ಅನರ್ಹ ಬಿಪಿಎಲ್ (ಆದ್ಯತಾ) ಕಾರ್ಡ್ ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದರ ವಿರುದ್ಧವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಬಡತನದ ಅಂಕಿ ಅಂಶಗಳು ಒಂದು ರೀತಿಯಲ್ಲೇ ಇದ್ದರೆ, ಬಡತನದ ಆಧಾರದಲ್ಲೇ ನೀಡಲಾಗುವ ಪಡಿತರ ಕಾರ್ಡ್ಗಳು, ಫಲಾನುಭವಿಗಳ ಸಂಖ್ಯೆಗಳು ಇನ್ನೊಂದು ರೀತಿ ಇವೆ. ದೇಶ ಮತ್ತು ರಾಜ್ಯದಲ್ಲಿರುವ ಅಂತ್ಯೋದಯ, ಬಿಪಿಎಲ್ ಕಾರ್ಡ್ಗಳು ಮತ್ತು ಫಲಾನುಭವಿಗಳ ಚಿತ್ರಣವನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.