<p>ಕೆಣಕಿದ್ರೆ ಸಾಕು ಗುರ್ಅಂತಾರೆ ವೈಷ್ಣವಿ ಗೌಡ. ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಹಾಡುತ್ತಿದ್ದಾಗ ಶಮಂತ್ ಕಾಲೆಳೆದದ್ದು ವೈಷ್ಣವಿಯ ಕೋಪಕ್ಕೆ ಕಾರಣ.</p>.<p>ಎಷ್ಟು ಚಂದ ಇವಳು.. ಯಾವ ರಾಣಿ ಮಗಳು... ಎಂದು ವೈಷ್ಣವಿ ರಾಗವಾಗಿ ಹಾಡುತ್ತಿದ್ದರು. ಆಗ ಶಮಂತ್... ಡವ್ ರಾಣಿ ಮಗಳು ಎಂದು ಕಾಲೆಳೆದರು. ಆ ಮಾತಿಗೆ ಇನ್ನೇನೋ ಅರ್ಥ ಕಲ್ಪಿಸಿಕೊಂಡು ಶಮಂತ್ ಜತೆ ವಾದಕ್ಕಿಳಿದರು. ಇದು ಜಗಳದವರೆಗೆ ಹೋಯಿತು.</p>.<p>‘ನೀವು ನನಗೆ ಏನು ಬೇಕಿದ್ದರೂ ಹೇಳಿ. ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದು ಎಚ್ಚರಿಸಿದರು. ಆಗ ಶಮಂತ್, ನಾನು ನಿಮ್ಮ ಕುಟುಂಬದ ಬಗ್ಗೆ ಮಾತನಾಡಿಲ್ಲವಲ್ಲ! ಪ್ರಾಸ ಕೂಡುತ್ತದೆ ಎನ್ನುವ ಕಾರಣಕ್ಕೆ ಆ ರೀತಿ ಹೇಳಿದೆ. ಅದನ್ನು ನಾನು ಹೇಳಿದ್ದು ರಘು ಅವರಿಗೆ’ ಎಂದರು. ಆದರೆ ವೈಷ್ಣವಿಯ ಕೋಪ ಏರುತ್ತಲೇ ಇತ್ತು.</p>.<p>ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನಿಸಲು ಬಂದರು. ಆದರೆ, ವೈಷ್ಣವಿ ಪ್ರತಿಕ್ರಿಯಿಸಿ, ‘ದಯವಿಟ್ಟು ಇರಿಟೇಟ್ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು.</p>.<p>ಸ್ವಲ್ಪ ಹೊತ್ತಿನ ಬಳಿಕ ವೈಷ್ಣವಿ ಬಳಿ ತೆರಳಿದ ಶಮಂತ್ ಸಮಾಧಾನಿಸಲು ಮುಂದಾದರು. ಆಗಲೂ ವೈಷ್ಣವಿ ‘ನನ್ನ ಬಗ್ಗೆ ಮಾತನಾಡಿ, ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದರು. ‘ನನ್ನ ಮಾತಿನ ಅರ್ಥ ಆ ರೀತಿ ಆಗಿರಲಿಲ್ಲ’ ಎಂದು ಶಮಂತ್ ಪರಿಪರಿಯಾಗಿ ಹೇಳಿದರಾದರೂ ವೈಷ್ಣವಿ ಅವರಿಗೆ ಸಮಾಧಾನ ಆಗಲಿಲ್ಲ.</p>.<p><a href="https://www.prajavani.net/entertainment/tv/bigg-boss-kannada-season-8-chakravarthy-chandrachud-clash-with-manju-pavagada-843062.html" itemprop="url">Bigg Boss 8: ನನಗೆ ಎರಡು ವಿಚ್ಛೇದನವಾಗಿದೆ: ಮಂಜು ವಿರುದ್ಧ ಸಿಡಿದ ಚಂದ್ರಚೂಡ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಣಕಿದ್ರೆ ಸಾಕು ಗುರ್ಅಂತಾರೆ ವೈಷ್ಣವಿ ಗೌಡ. ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಹಾಡುತ್ತಿದ್ದಾಗ ಶಮಂತ್ ಕಾಲೆಳೆದದ್ದು ವೈಷ್ಣವಿಯ ಕೋಪಕ್ಕೆ ಕಾರಣ.</p>.<p>ಎಷ್ಟು ಚಂದ ಇವಳು.. ಯಾವ ರಾಣಿ ಮಗಳು... ಎಂದು ವೈಷ್ಣವಿ ರಾಗವಾಗಿ ಹಾಡುತ್ತಿದ್ದರು. ಆಗ ಶಮಂತ್... ಡವ್ ರಾಣಿ ಮಗಳು ಎಂದು ಕಾಲೆಳೆದರು. ಆ ಮಾತಿಗೆ ಇನ್ನೇನೋ ಅರ್ಥ ಕಲ್ಪಿಸಿಕೊಂಡು ಶಮಂತ್ ಜತೆ ವಾದಕ್ಕಿಳಿದರು. ಇದು ಜಗಳದವರೆಗೆ ಹೋಯಿತು.</p>.<p>‘ನೀವು ನನಗೆ ಏನು ಬೇಕಿದ್ದರೂ ಹೇಳಿ. ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದು ಎಚ್ಚರಿಸಿದರು. ಆಗ ಶಮಂತ್, ನಾನು ನಿಮ್ಮ ಕುಟುಂಬದ ಬಗ್ಗೆ ಮಾತನಾಡಿಲ್ಲವಲ್ಲ! ಪ್ರಾಸ ಕೂಡುತ್ತದೆ ಎನ್ನುವ ಕಾರಣಕ್ಕೆ ಆ ರೀತಿ ಹೇಳಿದೆ. ಅದನ್ನು ನಾನು ಹೇಳಿದ್ದು ರಘು ಅವರಿಗೆ’ ಎಂದರು. ಆದರೆ ವೈಷ್ಣವಿಯ ಕೋಪ ಏರುತ್ತಲೇ ಇತ್ತು.</p>.<p>ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನಿಸಲು ಬಂದರು. ಆದರೆ, ವೈಷ್ಣವಿ ಪ್ರತಿಕ್ರಿಯಿಸಿ, ‘ದಯವಿಟ್ಟು ಇರಿಟೇಟ್ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು.</p>.<p>ಸ್ವಲ್ಪ ಹೊತ್ತಿನ ಬಳಿಕ ವೈಷ್ಣವಿ ಬಳಿ ತೆರಳಿದ ಶಮಂತ್ ಸಮಾಧಾನಿಸಲು ಮುಂದಾದರು. ಆಗಲೂ ವೈಷ್ಣವಿ ‘ನನ್ನ ಬಗ್ಗೆ ಮಾತನಾಡಿ, ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದರು. ‘ನನ್ನ ಮಾತಿನ ಅರ್ಥ ಆ ರೀತಿ ಆಗಿರಲಿಲ್ಲ’ ಎಂದು ಶಮಂತ್ ಪರಿಪರಿಯಾಗಿ ಹೇಳಿದರಾದರೂ ವೈಷ್ಣವಿ ಅವರಿಗೆ ಸಮಾಧಾನ ಆಗಲಿಲ್ಲ.</p>.<p><a href="https://www.prajavani.net/entertainment/tv/bigg-boss-kannada-season-8-chakravarthy-chandrachud-clash-with-manju-pavagada-843062.html" itemprop="url">Bigg Boss 8: ನನಗೆ ಎರಡು ವಿಚ್ಛೇದನವಾಗಿದೆ: ಮಂಜು ವಿರುದ್ಧ ಸಿಡಿದ ಚಂದ್ರಚೂಡ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>