<p>ಆ ಹುಡುಗ ಹತ್ತನೇ ತರಗತಿ ಪ್ರವೇಶಿಸಿ ಎರಡು ತಿಂಗಳಾಗಿತ್ತು. ಆಗಲೇ ಅವನ ತಲೆಯಲ್ಲಿ ಬಣ್ಣದಲೋಕ ರೆಕ್ಕೆಬಿಚ್ಚಿತ್ತು. ಒಮ್ಮೆ ಆರ್ಕೆಸ್ಟ್ರಾದಲ್ಲಿ ನೃತ್ಯಕ್ಕೆ ಅವಕಾಶ ಸಿಕ್ಕಿತು.</p>.<p>‘ಪ್ರೀತ್ಸೆ ಪ್ರೀತ್ಸೆ...’ ಹಾಡಿಗೆ ಹೆಜ್ಜೆಹಾಕಿದ ಹುಡುಗ ತಾನು ಧರಿಸಿದ್ದ ಬಟ್ಟೆಯನ್ನೂ ಹರಿದುಕೊಂಡ. ನಟನೆಯ ಗೀಳು ಹಚ್ಚಿಕೊಂಡ ಆತ ನೇರ ಬೆಂಗಳೂರಿಗೆ ಬಸ್ ಹತ್ತಿದ. ಬೆಳಿಗ್ಗೆ ಹೊಟ್ಟೆಪಾಡಿಗಾಗಿ ಬೇಕರಿಯಲ್ಲಿ ಕೆಲಸ. ರಾತ್ರಿವೇಳೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಕುಣಿಯುತ್ತಾ ನಟನೆಯ ಅಭ್ಯಾಸ ಮಾಡತೊಡಗಿದ.</p>.<p>ಹಾಸನ ಜಿಲ್ಲೆಯ ಮಡೆನೂರು ಮನು ನಟನೆಯ ಬೆನ್ನುಬಿದ್ದಿದ್ದು ಹೀಗೆ.</p>.<p>ಅವರೊಳಗಿರುವ ನಟನೆಗೆ ಕನ್ನಡಿ ಹಿಡಿದಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಸೀಸನ್ 2 ರಿಯಾಲಿಟಿ ಶೋ.</p>.<p>ಸ್ಪರ್ಧೆಯಲ್ಲಿ ವಿಜೇತರಾಗಿರುವ ಮನು ಚಂದನವನದಲ್ಲಿ ಹಾಸ್ಯನಟನಾಗಿ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ವೇದಿಕೆ<br />ಮೇಲೆ ಅವರ ನಟನಾ ಕೌಶಲ ನೋಡಿದ ಹಲವು ನಿರ್ದೇಶಕರು ಸಿನಿಮಾದಲ್ಲಿ ಅಭಿನಯಿಸುವಂತೆ ದುಂಬಾಲು ಬಿದ್ದಿದ್ದಾರೆ.</p>.<p>ಯಶವಂತಪುರದ ಸ್ನೇಹಾಂಜಲಿ ಆರ್ಕೆಸ್ಟ್ರಾ ಮತ್ತು ತುಮಕೂರಿನ ಸಂಗೀತ ಮ್ಯೂಸಿಕ್ನಲ್ಲಿ ಕೆಲಸಕ್ಕೆ ಸೇರಿಕೊಂಡರು. ನಟನೆಯ ಆರಂಭಿಕ ಪಾಠ ಕಲಿತಿದ್ದ ಅಲ್ಲಿಯೇ.</p>.<p>‘ನಾನು ಸಿನಿಮಾ ಮೋಹಿ. ಸಿನಿಮಾಗಳಲ್ಲಿ ನಟಿಸಬೇಕೆಂದು ಹಂಬಲಿಸಿ ಬೆಂಗಳೂರಿಗೆ ಬಂದೆ. ಆದರೆ, ನಟನೆ ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಚಂದನವನ<br />ಸುಲಭಕ್ಕೆ ದಕ್ಕುವುದಿಲ್ಲ ಎನ್ನುವ ಅರಿವಾಯಿತು. ಇನ್ನೊಂದೆಡೆಜೀವನದ ಬಂಡಿ ಎಳೆಯುವುದು ಅನಿವಾರ್ಯವಾಗಿತ್ತು. ದೇವನಹಳ್ಳಿ ಸಮೀಪದ ನಲ್ಲೂರಿನ ಬೇಕರಿಯಲ್ಲಿ ಕೆಲಸಕ್ಕೆ ಸೇರಿದೆ. ಕಾಮಿಡಿ ಕಿಲಾಡಿಗಳು ನನ್ನ ಬದುಕಿಗೆ ಭರವಸೆಯ ಕಿರಣವಾಯಿತು’ ಎಂದುತಾವು ಬದುಕು ಕಟ್ಟಿಕೊಳ್ಳಲು ಹೊರಟ ಬಗೆಯನ್ನು ವಿವರಿಸುತ್ತಾರೆ.</p>.<p>ಮನು ನಟಿಸಿದ ಮೊದಲು ಚಿತ್ರ‘ಪೊರ್ಕಿ ಹುಚ್ಚ ವೆಂಕಟ್’. ಅದರಲ್ಲಿಅವರು ಗ್ಯಾಂಗ್ ಲೀಡರ್ನ ಪಾತ್ರ ಮಾಡಿದ್ದರಂತೆ.</p>.<p>‘ಈ ಚಿತ್ರದಲ್ಲಿ ನಟಿಸಲು ಬೆಣ್ಣೆ ಮಾರಿಮನೆಯಲ್ಲಿದ್ದ ದುಡ್ಡು ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದೆ. ಚಿತ್ರ ತೆರೆಕಾಣುವ ದಿನದಂದು ಊರಿನಲ್ಲಿ ಸ್ನೇಹಿತರು ನನ್ನ ಭಾವಚಿತ್ರವಿರುವ ಪೋಸ್ಟರ್ಗಳನ್ನು ಹಾಕಿದ್ದರು. ಸಿನಿಮಾ ಬಿಡುಗಡೆ ಆಯಿತು. ಆದರೆ,<br />ಅದರಲ್ಲಿ ನನ್ನ ದೃಶ್ಯವೇ ಇರಲಿಲ್ಲ. ಆಗ ಸಾಕಷ್ಟು ನೊಂದುಕೊಂಡೆ. ಊರಿಗೆ ತೆರಳಿ ಮಧ್ಯರಾತ್ರಿ ಪೋಸ್ಟರ್ಗಳನ್ನು ಹರಿದು ಹಾಕಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಮನು.</p>.<p>‘ಬೇಕರಿಯಲ್ಲಿ ತಿಂಗಳಿಗೆ ಎಂಟುನೂರು ರೂಪಾಯಿಗೆ ದುಡಿದಿದ್ದೇನೆ. ನನ್ನ ಮಿತಿಗಳ ಅರಿವು ಇದೆ. ತಾವು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಟನೆಗೆ ಸೂರಜ್, ಅಪ್ಪಣ್ಣ ಮತ್ತು ನನಗೆ ಅವಕಾಶ ನೀಡುವುದಾಗಿ<br />ನಿರ್ದೇಶಕ ಸಂತೋಷ ಆನಂದರಾಮ ಹೇಳಿದ್ದಾರೆ ಎಂದು ಜಗ್ಗೇಶ್ ಸರ್ ತಿಳಿಸಿದ್ದಾರೆ. ಕೆಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಕೋರಿದ್ದಾರೆ. ಹಾಸ್ಯ ನಟನಾಗಿಯೇ ಚಿತ್ರರಂಗದಲ್ಲಿ ನೆಲೆಯೂರುವ ಆಸೆ ಇದೆ’ ಎನ್ನುತ್ತಾರೆ ಅವರು.</p>.<p>‘ನಾಯಕ ನಟರು ಅಭಿನಯಿಸುವ ಸಿನಿಮಾಗಳಿಗೆ ಒಂದು ಚೌಕಟ್ಟು ಇರುತ್ತದೆ. ಹಾಸ್ಯ ನಟರಅಭಿನಯಕ್ಕೆ ಯಾವುದೇ ಮಿತಿ ಇರುವುದಿಲ್ಲ. ಎಲ್ಲ ಮಾದರಿಯ ಚಿತ್ರಗಳಲ್ಲೂ ನಟಿಸಬಹುದು.ಇದು ನನ್ನ ವೃತ್ತಿಬದುಕಿಗೂ ಸಹಕಾರಿಯಾಗಲಿದೆ’ ಎನ್ನುವುದು ಅವರ ವಿಶ್ವಾಸದ ನುಡಿ.</p>.<p>‘ನನಗೆ ನಟನೆಯ ಪಾಠ ಹೇಳಿಕೊಟ್ಟಿದ್ದುಜೀ ಕನ್ನಡ ವಾಹಿನಿ. ಸ್ನೇಹಿತರ ಸಹಕಾರ ಮರೆಯಲು ಸಾಧ್ಯವಿಲ್ಲ’ ಎಂದು ಸ್ಮರಿಸುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ ಹುಡುಗ ಹತ್ತನೇ ತರಗತಿ ಪ್ರವೇಶಿಸಿ ಎರಡು ತಿಂಗಳಾಗಿತ್ತು. ಆಗಲೇ ಅವನ ತಲೆಯಲ್ಲಿ ಬಣ್ಣದಲೋಕ ರೆಕ್ಕೆಬಿಚ್ಚಿತ್ತು. ಒಮ್ಮೆ ಆರ್ಕೆಸ್ಟ್ರಾದಲ್ಲಿ ನೃತ್ಯಕ್ಕೆ ಅವಕಾಶ ಸಿಕ್ಕಿತು.</p>.<p>‘ಪ್ರೀತ್ಸೆ ಪ್ರೀತ್ಸೆ...’ ಹಾಡಿಗೆ ಹೆಜ್ಜೆಹಾಕಿದ ಹುಡುಗ ತಾನು ಧರಿಸಿದ್ದ ಬಟ್ಟೆಯನ್ನೂ ಹರಿದುಕೊಂಡ. ನಟನೆಯ ಗೀಳು ಹಚ್ಚಿಕೊಂಡ ಆತ ನೇರ ಬೆಂಗಳೂರಿಗೆ ಬಸ್ ಹತ್ತಿದ. ಬೆಳಿಗ್ಗೆ ಹೊಟ್ಟೆಪಾಡಿಗಾಗಿ ಬೇಕರಿಯಲ್ಲಿ ಕೆಲಸ. ರಾತ್ರಿವೇಳೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಕುಣಿಯುತ್ತಾ ನಟನೆಯ ಅಭ್ಯಾಸ ಮಾಡತೊಡಗಿದ.</p>.<p>ಹಾಸನ ಜಿಲ್ಲೆಯ ಮಡೆನೂರು ಮನು ನಟನೆಯ ಬೆನ್ನುಬಿದ್ದಿದ್ದು ಹೀಗೆ.</p>.<p>ಅವರೊಳಗಿರುವ ನಟನೆಗೆ ಕನ್ನಡಿ ಹಿಡಿದಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಸೀಸನ್ 2 ರಿಯಾಲಿಟಿ ಶೋ.</p>.<p>ಸ್ಪರ್ಧೆಯಲ್ಲಿ ವಿಜೇತರಾಗಿರುವ ಮನು ಚಂದನವನದಲ್ಲಿ ಹಾಸ್ಯನಟನಾಗಿ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ವೇದಿಕೆ<br />ಮೇಲೆ ಅವರ ನಟನಾ ಕೌಶಲ ನೋಡಿದ ಹಲವು ನಿರ್ದೇಶಕರು ಸಿನಿಮಾದಲ್ಲಿ ಅಭಿನಯಿಸುವಂತೆ ದುಂಬಾಲು ಬಿದ್ದಿದ್ದಾರೆ.</p>.<p>ಯಶವಂತಪುರದ ಸ್ನೇಹಾಂಜಲಿ ಆರ್ಕೆಸ್ಟ್ರಾ ಮತ್ತು ತುಮಕೂರಿನ ಸಂಗೀತ ಮ್ಯೂಸಿಕ್ನಲ್ಲಿ ಕೆಲಸಕ್ಕೆ ಸೇರಿಕೊಂಡರು. ನಟನೆಯ ಆರಂಭಿಕ ಪಾಠ ಕಲಿತಿದ್ದ ಅಲ್ಲಿಯೇ.</p>.<p>‘ನಾನು ಸಿನಿಮಾ ಮೋಹಿ. ಸಿನಿಮಾಗಳಲ್ಲಿ ನಟಿಸಬೇಕೆಂದು ಹಂಬಲಿಸಿ ಬೆಂಗಳೂರಿಗೆ ಬಂದೆ. ಆದರೆ, ನಟನೆ ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಚಂದನವನ<br />ಸುಲಭಕ್ಕೆ ದಕ್ಕುವುದಿಲ್ಲ ಎನ್ನುವ ಅರಿವಾಯಿತು. ಇನ್ನೊಂದೆಡೆಜೀವನದ ಬಂಡಿ ಎಳೆಯುವುದು ಅನಿವಾರ್ಯವಾಗಿತ್ತು. ದೇವನಹಳ್ಳಿ ಸಮೀಪದ ನಲ್ಲೂರಿನ ಬೇಕರಿಯಲ್ಲಿ ಕೆಲಸಕ್ಕೆ ಸೇರಿದೆ. ಕಾಮಿಡಿ ಕಿಲಾಡಿಗಳು ನನ್ನ ಬದುಕಿಗೆ ಭರವಸೆಯ ಕಿರಣವಾಯಿತು’ ಎಂದುತಾವು ಬದುಕು ಕಟ್ಟಿಕೊಳ್ಳಲು ಹೊರಟ ಬಗೆಯನ್ನು ವಿವರಿಸುತ್ತಾರೆ.</p>.<p>ಮನು ನಟಿಸಿದ ಮೊದಲು ಚಿತ್ರ‘ಪೊರ್ಕಿ ಹುಚ್ಚ ವೆಂಕಟ್’. ಅದರಲ್ಲಿಅವರು ಗ್ಯಾಂಗ್ ಲೀಡರ್ನ ಪಾತ್ರ ಮಾಡಿದ್ದರಂತೆ.</p>.<p>‘ಈ ಚಿತ್ರದಲ್ಲಿ ನಟಿಸಲು ಬೆಣ್ಣೆ ಮಾರಿಮನೆಯಲ್ಲಿದ್ದ ದುಡ್ಡು ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದೆ. ಚಿತ್ರ ತೆರೆಕಾಣುವ ದಿನದಂದು ಊರಿನಲ್ಲಿ ಸ್ನೇಹಿತರು ನನ್ನ ಭಾವಚಿತ್ರವಿರುವ ಪೋಸ್ಟರ್ಗಳನ್ನು ಹಾಕಿದ್ದರು. ಸಿನಿಮಾ ಬಿಡುಗಡೆ ಆಯಿತು. ಆದರೆ,<br />ಅದರಲ್ಲಿ ನನ್ನ ದೃಶ್ಯವೇ ಇರಲಿಲ್ಲ. ಆಗ ಸಾಕಷ್ಟು ನೊಂದುಕೊಂಡೆ. ಊರಿಗೆ ತೆರಳಿ ಮಧ್ಯರಾತ್ರಿ ಪೋಸ್ಟರ್ಗಳನ್ನು ಹರಿದು ಹಾಕಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಮನು.</p>.<p>‘ಬೇಕರಿಯಲ್ಲಿ ತಿಂಗಳಿಗೆ ಎಂಟುನೂರು ರೂಪಾಯಿಗೆ ದುಡಿದಿದ್ದೇನೆ. ನನ್ನ ಮಿತಿಗಳ ಅರಿವು ಇದೆ. ತಾವು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಟನೆಗೆ ಸೂರಜ್, ಅಪ್ಪಣ್ಣ ಮತ್ತು ನನಗೆ ಅವಕಾಶ ನೀಡುವುದಾಗಿ<br />ನಿರ್ದೇಶಕ ಸಂತೋಷ ಆನಂದರಾಮ ಹೇಳಿದ್ದಾರೆ ಎಂದು ಜಗ್ಗೇಶ್ ಸರ್ ತಿಳಿಸಿದ್ದಾರೆ. ಕೆಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಕೋರಿದ್ದಾರೆ. ಹಾಸ್ಯ ನಟನಾಗಿಯೇ ಚಿತ್ರರಂಗದಲ್ಲಿ ನೆಲೆಯೂರುವ ಆಸೆ ಇದೆ’ ಎನ್ನುತ್ತಾರೆ ಅವರು.</p>.<p>‘ನಾಯಕ ನಟರು ಅಭಿನಯಿಸುವ ಸಿನಿಮಾಗಳಿಗೆ ಒಂದು ಚೌಕಟ್ಟು ಇರುತ್ತದೆ. ಹಾಸ್ಯ ನಟರಅಭಿನಯಕ್ಕೆ ಯಾವುದೇ ಮಿತಿ ಇರುವುದಿಲ್ಲ. ಎಲ್ಲ ಮಾದರಿಯ ಚಿತ್ರಗಳಲ್ಲೂ ನಟಿಸಬಹುದು.ಇದು ನನ್ನ ವೃತ್ತಿಬದುಕಿಗೂ ಸಹಕಾರಿಯಾಗಲಿದೆ’ ಎನ್ನುವುದು ಅವರ ವಿಶ್ವಾಸದ ನುಡಿ.</p>.<p>‘ನನಗೆ ನಟನೆಯ ಪಾಠ ಹೇಳಿಕೊಟ್ಟಿದ್ದುಜೀ ಕನ್ನಡ ವಾಹಿನಿ. ಸ್ನೇಹಿತರ ಸಹಕಾರ ಮರೆಯಲು ಸಾಧ್ಯವಿಲ್ಲ’ ಎಂದು ಸ್ಮರಿಸುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>