶ್ರೀದೇವಿ ಮಹಾತ್ಮೆ’ ನಾಟಕ</strong></p>.<p>ಸಂಚಾರಿ ಥಿಯೇಟರ್ ನಗರದಲ್ಲಿ ‘ಶ್ರೀದೇವಿ ಮಹಾತ್ಮೆ’ ನಾಟಕ ಪ್ರದರ್ಶಿಸಲಿದೆ. ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆಯುವ ದೈನಂದಿನ ಬದುಕಿನ ಸಾಮಾನ್ಯ ಸನ್ನಿವೇಶಗಳ ಗುಚ್ಛ .</p>.<p>ವಸುಧೇಂದ್ರ ಅವರ ಸಣ್ಣ ಕತೆ ಆಧರಿಸಿ ಈ ರಂಗರೂಪ ಸಜ್ಜುಗೊಂಡಿದೆ. ಬದುಕಿನ ಓಟ, ನಗರೀಕರಣದ ಅಚ್ಚರಿಗಳು, ಕಳೆದುಹೋದ ಸೂಕ್ಷ್ಮತೆ, ಬದಲಾದ ಗ್ರಹಿಕೆ, ಸಹಜವೆನಿಸಿಬಿಡುವ ಅಸಹಜ ನಂಬಿಕೆಗಳು, ಕನಸುಗಳು, ಬದಲಾದ ಬದುಕಿನ ಗತಿ ಇವೆಲ್ಲವನ್ನೂ ನಾಟಕದಲ್ಲಿ ಅನಾವರಣಗೊಳ್ಳಲಿವೆ.ಬದುಕನ್ನು ಭಿನ್ನವಾಗಿ ನೋಡುವ ಬಗೆಯ ಜತೆಗೆ ಒಂದು ಸಣ್ಣ ಹೋರಾಟ ಕೂಡ ಇದೆ.</p>.<p>ಬೆಳಕು–ಅರವಿಂದ್ ಕುಪ್ಳೀಕರ್, ರಂಗಸಜ್ಜಿಕೆ–ಶಶಿಧರ ಅಡಪ, ಸಂಗೀತ–ಗಜಾನನ ಟಿ.ನಾಯ್ಕ್, ರಂಗರೂಪ, ನಿರ್ದೇಶನ–ಎನ್.ಮಂಗಳಾ.</p>.<p>ಸ್ಥಳ–ರಂಗಶಂಕರ, ಅಕ್ಟೋಬರ್ 9, ರಾತ್ರಿ 7.30</p>.<p>**</p>.<p><strong>ವೇರ್ ದ ಶಾಡೋ ಎಂಡ್ಸ್?</strong></p>.<p>ನೆರಳು ಯಾವುದು, ನಿಜವಾದದ್ದು ಯಾವುದು? ಪುರಾಣ ಹಾಗೂ ಚರಿತ್ರೆಗಳ ನಡುವಿನ ಸಂಬಂಧ ಏನು? ಹೀಗೆ ಹತ್ತಾರು ಪ್ರಶ್ನೆಗಳ ಅಡಿಪಾಯದೊಂದಿಗೆ ‘ವೇರ್ ದ ಶಾಡೋ ಎಂಡ್ಸ್’ ನಾಟಕವನ್ನು ಕ್ರಿಯೇಟರ್ ಥಿಯೇಟರ್ ತಂಡದವರು ನಗರದಲ್ಲಿ ಪ್ರದರ್ಶಿಸಲಿದ್ದಾರೆ.</p>.<p>ಶಂಕರ ಫೌಂಡೇಶನ್ ಇತ್ತೀಚೆಗಷ್ಟೇ ‘ದಮ್ರು’ ಥಿಯೇಟರ್ ಕಟ್ಟಿದೆ. ಹೊಸ ವೇದಿಕೆ ಮೇಲೆ ನಾಟಕ ಮಾಡಲಾಗುತ್ತಿದೆ. ಇದಕ್ಕಾಗಿ ಕನಕಪುರ ರಸ್ತೆಯಲ್ಲಿರುವ ಥಿಯೇಟರ್ ಸಜ್ಜುಗೊಂಡಿದೆ.</p>.<p>ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾದ ಐದು ದಿನಗಳ ಉತ್ಸವದಲ್ಲಿ ಪ್ರಮುಖವಾಗಿ ಈ ನಾಟಕ ಪ್ರದರ್ಶಿಸಲಾಗುತ್ತಿದೆ. ಈ ನಾಟಕದಲ್ಲಿರುವ ಕತೆ, ವಿವಿಧ ಪ್ರದರ್ಶನ ಕಲೆಗಳ, ಸಂಸ್ಕೃತಿಗಳ ಅಪರೂಪದ ಮಿಲನವಾಗಿದೆ. ಭೂತ–ವರ್ತಮಾನ, ಪುರಾಣ–ಚರಿತ್ರೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಒಂದು ವಿಶಿಷ್ಟ ಪ್ರಯೋಗ.</p>.<p>ಸಂಭಾಷಣೆ, ಹಾಗೂ ಹಾಸ್ಯ ಹದವಾಗಿ ಬೆರೆತು ಕಚಗುಳಿ ಇಡಲಿದೆ ಎಂಬುದು ತಂಡದ ಭರವಸೆ. ವಿನ್ಯಾಸ, ನಿರ್ದೇಶನ–ವೀಣಾ ಬಸವರಾಜಯ್ಯ, ರಚನೆ–ಶ್ರೀಕಾಂತ್ ರಾವ್, ನಟನೆ–ಲಕ್ಷ್ಮೀ ಚಂದ್ರಶೇಖರ್, ಪ್ರೀತಿ ಭಾರದ್ವಾಜ್, ವಿನಯಚಂದ್ರ, ಅಕ್ಷಯ ಗಾಂಧಿ, ಸಂಗೀತ–ಲಗೋರಿ ಬ್ಯಾಂಡಿನ ಗಾಯಕ ತೇಜಸ್ ಶಂಕರ್, ಬೆಳಕು–ಅರುಣ್ ಕುಮಾರ್.</p>.<p>ಸ್ಥಳ–ದಮ್ರು ಥಿಯೇಟರ್, ಶಂಕರ ಫೌಂಡೇಶನ್, ಕನಕಪುರ ರಸ್ತೆ, 8ನೇ ಮೈಲಿ, ಅಕ್ಟೋಬರ್ 9, ರಾತ್ರಿ 7.</p>.<p>**</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ 150ನೇ ಜಯಂತಿ ಪ್ರಯುಕ್ತ ‘ಗಾಂಧಿ ಜಯಂತಿ’ ನಾಟಕ ಪ್ರದರ್ಶಿಸಲಾಗುತ್ತಿದೆ.</p>.<p>ಇಂದಿನ ರಾಜಕೀಯ ಪರಿಸ್ಥಿತಿ, ಭ್ರಷ್ಟ ರಾಜಕಾರಣಿಗಳು, ಲಂಚಾವತಾರ, ಚುನಾವಣೆ, ವಿಧಾನಸಭೆ, ಲೋಕಸಭೆ ಕಲಾಪಗಳನ್ನು ಕುರಿತು ಗಾಂಧೀಜಿಯ ಪ್ರತಿಕ್ರಿಯೆ ಏನಿರಬಹುದು ಎಂಬ ಕಲ್ಪನೆಯನ್ನು ತೆರೆಯ ಮೇಲೆ ತರಲಾಗಿದೆ.</p>.<p>ನಾಟಕದ ತೆಲುಗು ಮೂಲ–ವಿಜಯಭಾಸ್ಕರ್, ಕನ್ನಡ ಅನುವಾದ–ಲಕ್ಷ್ಮೀದೇವಿ, ನಿರ್ವಹಣೆ–ಕೆಎಸ್ಡಿಎಲ್ ಚಂದ್ರು, ನಿರ್ದೇಶನ–ಮೈಕೋ ಶಿವಣ್ಣ.</p>.<p>ಸ್ಥಳ–ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ, ಅಕ್ಟೋಬರ್ 11, ಸಂಜೆ 6.</p>.<p>**</p>.<p><strong>‘ಶ್ರೀದೇವಿ ಮಹಾತ್ಮೆ’ ನಾಟಕ</strong></p>.<p>ಸಂಚಾರಿ ಥಿಯೇಟರ್ ನಗರದಲ್ಲಿ ‘ಶ್ರೀದೇವಿ ಮಹಾತ್ಮೆ’ ನಾಟಕ ಪ್ರದರ್ಶಿಸಲಿದೆ. ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆಯುವ ದೈನಂದಿನ ಬದುಕಿನ ಸಾಮಾನ್ಯ ಸನ್ನಿವೇಶಗಳ ಗುಚ್ಛ .</p>.<p>ವಸುಧೇಂದ್ರ ಅವರ ಸಣ್ಣ ಕತೆ ಆಧರಿಸಿ ಈ ರಂಗರೂಪ ಸಜ್ಜುಗೊಂಡಿದೆ. ಬದುಕಿನ ಓಟ, ನಗರೀಕರಣದ ಅಚ್ಚರಿಗಳು, ಕಳೆದುಹೋದ ಸೂಕ್ಷ್ಮತೆ, ಬದಲಾದ ಗ್ರಹಿಕೆ, ಸಹಜವೆನಿಸಿಬಿಡುವ ಅಸಹಜ ನಂಬಿಕೆಗಳು, ಕನಸುಗಳು, ಬದಲಾದ ಬದುಕಿನ ಗತಿ ಇವೆಲ್ಲವನ್ನೂ ನಾಟಕದಲ್ಲಿ ಅನಾವರಣಗೊಳ್ಳಲಿವೆ.ಬದುಕನ್ನು ಭಿನ್ನವಾಗಿ ನೋಡುವ ಬಗೆಯ ಜತೆಗೆ ಒಂದು ಸಣ್ಣ ಹೋರಾಟ ಕೂಡ ಇದೆ.</p>.<p>ಬೆಳಕು–ಅರವಿಂದ್ ಕುಪ್ಳೀಕರ್, ರಂಗಸಜ್ಜಿಕೆ–ಶಶಿಧರ ಅಡಪ, ಸಂಗೀತ–ಗಜಾನನ ಟಿ.ನಾಯ್ಕ್, ರಂಗರೂಪ, ನಿರ್ದೇಶನ–ಎನ್.ಮಂಗಳಾ.</p>.<p>ಸ್ಥಳ–ರಂಗಶಂಕರ, ಅಕ್ಟೋಬರ್ 9, ರಾತ್ರಿ 7.30</p>.<p>**</p>.<p><strong>ವೇರ್ ದ ಶಾಡೋ ಎಂಡ್ಸ್?</strong></p>.<p>ನೆರಳು ಯಾವುದು, ನಿಜವಾದದ್ದು ಯಾವುದು? ಪುರಾಣ ಹಾಗೂ ಚರಿತ್ರೆಗಳ ನಡುವಿನ ಸಂಬಂಧ ಏನು? ಹೀಗೆ ಹತ್ತಾರು ಪ್ರಶ್ನೆಗಳ ಅಡಿಪಾಯದೊಂದಿಗೆ ‘ವೇರ್ ದ ಶಾಡೋ ಎಂಡ್ಸ್’ ನಾಟಕವನ್ನು ಕ್ರಿಯೇಟರ್ ಥಿಯೇಟರ್ ತಂಡದವರು ನಗರದಲ್ಲಿ ಪ್ರದರ್ಶಿಸಲಿದ್ದಾರೆ.</p>.<p>ಶಂಕರ ಫೌಂಡೇಶನ್ ಇತ್ತೀಚೆಗಷ್ಟೇ ‘ದಮ್ರು’ ಥಿಯೇಟರ್ ಕಟ್ಟಿದೆ. ಹೊಸ ವೇದಿಕೆ ಮೇಲೆ ನಾಟಕ ಮಾಡಲಾಗುತ್ತಿದೆ. ಇದಕ್ಕಾಗಿ ಕನಕಪುರ ರಸ್ತೆಯಲ್ಲಿರುವ ಥಿಯೇಟರ್ ಸಜ್ಜುಗೊಂಡಿದೆ.</p>.<p>ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾದ ಐದು ದಿನಗಳ ಉತ್ಸವದಲ್ಲಿ ಪ್ರಮುಖವಾಗಿ ಈ ನಾಟಕ ಪ್ರದರ್ಶಿಸಲಾಗುತ್ತಿದೆ. ಈ ನಾಟಕದಲ್ಲಿರುವ ಕತೆ, ವಿವಿಧ ಪ್ರದರ್ಶನ ಕಲೆಗಳ, ಸಂಸ್ಕೃತಿಗಳ ಅಪರೂಪದ ಮಿಲನವಾಗಿದೆ. ಭೂತ–ವರ್ತಮಾನ, ಪುರಾಣ–ಚರಿತ್ರೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಒಂದು ವಿಶಿಷ್ಟ ಪ್ರಯೋಗ.</p>.<p>ಸಂಭಾಷಣೆ, ಹಾಗೂ ಹಾಸ್ಯ ಹದವಾಗಿ ಬೆರೆತು ಕಚಗುಳಿ ಇಡಲಿದೆ ಎಂಬುದು ತಂಡದ ಭರವಸೆ. ವಿನ್ಯಾಸ, ನಿರ್ದೇಶನ–ವೀಣಾ ಬಸವರಾಜಯ್ಯ, ರಚನೆ–ಶ್ರೀಕಾಂತ್ ರಾವ್, ನಟನೆ–ಲಕ್ಷ್ಮೀ ಚಂದ್ರಶೇಖರ್, ಪ್ರೀತಿ ಭಾರದ್ವಾಜ್, ವಿನಯಚಂದ್ರ, ಅಕ್ಷಯ ಗಾಂಧಿ, ಸಂಗೀತ–ಲಗೋರಿ ಬ್ಯಾಂಡಿನ ಗಾಯಕ ತೇಜಸ್ ಶಂಕರ್, ಬೆಳಕು–ಅರುಣ್ ಕುಮಾರ್.</p>.<p>ಸ್ಥಳ–ದಮ್ರು ಥಿಯೇಟರ್, ಶಂಕರ ಫೌಂಡೇಶನ್, ಕನಕಪುರ ರಸ್ತೆ, 8ನೇ ಮೈಲಿ, ಅಕ್ಟೋಬರ್ 9, ರಾತ್ರಿ 7.</p>.<p>**</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>