ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಿಘ್ನೇಶ್ ನಾಯಕ್ ಅವರು ಘಟನೆ ನಡೆದು ಕೆಲವು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ತಮಗೆ ದುಬೈ ಹಾಗೂ ಇತರ ದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಾಳಿಗ ಅವರ ಸಹೋದರಿಯರು ಆರೋಪಿಸಿದ್ದರು. ಬಾಳಿಗ ಅವರ ಹತ್ಯೆಯ ವಿಚಾರಣೆಯನ್ನು ಚುರುಕೊಗೊಳಿಸಬೇಕು, ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಈವರೆಗೆ ಅನೇಕ ಹೋರಾಟಗಳು ನಡೆದಿವೆ. ಸಾಮಾಜಿಕ ಮಾಧ್ಯಮದಲ್ಲಿ ‘ಜಸ್ಟೀಸ್ ಫಾರ್ ವಿನಾಯಕ ಬಾಳಿಗ’ ಎಂಬ ಅಭಿಯಾನವೂ ಜೋರಾಗಿ ನಡೆದಿತ್ತು.