ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada 10 | ಇಂದಿನ ಕಿಚ್ಚನ ಪಂಚಾಯ್ತಿಯತ್ತ ಎಲ್ಲರ ಚಿತ್ತ

Published 4 ನವೆಂಬರ್ 2023, 8:26 IST
Last Updated 4 ನವೆಂಬರ್ 2023, 8:26 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಮಾತನಾಡುತ್ತಿರುವ ಶಬ್ಧ ಪ್ರಯೋಗಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ಇಂದಿನ (ಶನಿವಾರ) ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಯಾರಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ನೀಡಲಾಗಿದ್ದ ಹಳ್ಳಿ ಟಾಸ್ಕ್‌ನಿಂದ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಮೂಡಿದೆ. ನಮತ್ರಾ, ಸಂಗೀತಾ, ಕಾರ್ತಿಕ್‌, ವಿನಯ್‌ ಅವರ ಮಧ್ಯೆ ಮಾತಿನ ಚಕಮಕಿ ಬಹಳ ಜೋರಾಗಿ ಉಂಟಾಗಿದೆ. ಈ ನಡುವೆ ದೊಡ್ಮನೆಗೆ ವಾಪಸ್ಸಾಗಿರುವ ವರ್ತರೂ ಸಂತೋಷ್‌ ಅವರು ಮಂಕಾಗಿದ್ದಾರೆ.

ವಿನಯ್‌ ಹಾಗೂ ಸಂಗೀತಾ ಅವರನ್ನು ತಂಡದ ನಾಯಕರನ್ನಾಗಿ ಮಾಡಿ ಹಳ್ಳಿಯ ವಾತವರಣದಲ್ಲಿ ರೂಪಿಸಲಾಗಿದ್ದ ಅನೇಕ ಟಾಸ್ಕ್‌ಗಳಲ್ಲಿ ವಿನಯ್‌ ತಂಡ ಗೆದ್ದು, ಕ್ಯಾಪ್ಟನ್‌ ಪೈಪೋಟಿಯಲ್ಲಿ ಭಾಗವಹಿಸಿತು.

ಈ ವಾರದ ಕ್ಯಾಪ್ಟನ್‌ನಾಗಿ ವಿನಯ್‌ ಆಯ್ಕೆಯಾಗಿದ್ದಾರೆ. ಇದಕ್ಕೆ ಸಂಗೀತಾ ‘ನಾವು ಆನೆ ವಿರೋಧಿಗಳಲ್ಲ‘ ಎಂದು ಹೇಳಿದ್ದರು.

‘ವಿನಯ್‌ ಅವರನ್ನು ನೆಗೆಟಿವ್‌ ಆಗಿ ಬಿಂಬಸಲಾಗುತ್ತಿದೆ' ಎಂದು ಖಾಸಗಿ ಮಾಧ್ಯಮಕ್ಕೆ ವಿನಯ್‌ಗೌಡ ಪತ್ನಿ ನೀಡಿರುವ ಹೇಳಿಕೆಯ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಾರ ಮನೆಯಿಂದ ಹೊರಹೋಗಲು ಸಿರಿ, ತನಿಷಾ, ರಕ್ಷಕ್‌, ವರ್ತೂರ್‌ ಸಂತೋಷ್‌, ಕಾರ್ತಿಕ್‌, ವಿನಯ್‌, ಮೈಕಲ್‌, ಸ್ನೇಹಿತ್‌ ಹಾಗೂ ತುಕಾಲಿ ಸಂತೋಷ್‌ ನಾಮಿನೇಟ್‌ಯಾಗಿದ್ದು, ಯಾರು ಬಿಗ್‌ಬಾಸ್‌ ಪ್ರಯಾಣ ಮುಗಿಸುತ್ತಾರೆಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT