ಪ್ರವಾಹದಲ್ಲಿ ಗ್ಯಾಸ್ ಸಿಲಿಂಡರ್ಗಳು ಕೊಚ್ಚಿಕೊಂಡು ಹೋಗುತ್ತಿರುವ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ವಾರದಿಂದ ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮಳೆಯಿಂದ ಅಲ್ಲಿಯ ಕಾಶಿಪುರ ನಗರದ ಗ್ಯಾಸ್ ಸಿಲಿಂಡರ್ ಘಟಕ ಕೊಚ್ಚಿ ಹೋಗಿದೆ ಎಂದು ಸುದ್ದಿಯಾಗುತ್ತಿದೆ. ಹಲವಾರು ಯುಟ್ಯೂಬ್ ಚಾನಲ್ಗಳ ಕೂಡಾ ಅ.20ರಿಂದ ಈ ವಿಡಿಯೊವನ್ನು ಅಪ್ಲೋಡ್ ಮಾಡುತ್ತಿವೆ. ಉತ್ತರಾಖಂಡದ ದುರಂತ ಎಂಬಂತೆ ಈ ವಿಡಿಯೊವನ್ನು ಬಿಂಬಿಸುತ್ತಿವೆ.