ಕೇಂದ್ರ ಸರ್ಕಾರವು ಈ ಸಂಬಂಧ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ತಿಳಿಸಿದೆ. ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯಾದ @mygovindia ಮೂಲಕವೂ ಈ ಸಂಬಂಧ ಸ್ಪಷ್ಟನೆ ನೀಡಲಾಗಿದೆ. ‘ಸರಿಯಾದ ಮಾಹಿತಿ ಹೊಂದಿ, ಸುರಕ್ಷಿತವಾಗಿರಿ, ಪ್ರತಿ ರೋಗಿಯ ಆರೈಕೆಗೆ ಧನಸಹಾಯ ಮಾಡುವ ಮಾಹಿತಿಯು ಶುದ್ಧ ಸುಳ್ಳು’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.