‘ಕೋವಿಡ್ ವಿರುದ್ಧ ಹೋರಾಡಲು ನರೇಂದ್ರ ಮೋದಿ ಅವರ ಸರ್ಕಾರ ಶತಾಯಗತಾಯ ಹೋರಾಡುತ್ತಿದೆ. ದೆಹಲಿಗೆ 8 ಪಿಎಸ್ಎ ಆಮ್ಲಜನಕ ತಯಾರಿಕಾ ಘಟಕಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಅದರಲ್ಲಿ ಎರಡನ್ನು ಮಾತ್ರ ದೆಹಲಿ ಸರ್ಕಾರ ಸ್ಥಾಪನೆ ಮಾಡಿದೆ. ಮಹಾರಾಷ್ಟ್ರಕ್ಕೆ 10 ಘಟಕಗಳನ್ನು ಮಂಜೂರು ಮಾಡಿದ್ದು, ರಾಜ್ಯ ಸರ್ಕಾರ 1 ಘಟಕವನ್ನು ಮಾತ್ರ ಸ್ಥಾಪನೆ ಮಾಡಿದೆ. ಆದರೆ ಗುಜರಾತ್ಗೆ 11 ಘಟಕಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ 11 ಘಟಕಗಳೂ ಕಾರ್ಯಾರಂಭ ಮಾಡಿವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ದೇಶದಾದ್ಯಂತ ಹಲವರು ಸಾವಿರಾರು ಬಾರಿ ರಿಟ್ವೀಟ್ ಮಾಡಿದ್ದಾರೆ.