ಮದುವೆಯ ಕುರಿತು ಇಂದಿನ ಹುಡುಗ ಹುಡುಗಿಯರ ಆಲೋಚನೆಗಳೇ ಬೇರೆ. ಅದರ ಸುತ್ತ ಬೆಳೆಯುವ ಕಥಾವಸ್ತುವನ್ನು ಹೊಂದಿದ ‘ಒಲವಿನ ನಿಲ್ದಾಣ’ ಧಾರಾವಾಹಿ ಜುಲೈ 11ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಮಂಡ್ಯ ರಮೇಶ್, ಅಶೋಕ್ ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಯುವ ಜೋಡಿಯಾಗಿ ಅಮಿತಾ ಕುಲಾಲ್ ಹಾಗೂ ಅಕ್ಷಯ್ ನಾಯಕ್ ಅಭಿನಯಿಸಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪಶ್ಚಿಮ ಘಟ್ಟದ ಹಸಿರನ್ನು ‘ಒಲವಿನ ನಿಲ್ದಾಣ’ ಹೊದ್ದುಕೊಂಡಿದೆ. ಹಾಗಾಗಿ ಮನಸ್ಸಿಗೂ ಕಣ್ಣಿಗೂ ಈ ಧಾರಾವಾಹಿ ಮುದ ನೀಡಲಿದೆ. ಶ್ರುತಿ ನಾಯ್ಡು ನಿರ್ಮಿಸಿರುವ ಈ ಧಾರಾವಾಹಿಯನ್ನು ರಮೇಶ್ ಇಂದಿರಾ ನಿರ್ದೇಶಿಸಿದ್ದಾರೆ.
ಪ್ರೀಮಿಯರ್ ಶೋ: ಇದೇ ಮೊದಲ ಬಾರಿಗೆ ಧಾರಾವಾಹಿಯೊಂದರ ಪ್ರಿಮಿಯರ್ ಶೋ ನಡೆಯುತ್ತಿದೆ. ಜುಲೈ 10ರಂದು ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆಗಳಲ್ಲಿ ‘ಒಲವಿನ ನಿಲ್ದಾಣ’ದ ಪ್ರಿಮಿಯರ್ ಶೋವನ್ನು ಕಲರ್ಸ್ ಕನ್ನಡ ಆಯೋಜಿಸಿದೆ.