ಇದು ಸುಳ್ಳು ಸುದ್ದಿ ಎಂದು ಆಲ್ಟ್ ನ್ಯೂಸ್, ದಿ ಕ್ವಿಂಟ್, ಫ್ಯಾಕ್ಟ್ಲಿ ಫ್ಯಾಕ್ಟ್ಚೆಕ್ ಪ್ರಕಟಿಸಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ರೀತಿ ಹೇಳಿದ್ದಾರೆ ಎಂಬುದಕ್ಕೆ ಎಲ್ಲಿಯೂ ಪುರಾವೆಗಳು ಇಲ್ಲ. ಅಂಬೇಡ್ಕರ್ ಅವರ ಸಂಪೂರ್ಣ ಬರಹ, ಭಾಷಣ, ಉಪನ್ಯಾಸ ಮತ್ತು ಸಂಸತ್ತಿನಲ್ಲಿ ಮಾಡಿದ ಭಾಷಣಗಳ ಸಂಗ್ರಹದ 22 ಸಂಪುಟಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿದೆ. ಅವುಗಳಲ್ಲಿಯೂ ಇಂತಹ ಹೇಳಿಕೆ ಇಲ್ಲ. ಈ ಸಂಪುಟಗಳ ರಚನೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಹರಿ ನರ್ಕೆ ಅವರು ಸಹ ಈ ಮಾತನ್ನೇ ಹೇಳಿದ್ದಾರೆ. ಇದು ಸುಳ್ಳುಸುದ್ದಿ ಎಂದು ಮೂರೂ ವೇದಿಕೆಗಳು ತಮ್ಮ ಫ್ಯಾಕ್ಟ್ಚೆಕ್ನಲ್ಲಿ ವಿವರಿಸಿವೆ.