ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈ ನಡುವೆ ಟಾಪ್ ಫೈನಲಿಸ್ಟ್ಗಳಾಗಿ ವರ್ತೂರು ಸಂತೋಷ್, ಸಂಗೀತಾ ಮತ್ತು ತುಕಾಲಿ ಸಂತೋಷ್ ಆಯ್ಕೆಯಾಗಿದ್ದಾರೆ. ಆದರೆ ಕೊನೆ ವಾರದಲ್ಲಿ ನಮ್ರತಾ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಇನ್ನು ವಿನಯ್, ಕಾರ್ತಿಕ್ ಮತ್ತು ಪ್ರತಾಪ್ ಉಳಿದುಕೊಂಡಿದ್ದಾರೆ. ಇವರಲ್ಲಿ ಫೈನಲ್ಗೆ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಈ ವಾರ ಗೊತ್ತಾಗಲಿದೆ
ವಿನಯ್ ಜತೆಗೆ ಸ್ನೇಹ ಬೆಳೆಸಿ, ಅದರಿಂದಲೇ ಬಿಗ್ಬಾಸ್ ಮನೆಯಲ್ಲಿ ನಮ್ರತಾ ಉಳಿದುಕೊಂಡಿದ್ದಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಫಿನಾಲೆಗೆ ಹೊಗಿಯೇ ಹೋಗುತ್ತೇನೆ ಎನ್ನುವ ಭರವಸೆಯಲ್ಲಿದ್ದ ನಮ್ರತಾ ಈಗ ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಟ್ರೋಫಿ ಅನಾವರಣ
ಸೀಸನ್10 ವಿನ್ನರ್ಗೆ ಕೊಡುವ ಬಿಗ್ ಬಾಸ್ ಟ್ರೋಫಿಯನ್ನು ಸುದೀಪ್ ಅನಾವರಣ ಮಾಡಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಎದುರು ಟ್ರೋಫಿ ಅನಾವರಣ ಮಾಡಿದ್ದಾರೆ. ಇದನ್ನು ಕಂಡು ಮನೆಯ ಸದಸ್ಯರು ಪುಳಕಿತರಾಗಿದ್ದಾರೆ.
ಈ ವಾರದ ಕೊನೆಯಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್10 ಫಿನಾಲೆ ನಡೆಯಲಿದೆ.