ಬಾದಾಮಿ: ಇಲ್ಲಿನ ವಿದ್ಯಾನಗರ, ಚಾಲುಕ್ಯ ನಗರ, ಲಕ್ಷ್ಮಿನಗರ, ಗಾಂಧಿ ನಗರ, ಆನಂದ ನಗರ, ಜಯನಗರ, ಟಿಪ್ಪುನಗರದ ಕಾಂಕ್ರೀಟ್ ರಸ್ತೆ ಅಗೆದು2017ರಲ್ಲಿ ನೆಡಲಾದ ಹೊಂಗೆ ಮರಗಳು ಬೆಳೆದು ಹೂವು, ಕಾಯಿಯ ಹಂತದಲ್ಲಿವೆ. ಬೇಸಿಗೆಯಲ್ಲಿ ನೆತ್ತಿ ಸುಡುವ ಬಿರು ಬಿಸಿಲಿನ ಬೇಗೆಯನ್ನು ತಪ್ಪಿಸಿಕೊಳ್ಳಲು ಜನರು ಹೊಂಗೆ ಮರದ ಕೆಳಗೆ ನಿಂತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದಾರೆ.