ಭಾನುವಾರ, 6 ಜುಲೈ 2025
×
ADVERTISEMENT
ಒಳನೋಟ | ಅರಣ್ಯ ಸಂಪನ್ಮೂಲಕ್ಕೆ ಬ್ರ್ಯಾಂಡ್ ಭಾಗ್ಯ: ಹುಲಿ ನಾಡಿನಲ್ಲಿ ವಿಶ್ವಾಸ
ಒಳನೋಟ | ಅರಣ್ಯ ಸಂಪನ್ಮೂಲಕ್ಕೆ ಬ್ರ್ಯಾಂಡ್ ಭಾಗ್ಯ: ಹುಲಿ ನಾಡಿನಲ್ಲಿ ವಿಶ್ವಾಸ
ಫಾಲೋ ಮಾಡಿ
Published 3 ಜೂನ್ 2023, 20:31 IST
Last Updated 3 ಜೂನ್ 2023, 20:31 IST
Comments
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವ್ಯಾಪ್ತಿಯ ಗ್ರಾಮಸ್ಥರಿಗೆ ತಜ್ಞರು ಜೇನು ಕೃಷಿ ತರಬೇತಿ ನೀಡುತ್ತಿರುವುದು.
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವ್ಯಾಪ್ತಿಯ ಗ್ರಾಮಸ್ಥರಿಗೆ ತಜ್ಞರು ಜೇನು ಕೃಷಿ ತರಬೇತಿ ನೀಡುತ್ತಿರುವುದು.
ಕುಂಬಾರವಾಡಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜತೆಗೆ ಅರಣ್ಯ ಇಲಾಖೆ ರೂಪಿಸಿರುವ ಯೋಜನೆಗಳ ಬಗ್ಗೆ ಎ.ಸಿ.ಎಫ್. ಅಮರಾಕ್ಷರ ವಿ.ಎಂ. ವಿವರಿಸಿದರು.
ಕುಂಬಾರವಾಡಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜತೆಗೆ ಅರಣ್ಯ ಇಲಾಖೆ ರೂಪಿಸಿರುವ ಯೋಜನೆಗಳ ಬಗ್ಗೆ ಎ.ಸಿ.ಎಫ್. ಅಮರಾಕ್ಷರ ವಿ.ಎಂ. ವಿವರಿಸಿದರು.
ಸುಭೇಂದ್ರ ಕಾಮತ್
ಸುಭೇಂದ್ರ ಕಾಮತ್
ಜಯಾನಂದ ಡೇರೆಕರ
ಜಯಾನಂದ ಡೇರೆಕರ
ಶಾಂತಾ ಮಿರಾಶಿ
ಶಾಂತಾ ಮಿರಾಶಿ
ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರ ಸಹಭಾಗಿತ್ವವೂ ಮುಖ್ಯ. ಜನರ ವಿಶ್ವಾಸ ಗಳಿಸುವ ಜತೆಗೆ ಜೀವನಮಟ್ಟ ಸುಧಾರಿಸುವ ಅಲುವಾಗಿ ‘ಸ್ವಯಂ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ.
ಅಮರಾಕ್ಷರ ವಿ.ಎಂ. ಎ.ಸಿ.ಎಫ್. ಕುಂಬಾರವಾಡಾ
ಕೆ.ಟಿ.ಆರ್. ವ್ಯಾಪ್ತಿಯಲ್ಲಿ ತೀರಾ ಹಿಂದುಳಿದ ಗ್ರಾಮಗಳನ್ನು ಒಳಗೊಂಡಿರುವ ಕಾತೇಲಿ ಭಾಗದಲ್ಲಿ ಅರಣ್ಯ ಇಲಾಖೆಯ ಸುಧಾರಿತ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸುವ ವಿಶ್ವಾಸ ಮೂಡಿದೆ. ಜನರಿಗೆ ಯೋಜನೆ ವಿವರಿಸಿ ವಿಶ್ವಾಸಕ್ಕೆ ಪಡೆಯುತ್ತಿದ್ದೇವೆ.
ಸುಭೇಂದ್ರ ಕಾಮತ್ ಕಾತೇಲಿ ಗ್ರಾಮ ಪಂಚಾಯ್ತಿ ಸದಸ್ಯ
ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಗುಣಮಟ್ಟದ ಜೇನುತುಪ್ಪ ನೈಸರ್ಗಿಕವಾಗಿ ದೊರೆಯುತ್ತಿದೆ. ವೃತ್ತಿಪರವಾಗಿ ಜೇನು ಸಾಕಾಣಿಕೆ ಆರಂಭಿಸುವುದು ಸ್ಥಳೀಯರಿಗೆ ಅನುಕೂಲವಾಲಿದೆ.
ಜಯಾನಂದ ಡೇರೆಕರ ಕುಂಬಾರವಾಡಾ ಗ್ರಾಮಸ್ಥ
ಅರಣ್ಯ ಇಲಾಖೆಯಿಂದ ಜೇನು ಕೃಷಿ ತರಬೇತಿ ನೀಡಲಾಗಿದೆ. ನಾರಿನ ಉತ್ಪನ್ನದ ತರಬೇತಿಯನ್ನೂ ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ. ಜೀವನೋಪಾಯಕ್ಕೆ ಒಂದಷ್ಟು ಆದಾಯ ದೊರೆಯುವ ನಂಬಿಕೆ ಇದೆ.
ಶಾಂತಾ ಮಿರಾಶಿ ಮೈನೋಳ ಗ್ರಾಮಸ್ಥ
ಮಣ್ಣಿನ ಕಲಾಕೃತಿಗೂ ಬ್ರ್ಯಾಂಡ್
ಕುಂಬಾರವಾಡಾದಲ್ಲಿ ಪಾರಂಪರಿಕ ಕುಂಬಾರಿಕೆ ವೃತ್ತಿ ನಡೆಸಿಕೊಂಡು ಬಂದಿದ್ದ ಕೆಲವು ಕುಂಬಾರರ ಕುಟುಂಬಗಳಿವೆ. ಒಂದು ಕಾಲದಲ್ಲಿ ಕುಂಬಾರವಾಡಾದಲ್ಲಿ ಮಣ್ಣಿನ ಕಲಾಕೃತಿ ಪಾತ್ರೆಗಳ ತಯಾರಿಕೆ ಉತ್ತುಂಗದಲ್ಲಿತ್ತು. ಕುಂಬಾರಿಕೆ ವೃತ್ತಿ ಅವಲಂಭಿಸಿದ್ದ ಹಲವು ಕುಟುಂಬಗಳಿದ್ದವು. ಹೀಗಾಗಿಯೆ ‘ಕುಂಬಾರವಾಡಾ’ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈಗಲೂ ಗ್ರಾಮಕ್ಕೆ ಹಳೆಯ ಮೆರಗು ತಂದುಕೊಡಬೇಕು ಎಂಬುದು ಅರಣ್ಯ ಇಲಾಖೆಯ ಯೋಜನೆ. ‘ಕುಂಬಾರಿಕೆ ವೃತ್ತಿ ಅವಲಂಭಿಸಿರುವ ಕುಟುಂಬಗಳಿಗೆ ಮಣ್ಣಿನ ಪಾತ್ರೆ ಕರಕುಶಲ ಸಾಮಗ್ರಿ ತಯಾರಿಸಲು ವೇದಿಕೆ ಸೃಷ್ಟಿಸಿಕೊಡಲಾಗುತ್ತದೆ. ಪಾರಂಪರಿಕ ಕಲಾಕಾರರಿಂದ ಉಳಿದ ಸಮುದಾಯಗಳ ಆಸಕ್ತರಿಗೂ ಮಣ್ಣಿನ ಕಲಾಕೃತಿ ಪಾತ್ರೆ ತಯಾರಿಕೆ ತರಬೇತಿ ಒದಗಿಸುತ್ತೇವೆ. ಈಗಾಗಲೇ ಸಮುದಾಯದ ಪ್ರಮುಖರನ್ನು ಕರೆದು ಸಭೆಯನ್ನೂ ನಡೆಸಿದ್ದೇವೆ. ಮಣ್ಣಿನಿಂದ ತಯಾರಾಗುವ ಪರಿಸರ ಪೂರಕ ಸಾಮಗ್ರಿಗಳನ್ನು ಮಾರುಕಟ್ಟೆ ತಂದು ಪ್ರವಾಸಿಗರನ್ನು ಸೆಳೆಯುವದು ಭವಿಷ್ಯದ ಯೋಜನೆಯ ಸ್ವರೂಪ’ ಎನ್ನುತ್ತಾರೆ ಎಸಿಎಫ್ ಅಮರಾಕ್ಷರ ವಿ.ಎಂ.
ಪ್ಲಾಸ್ಟಿಕ್ ಕಸ ನಿಯಂತ್ರಣಕ್ಕೆ ವಿಲೇವಾರಿ ಘಟಕ
ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ ಕಾತೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ. ಇದೇ ಮಾರ್ಗದಲ್ಲಿ ದಾಂಡೇಲಿ ಉಳವಿ ಜೊಯಿಡಾಕ್ಕೆ ತೆರಳುವ ಪ್ರವಾಸಿಗರ ಓಡಾಟ ಹೆಚ್ಚಿದೆ. ಪ್ರವಾಸಿಗರು ಸ್ಥಳೀಯರು ಎಸೆಯುವ ಕಸಗಳು ಅದರಲ್ಲೂ ಚಿಪ್ಸ್ ಇನ್ನಿತರ ತಿನಿಸುಗಳ ಪೊಟ್ಟಣಗಳು ರಸ್ತೆಯ ಬದಿಗಳಲ್ಲಿ ರಾಶಿ ರಾಶಿ ಬೀಳುತ್ತಿವೆ. ಒಂದು ಅಂದಾಜಿನ ಪ್ರಕಾರ ಇಲ್ಲಿನ ಪ್ರತಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರಾಸರಿ 2 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಕಸ ಸಿಗುತ್ತಿವೆ. ‘ಮಸಾಲೆ ಉಪ್ಪಿನ ಅಂಶಯುಕ್ತ ತಿನಿಸುಗಳನ್ನು ತಿಂದು ಜನರು ಬಿಸಾಡುವ ಪ್ಲಾಸ್ಟಿಕ್ ಪೊಟ್ಟಣಗಳ ವಾಸನೆಗೆ ಇಲ್ಲಿನ ಸಾಂಬಾರ ಕಡವೆ ಜಿಂಕೆಗಳು ಆಕರ್ಷಣೆಗೊಳಗಾಗುತ್ತವೆ. ಅವುಗಳನ್ನು ತಿನ್ನುತ್ತವೆ. ಇದರಿಂದ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚುತ್ತಿದೆ. ಹುಲಿಗಳಿಗೆ ಮುಖ್ಯ ಆಹಾರವಾಗಿರುವ ಕಡವೆ ಜಿಂಕೆಗಳ ಪ್ರಮಾಣ ಕುಸಿತಗೊಳ್ಳುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ’ ಎಂಬುದು ಅಮರಾಕ್ಷರ ಹೇಳುವ ಮಾತು. ‘ಗ್ರಾಮ ಪಂಚಾಯ್ತಿಗೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿಕೊಳ್ಳಲು ಜಾಗದ ಕೊರತೆ ಇತ್ತು. ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಘಟಕ ನಿರ್ಮಾಣಕ್ಕೆ ನೀಡಲಾಗಿದೆ. ಅರಣ್ಯದಲ್ಲಿ ಬಿದ್ದ ಕಸಗಳನ್ನು ಸಂಗ್ರಹಿಸಲು ಇಲಾಖೆಯ ಸಿಬ್ಬಂದಿಯೂ ನೆರವಾಗಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT