
ಬೊಂಬೆ ಕುಣಿತ ಕಲೆ ಹೊಸ ತಲೆಮಾರಿನ ಜನರನ್ನು ಆಕರ್ಷಿಸುವ ರೀತಿಯಲ್ಲಿ ಹೊಸ ಆಯಾಮದಿಂದ ಮರುಸ್ಥಾಪಿಸಬೇಕಾದ ಅಗತ್ಯವಿದೆ. ಕಲಾವಿದರ ಬದುಕು ಕೂಡ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರಣ ಹೊಸಬರು ಈ ಕಲೆ ನೆಚ್ಚಿಕೊಂಡು ಬರುವುದು ಕಷ್ಟ. ಇರುವವರೇ ಈ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಸರ್ಕಾರ ನಮ್ಮಂಥ ಅನುಭವಿಗಳಿಗೆ ಆರ್ಥಿಕ ನೆರವು ಒದಗಿಸಿದರೆ ಹೊಸಬರನ್ನು ಈ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡಬಹುದು.
–ಹನುಮಂತಪ್ಪ ಬಬ್ಬಲ್, ಬೊಂಬೆ ಕುಣಿತ ಕಲಾವಿದ, ಚಿಲಕಮುಕಿ, ಕೊಪ್ಪಳ ಜಿಲ್ಲೆಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ಗೊಂಬೆಗಳನ್ನು ಸ್ವಚ್ಛಗೊಳಿಸಿದರು
–ಪ್ರಜಾವಾಣಿ ಚಿತ್ರ/ಗುರು ಹಬೀಬ
ಟೆಂಟ್ಗಳಲ್ಲಿ ವಾಸಮಾಡುತ್ತಿರುವ ವೇಷಗಾರರು

ನಮಗೆ ಭೂಮಿ ಇಲ್ಲ. ಅಲೆಮಾರಿ ಜೀವನ. ಕಲೆ ಬಿಟ್ಟು ಬೇರೆ ಜಗತ್ತು ಗೊತ್ತಿಲ್ಲ. ಮಾಸಾಶನ, ಗೌರವಧನ ಸರಿಯಾಗಿ ತಲುಪುತ್ತಿಲ್ಲ. ಶಾಲಾ– ಕಾಲೇಜು, ಊರುಗಳಲ್ಲಿ ಪ್ರದರ್ಶನ ನೀಡುವ ವಿಶೇಷ ಅವಕಾಶ ನೀಡಬೇಕು. ಬೆರಳೆಣಿಕೆಯಷ್ಟಿರುವ ಸಮುದಾಯವನ್ನು ರಕ್ಷಿಸಬೇಕು. ಅಲೆಮಾರಿಗಳಲ್ಲಿ 115 ಜಾತಿಗಳಿವೆ. ಪರಿಶಿಷ್ಟ ಜಾತಿಯಲ್ಲಿ ಬರುವ ಬುಡ್ಗ ಜಂಗಮ ಸಮುದಾಯವೂ ಸೇರಿದಂತೆ ಕಲೆಯನ್ನು ನಂಬಿರುವವರಿಗೆ ಸರ್ಕಾರ ನೆರವಾಗಬೇಕು.
–ಅಮರೇಶ ಹಸಮಕಲ್, ಮಸ್ಕಿ, ರಾಯಚೂರುಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ವಾಸವಾಗಿರುವ ಜೋಪಡಿಗಳು
ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ವಾಸವಾಗಿರುವ ಜೋಪಡಿಗಳು
ಪೂರಕ ಮಾಹಿತಿ: ಎಂ.ಜಿ. ಬಾಲಕೃಷ್ಣ, ಸತೀಶ ಬಿ, ಬಸೀರ್ ಅಹ್ಮದ್ ನಗಾರಿ, ಮೋಹನ್ ಕುಮಾರ ಸಿ. ಚಿತ್ರಗಳು: ಗುರು ಹಬೀಬ್