ಬೆಂಗಳೂರು: ಬಿಗ್ ಬಾಸ್ ಏಳನೇ ವಾರದಲ್ಲಿ ಕಳಪೆ ಪಟ್ಟ ಪ್ರತಾಪ್ಗೆ ದೊರಕಿದೆ. ಪ್ರತಾಪ್ ನಾಯಕನಾಗಿದ್ದ ‘ಮಣ್ಣಿನ ಮಕ್ಕಳು’ ತಂಡ ಈ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲನ್ನು ಕಂಡಿತ್ತು.
ವಾರದ ಕಳಪೆ ಹಾಗೂ ಉತ್ತಮ ಪಟ್ಟ ನೀಡುವ ವೇಳೆ ಮನೆಯ ಸದಸ್ಯರು ಪ್ರತಾಪ್ ಹೆಸರು ಸೂಚಿಸಿದ್ದಾರೆ.
‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದು ಬೇಸರ ತಂದಿದೆ’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ನನ್ನು ಟಾಸ್ಕ್ನಿಂದ ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಸಿಟ್ಟಿನಲ್ಲಿಯೇ ಆಡುತ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ.