ವರುಣಾ ನಾಲೆ ಕನ್ನಂಬಾಡಿ ಕಟ್ಟೆಯ ಕೂಸು. ನಾಲೆ ಬೇಕು ಎನ್ನುವುದು ಮೈಸೂರು ಜಿಲ್ಲೆ ಜನರ ಆಗ್ರಹ. ಮಾಡಬೇಡಿ ಎನ್ನುವುದು ಮಂಡ್ಯ ಜಿಲ್ಲೆಯ ಜನರ ಒತ್ತಾಯ. ಬೇಕು–ಬೇಡಗಳ ಹೋರಾಟದ ನಡುವೆಯೇ ವರುಣಾ ನಾಲೆ ನಿರ್ಮಾಣವಾಯಿತು. ಆದರೆ, ಈಗಿನ ವಾಸ್ತವ ಸ್ಥಿತಿ ಏನಿದೆ ಎನ್ನುವುದನ್ನು ಸ್ವತಃ ವರುಣಾ ನಾಲೆಯೇ ಇಲ್ಲಿ ನಿವೇದಿಸಿಕೊಂಡಿದೆ!
ವರುಣಾ ನಾಲೆಯ ಮೇಲ್ಗಾಲುವೆ ಮೇಲಿಂದ ಕಾಣುವ ಮೈಸೂರು ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಎದ್ದಿರುವ ಕಟ್ಟಡಗಳ ನೋಟ.