ನೆಲ್ಲಿಮುಂಡ ಸಮೀಪ ಬೆಟ್ಟದಲ್ಲಿ ತಲೆಎತ್ತಿರುವ ರೆಸಾರ್ಟ್ಗಳು
(ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.)
ಗುರುತು ಪತ್ತೆಹಚ್ಚಲಾಗದ ಶವ ಮತ್ತು ಅಂಗಾಂಗಗಳ ಅಂತ್ಯಸಂಸ್ಕಾರ ನಡೆದ ಸ್ಥಳ
(ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.)
ಇಲ್ಲಿ ಭೂಕುಸಿತಕ್ಕೆ ಮಳೆಯೇ ಪ್ರಮುಖ ಕಾರಣ. 2019ರಲ್ಲಿ ಪುತ್ತುಮಲದಲ್ಲಿ ದುರಂತ ಸಂಭವಿಸುವುದಕ್ಕೂ ಮೊದಲು ಧಾರಾಕಾರ ಮಳೆಯಾಗಿತ್ತು. ವಯನಾಡಿನಲ್ಲಿ ಭೂಕುಸಿತಗಳು ಸಹಜ. ಜನಸಂಖ್ಯೆ ಕಡಿಮೆ ಇರುವುದರಿಂದ ಮತ್ತು ಕಾಡು ಹೆಚ್ಚು ಇರುವುದರಿಂದ ಹೆಚ್ಚಿನ ಪ್ರಾಣಹಾನಿ ಆಗುವುದಿಲ್ಲ
-ಜಗದೀಶ್ ವಿಲ್ಲೋಡಿ, ವಯನಾಡ್ ಪರಿಸರ ಅಧ್ಯಯನಕಾರ
ಪುಂಜಿರಿಮಟ್ಟಂನ ಆಚೆ ಜನವಸತಿ ಇಲ್ಲ. ಅಲ್ಲಿಯೂ ಆಗಾಗ ಗುಡ್ಡ ಕುಸಿತ ಉಂಟಾಗುತ್ತದೆ. ಈಚೆ ಭಾಗಕ್ಕೆ ಅದರಿಂದ ಯಾವ ತೊಂದರೆಯೂ ಆಗುತ್ತಿರಲಿಲ್ಲ. ನಮ್ಮ ಭಾಗಕ್ಕೆ ಪ್ರಕೃತಿ ಮಾತೆ ದ್ರೋಹ ಬಗೆಯಳು ಎಂಬ ವಿಶ್ವಾಸವೇ ಬದುಕಿಗೆ ಅಂತ್ಯ ಹಾಡಿದ್ದು ದುರದೃಷ್ಟಕರ