‘ಮುಂದೆ ಕಾಶಿನಾಥ್, ಉಪೇಂದ್ರ ಪರಿಚಯವಾಗಿ ‘ಶಂಖನಾದ’, ‘ಅಜಗಜಾಂತರ’ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿದೆ. ‘ತರ್ಲೆ ನನ್ಮಗ’ ಸಿನಿಮಾದಲ್ಲಿ ಸಿಕ್ಕ ಭಿಕ್ಷುಕನ ಪಾತ್ರ ನನಗೆ ಅಕ್ಷಯ ಪಾತ್ರೆಯಾಯಿತು. ಅದು ಹಲವು ಅವಕಾಶಗಳಿಗೆ ಹಾದಿ ಮಾಡಿಕೊಟ್ಟಿತು. ಗಿರೀಶ್ ಕಾಸರವಳ್ಳಿ ಅವರ ‘ಕನಸೆಂಬೊ ಕುದುರೆಯನೇರಿ’ ಸಿನಿಮಾ ನನ್ನ ವೃತ್ತಿ ಬದುಕಿಗೆ ಹೊಸ ಆಯಾಮ ನೀಡಿ, ಅಂತರರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಕರೆ ಮಾಡಿ, ಶುಭ ಹಾರೈಸಿದ್ದು ಬದುಕಿನ ಸಂತಸದ ಗಳಿಗೆ’ ಎಂದು ಹರ್ಷ ವ್ಯಕ್ತಪಡಿಸಿದರು.