<p><strong>ರಂಗಶಂಕರ</strong>: ಮಂಗಳವಾರ ಸೈಲೆಂಟ್ ಥಿಯೇಟರ್ ಲ್ಯಾಬೊರೇಟರಿ ತಂಡದಿಂದ `ಸುಷ್ಮಿತಾ ಅಂಡ್ ನೆಸ್ಲಿಂಗ್ಸ್~ (ರಚನೆ: ಪೂರ್ಣಚಂದ್ರ ತೇಜಸ್ವಿ. ನಿರ್ದೇಶನ: ವಿ. ವಿದ್ಯಾ) ನಾಟಕ.<br /> <br /> ಬುಧವಾರ ರಂಗಸೌರಭ ತಂಡದಿಂದ `ಗಂಗಾವತರಣ~ (ಮೂಲ: ದ ರಾ ಬೇಂದ್ರೆ. ರಂಗರೂಪ, ನಿರ್ದೇಶನ: ರಾಜೇಂದ್ರ ಕಾರಂತ) ನಾಟಕ.ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರಾವಾಹಿಗಳು ಗಂಗಾವತರಣ ಕಥೆಯಲ್ಲಿ ಘಟಿಸುತ್ತವೆ. <br /> <br /> ಒಂದು ಅರ್ಥದಲ್ಲಿ ಕಥಾ ನಾಯಕ ಅವಮಾನ, ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುವುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ `ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ~ ಸೇರಿ ಹದಿನಾರು ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ. <br /> <br /> ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಗಳನ್ನು ತೊಳೆಯಲು ನೂರಾರು ಭಗೀರಥರು ಗಂಗೆಯರು ಬರಬೇಕೆಂದು ಸಮಾಜಕ್ಕೆ ಸಂದೇಶ ನೀಡುತ್ತದೆ.<br /> <br /> ರಂಗ ಸೌರಭ ತಂಡವು 11 ವರ್ಷಗಳಿಂದ ಇಂದಿನವರೆಗೆ ಹಲವು ಅತ್ಯುತ್ತಮ ನಾಟಕಗಳನ್ನು ನಿರ್ಮಿಸಿ ನೋಡುಗರನ್ನು ತನ್ನೆಡೆಗೆ ಸೆಳೆದುಕೊಂಡಿದೆ. `ಶಠವಿ, ಸಾವು ಬಂತು ಸಾವು, ಘಾಸಿರಾಮ್ ಕೊತ್ವಾಲ್, ಕಾಕನಕೋಟೆ, ಶಸ್ತ್ರಪರ್ವ, ಮೈಸೂರು ಮಲ್ಲಿಗೆ, ಗಂಗಾವತರಣ~ ಹೀಗೆ ಹಲವು ನಾಟಕಗಳನ್ನು ನಿರ್ಮಿಸಿದೆ. <br /> <br /> ಈಗ ಅದು ಪ್ರದರ್ಶಿಸಲಿರುವ `ಗಂಗಾವತರಣ~ ಕವಿ ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಆಧರಿಸಿದ ನಾಟಕ. ಇದು ಭಾರತ ಯಾತ್ರಾ ಕೇಂದ್ರ ನಡೆಸಿದ ಸ್ಪರ್ಧೆಯಲ್ಲಿ 2009-2010 ನೇ ಸಾಲಿನಲ್ಲಿ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಹತ್ತು ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.<br /> <br /> ನಂತರ ಎಚ್ಚೆನ್ ಕಲಾಕ್ಷೇತ್ರದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಗೆದ್ದು ಜನಮೆಚ್ಚುಗೆಯನ್ನು ಪಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಐದು ಪ್ರದರ್ಶನಗಳನ್ನು ನಡೆಸಿದೆ. <br /> <br /> ಪ್ರತಿ ಪ್ರದರ್ಶನಕ್ಕೂ ನಾಡಿನ ಶ್ರೇಷ್ಠ ಸಾಹಿತಿಗಳು, ಕವಿಗಳು, ಕಲಾವಿದರುಗಳು ಆಗಮಿಸಿ ಮೆಚ್ಚಿ ಮಾತನಾಡಿದ್ದು ವಿಶೇಷ. ಕೆ.ಎಸ್. ನಿಸಾರ್ ಅಹ್ಮದ್, ಎಚ್.ಎಸ್. ವೆಂಕಟೇಶಮೂರ್ತಿ, ಮಲ್ಲೆಪುರಂ ಜಿ ವೆಂಕಟೇಶ್, ಶತಾವಧಾನಿ ಆರ್ ಗಣೇಶ್, ಕಾ.ತ.ಚಿಕ್ಕಣ್ಣ ಇಂಥ ಮಹನೀಯರುಗಳು ನಾಟಕವನ್ನು ನೋಡಿ ಆನಂದಪಟ್ಟಿದ್ದಾರೆ.<br /> ಇಷ್ಟಕ್ಕೇ ನಿಲ್ಲದೆ ಹರಿದ `ಗಂಗಾವತರಣ~ ನಾಟಕ ತಂಡ ಉತ್ತರ ಕರ್ನಾಟಕದ ಕಡೆ ಹೋಗಿ ಪ್ರದರ್ಶನ ನೀಡಿ ಬಂದಿದೆ. ಮೆಚ್ಚುಗೆ ಗಳಿಸಿದೆ.<br /> <br /> <strong>ನಿರ್ದೇಶಕ: </strong> `ಗಂಗಾವತರಣ~ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ರಾಜೇಂದ್ರ ಕಾರಂತ್ ಅವರದ್ದು. ಮೂರು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ವಿಶಿಷ್ಟ ಪ್ರಯೋಗ ಗಳಾದ `ಮೈಸೂರು ಮಲ್ಲಿಗೆ, ಮೂಕಜ್ಜಿಯ ಕನಸುಗಳು, ಭ್ರೂಣ, ಪೊಲೀಸ್, ಸಂಜೆಹಾಡು, ಗೂಡು, ತಂದೆ, ಮುದ್ದಣ್ಣನ ಪ್ರಮೋಷನ್ ಪ್ರಸಂಗ~ ಮತ್ತಿತರ ಯಶಸ್ವಿ ನಾಟಕಗಳನ್ನು ಕೊಟ್ಟಿದ್ದಾರೆ. <br /> <br /> ಇದಲ್ಲದೆ ಹಲವಾರು ಪ್ರಸಿದ್ಧ ನಾಟಕ ತಂಡ ಗಳಾದ ಚಿತ್ತಾರ, ಹಂದರ, ಜನಪದ, ಸ್ಪಂದನ, ನಟರಂಗ, ಪ್ರಯೋಗರಂಗ, ಕಲಾಗಂಗೋತ್ರಿ, ರಂಗಸೌರಭ, ರಂಗತೋರಣ ಜತೆಗೂಡಿ ಹಲವಾರು ಪ್ರಸಿದ್ಧ ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.<br /> <br /> ರಾಜೇಂದ್ರ ಕಾರಂತ್ ಮೂಲತಃ ಕಾರ್ಪೊರೇಷನ್ ಬ್ಯಾಂಕಿನಲ್ಲಿ ವೃತ್ತಿ ಆರಂಭಿಸಿ (ಬಿಎಸ್ಸಿ, ಎಂಎ ಕನ್ನಡ ಮತ್ತು ಕನ್ನಡದಲ್ಲಿ ಚಿನ್ನದ ಪದಕ) ಅಂತರ್ ಬ್ಯಾಂಕ್ ನಾಟಕ ಸ್ಪರ್ಧೆ ಗಳಲ್ಲಿ ತೊಡಗಿಸಿಕೊಂಡರು. <br /> <br /> ಇದಕ್ಕೂ ಮುಂಚೆ ಚಿತ್ತಾರ ತಂಡದ ಮೂಲಕ ಹಲವಾರು ವಿಭಿನ್ನ ಹಾಗೂ ಯಶಸ್ವಿ ನಾಟಕದ ಪ್ರಯೋಗಗಳನ್ನು ಸಹ ಮಾಡಿದ್ದರು. ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ, ನಟಿಸಿದ್ದಾರೆ. <br /> <br /> <strong>ಸ್ಥಳ:</strong> ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಂಗಶಂಕರ</strong>: ಮಂಗಳವಾರ ಸೈಲೆಂಟ್ ಥಿಯೇಟರ್ ಲ್ಯಾಬೊರೇಟರಿ ತಂಡದಿಂದ `ಸುಷ್ಮಿತಾ ಅಂಡ್ ನೆಸ್ಲಿಂಗ್ಸ್~ (ರಚನೆ: ಪೂರ್ಣಚಂದ್ರ ತೇಜಸ್ವಿ. ನಿರ್ದೇಶನ: ವಿ. ವಿದ್ಯಾ) ನಾಟಕ.<br /> <br /> ಬುಧವಾರ ರಂಗಸೌರಭ ತಂಡದಿಂದ `ಗಂಗಾವತರಣ~ (ಮೂಲ: ದ ರಾ ಬೇಂದ್ರೆ. ರಂಗರೂಪ, ನಿರ್ದೇಶನ: ರಾಜೇಂದ್ರ ಕಾರಂತ) ನಾಟಕ.ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರಾವಾಹಿಗಳು ಗಂಗಾವತರಣ ಕಥೆಯಲ್ಲಿ ಘಟಿಸುತ್ತವೆ. <br /> <br /> ಒಂದು ಅರ್ಥದಲ್ಲಿ ಕಥಾ ನಾಯಕ ಅವಮಾನ, ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುವುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ `ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ~ ಸೇರಿ ಹದಿನಾರು ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ. <br /> <br /> ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಗಳನ್ನು ತೊಳೆಯಲು ನೂರಾರು ಭಗೀರಥರು ಗಂಗೆಯರು ಬರಬೇಕೆಂದು ಸಮಾಜಕ್ಕೆ ಸಂದೇಶ ನೀಡುತ್ತದೆ.<br /> <br /> ರಂಗ ಸೌರಭ ತಂಡವು 11 ವರ್ಷಗಳಿಂದ ಇಂದಿನವರೆಗೆ ಹಲವು ಅತ್ಯುತ್ತಮ ನಾಟಕಗಳನ್ನು ನಿರ್ಮಿಸಿ ನೋಡುಗರನ್ನು ತನ್ನೆಡೆಗೆ ಸೆಳೆದುಕೊಂಡಿದೆ. `ಶಠವಿ, ಸಾವು ಬಂತು ಸಾವು, ಘಾಸಿರಾಮ್ ಕೊತ್ವಾಲ್, ಕಾಕನಕೋಟೆ, ಶಸ್ತ್ರಪರ್ವ, ಮೈಸೂರು ಮಲ್ಲಿಗೆ, ಗಂಗಾವತರಣ~ ಹೀಗೆ ಹಲವು ನಾಟಕಗಳನ್ನು ನಿರ್ಮಿಸಿದೆ. <br /> <br /> ಈಗ ಅದು ಪ್ರದರ್ಶಿಸಲಿರುವ `ಗಂಗಾವತರಣ~ ಕವಿ ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಆಧರಿಸಿದ ನಾಟಕ. ಇದು ಭಾರತ ಯಾತ್ರಾ ಕೇಂದ್ರ ನಡೆಸಿದ ಸ್ಪರ್ಧೆಯಲ್ಲಿ 2009-2010 ನೇ ಸಾಲಿನಲ್ಲಿ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಹತ್ತು ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.<br /> <br /> ನಂತರ ಎಚ್ಚೆನ್ ಕಲಾಕ್ಷೇತ್ರದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಗೆದ್ದು ಜನಮೆಚ್ಚುಗೆಯನ್ನು ಪಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಐದು ಪ್ರದರ್ಶನಗಳನ್ನು ನಡೆಸಿದೆ. <br /> <br /> ಪ್ರತಿ ಪ್ರದರ್ಶನಕ್ಕೂ ನಾಡಿನ ಶ್ರೇಷ್ಠ ಸಾಹಿತಿಗಳು, ಕವಿಗಳು, ಕಲಾವಿದರುಗಳು ಆಗಮಿಸಿ ಮೆಚ್ಚಿ ಮಾತನಾಡಿದ್ದು ವಿಶೇಷ. ಕೆ.ಎಸ್. ನಿಸಾರ್ ಅಹ್ಮದ್, ಎಚ್.ಎಸ್. ವೆಂಕಟೇಶಮೂರ್ತಿ, ಮಲ್ಲೆಪುರಂ ಜಿ ವೆಂಕಟೇಶ್, ಶತಾವಧಾನಿ ಆರ್ ಗಣೇಶ್, ಕಾ.ತ.ಚಿಕ್ಕಣ್ಣ ಇಂಥ ಮಹನೀಯರುಗಳು ನಾಟಕವನ್ನು ನೋಡಿ ಆನಂದಪಟ್ಟಿದ್ದಾರೆ.<br /> ಇಷ್ಟಕ್ಕೇ ನಿಲ್ಲದೆ ಹರಿದ `ಗಂಗಾವತರಣ~ ನಾಟಕ ತಂಡ ಉತ್ತರ ಕರ್ನಾಟಕದ ಕಡೆ ಹೋಗಿ ಪ್ರದರ್ಶನ ನೀಡಿ ಬಂದಿದೆ. ಮೆಚ್ಚುಗೆ ಗಳಿಸಿದೆ.<br /> <br /> <strong>ನಿರ್ದೇಶಕ: </strong> `ಗಂಗಾವತರಣ~ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ರಾಜೇಂದ್ರ ಕಾರಂತ್ ಅವರದ್ದು. ಮೂರು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ವಿಶಿಷ್ಟ ಪ್ರಯೋಗ ಗಳಾದ `ಮೈಸೂರು ಮಲ್ಲಿಗೆ, ಮೂಕಜ್ಜಿಯ ಕನಸುಗಳು, ಭ್ರೂಣ, ಪೊಲೀಸ್, ಸಂಜೆಹಾಡು, ಗೂಡು, ತಂದೆ, ಮುದ್ದಣ್ಣನ ಪ್ರಮೋಷನ್ ಪ್ರಸಂಗ~ ಮತ್ತಿತರ ಯಶಸ್ವಿ ನಾಟಕಗಳನ್ನು ಕೊಟ್ಟಿದ್ದಾರೆ. <br /> <br /> ಇದಲ್ಲದೆ ಹಲವಾರು ಪ್ರಸಿದ್ಧ ನಾಟಕ ತಂಡ ಗಳಾದ ಚಿತ್ತಾರ, ಹಂದರ, ಜನಪದ, ಸ್ಪಂದನ, ನಟರಂಗ, ಪ್ರಯೋಗರಂಗ, ಕಲಾಗಂಗೋತ್ರಿ, ರಂಗಸೌರಭ, ರಂಗತೋರಣ ಜತೆಗೂಡಿ ಹಲವಾರು ಪ್ರಸಿದ್ಧ ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.<br /> <br /> ರಾಜೇಂದ್ರ ಕಾರಂತ್ ಮೂಲತಃ ಕಾರ್ಪೊರೇಷನ್ ಬ್ಯಾಂಕಿನಲ್ಲಿ ವೃತ್ತಿ ಆರಂಭಿಸಿ (ಬಿಎಸ್ಸಿ, ಎಂಎ ಕನ್ನಡ ಮತ್ತು ಕನ್ನಡದಲ್ಲಿ ಚಿನ್ನದ ಪದಕ) ಅಂತರ್ ಬ್ಯಾಂಕ್ ನಾಟಕ ಸ್ಪರ್ಧೆ ಗಳಲ್ಲಿ ತೊಡಗಿಸಿಕೊಂಡರು. <br /> <br /> ಇದಕ್ಕೂ ಮುಂಚೆ ಚಿತ್ತಾರ ತಂಡದ ಮೂಲಕ ಹಲವಾರು ವಿಭಿನ್ನ ಹಾಗೂ ಯಶಸ್ವಿ ನಾಟಕದ ಪ್ರಯೋಗಗಳನ್ನು ಸಹ ಮಾಡಿದ್ದರು. ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ, ನಟಿಸಿದ್ದಾರೆ. <br /> <br /> <strong>ಸ್ಥಳ:</strong> ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>