ಕೊಂಡಾಡಿದ ಕಿಚ್ಚ: ಬೈಕ್ ರೇಸ್ ಫೀಲ್ಡ್ನಿಂದ ಬಂದ ನೀವು ಅಲ್ಲಿ ಕುಳಿತಿರುವ ಎಲ್ಲ ಕಲಾವಿದರನ್ನು ಮೀರಿಸಿ ವೇದಿಕೆಗೆ ಬಂದಿದ್ದೀರಿ. ಇದು ಸಾಮಾನ್ಯ ಸಾಧನೆ ಅಲ್ಲವೇ ಅಲ್ಲ. ನಮ್ಮೆಲ್ಲರಿಗೂ ಕ್ರೀಡಾಳುಗಳ ಬಗ್ಗೆಅತ್ಯಂತ ಗೌರವವಿದೆ. ನೀವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ ಎಂದು ಕೊಂಡಾಡಿದರು. ಅಷ್ಟೇ ಅಲ್ಲ, ನಮ್ಮ ರಂಗಭೂಮಿಗೂ ನಿಮಗೆ ಸ್ವಾಗತ ಎಂದ ಸುದೀಪ್, ಅರವಿಂದ್ ಅವರಿಗೂ ಒಂದು ಟ್ರೋಫಿ ಇದೆ ಎಂದು ಘೋಷಿಸಿದರು. ಬಳಿಕ, ತಾವು ಹಾಕಿದ್ದ ಜಾಕೆಟ್ ಅನ್ನೇ ತೆಗೆದು ಅರವಿಂದ್ ಅವರಿಗೆ ತೊಡಿಸುವ ಮೂಲಕ ರನ್ನರ್ ಅಪ್ ಆದರೂ ವೀಕ್ಷಕರ ಮನ ಗೆದ್ದ ಕೆ.ಪಿ. ಅರವಿಂದ್ ಅವರಿಗೆ ಅತ್ಯುನ್ನತ ಉಡುಗೊರೆ ಕೊಟ್ಟರು.