‘ಸಾವಯವ, ಸಿರಿಧಾನ್ಯ ಕೆಫೆ ಚೆನ್ನಾಗಿ ನಡೆಯುತ್ತಿದೆ. ಸ್ಥಳೀಯರಿಗಿಂತಲೂ ಹೈವೆಯಲ್ಲಿ ಅಡ್ಡಾಡುವ ಗ್ರಾಹಕರೇ ನಮ್ಮ ಕೆಫೆಯ ಗ್ರಾಹಕರು. ಒಮ್ಮೆ ಇಲ್ಲಿಗೆ ಬಂದು ರುಚಿ ನೋಡಿದವರು ಮತ್ತೊಮ್ಮೆ ಖಂಡಿತ ಬರುತ್ತಾರೆ. ರೆಸ್ಟೊರೆಂಟ್ ಅತ್ಯುತ್ತಮ ವಹಿವಾಟು ನಡೆಸುತ್ತಿದೆ ಅಂತ ಹೇಳುವಂತಿಲ್ಲ. ಆದರೆ, ನಷ್ಟದಲ್ಲೇನೂ ನಡೆಯುತ್ತಿಲ್ಲ. ವಾರಾಂತ್ಯದಲ್ಲಿ ವಹಿವಾಟು ಜೋರಾಗಿರುತ್ತದೆ’ ಎನ್ನುತ್ತಾರೆ ಕೆವಿಕೆ ಕಾರ್ಯಕ್ರಮ ಸಂಯೋಜಕ ಡಾ. ಎಲ್.ಜಿ.ಹಿರೇಗೌಡರ.