‘ಭಾರತೀಯರು ವಿಜ್ಞಾನ–ತಂತ್ರಜ್ಞಾನ ವಿಚಾರದಲ್ಲಿ ವಿಶ್ವದ ಬೇರೆಲ್ಲಾ ನಾಗರಿಕತೆಗಳಿಗಿಂತ ಬಹಳ ಮುಂದೆ ಇದ್ದರು. ಪಲ್ಲವ ರಾಜ 2ನೇ ನರಸಿಂಹನು 1,400 ವರ್ಷಗಳ ಹಿಂದೆ ನೆಲ್ಲೂರಿನಲ್ಲಿ ಕಟ್ಟಿಸಿದ್ದ ರಂಗನಾಥ ಸ್ವಾಮಿಯ ದೇವಾಲಯದಲ್ಲಿ ಒಂದು ಉಬ್ಬು ಶಿಲ್ಪವಿದೆ. ಅದರಲ್ಲಿ ವ್ಯಕ್ತಿಯೊಬ್ಬ ಕಂಪ್ಯೂಟರ್ ಬಳಸುತ್ತಿದ್ದಾನೆ. ನಮ್ಮ ಪೂರ್ವಜರ ಕಲ್ಪನೆ ಅಗಾಧವಾದುದಲ್ಲವೇ’ ಎಂಬ ವಿವರ ಇರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿವರಣೆಗೆ ಹೋಲುವ ಚಿತ್ರವೂ ವೈರಲ್ ಆಗಿವೆ.