ಧಾರಾವಾಹಿಯ ನಾಯಕಿ ದೇವಯಾನಿ ಎಂಟು ವರ್ಷಗಳಿಂದ ಶ್ರೀವತ್ಸನನ್ನು ಪ್ರೀತಿಸಿರುತ್ತಾಳೆ. ಆದರೆ, ಅವರ ಪ್ರೀತಿಗೆ ಇಬ್ಬರ ಮನೆಯವರಿಂದಲೂ ವಿರೋಧ. ಎಂಟು ವರ್ಷಗಳ ನಂತರ ಅವರ ಮದುವೆಗೆ ಎರಡೂ ಕುಟುಂಬಗಳು ಒಪ್ಪಿಗೆ ಕೊಟ್ಟಿವೆ. ಎಲ್ಲವೂ ಸರಿಯಾಯಿತು ಎಂದು, ವಧು-ವರ ಮದುವೆ ಮಂಟಪವರೆಗೆ ಬಂದಾಗ ಅಲ್ಲಿಗೆ ಬರುವ ಪವಾಡ ಪುರುಷರೊಬ್ಬರು ‘ಈ ಮದುವೆ ನಡೆದದ್ದೇ ಆದಲ್ಲಿ ದೇವಯಾನಿಯ ಸಾವು ಖಚಿತ’ ಎಂದು ಹೇಳುತ್ತಾರೆ.