ಒಂದು ಲೋಟ ಹೆಸರುಕಾಳು ತಂಪನ್ನು ಕುಡಿದರೆ ಸಾಕು, ನಿಮ್ಮ ಮೆದುಳು ನಿಮಗೆ ತೃಪ್ತಿಯ ಸಂಕೇತ ನೀಡುತ್ತದೆ. ಹೀಗಾಗಿ ಹಸಿವು ಬೇಗ ನೀಗುತ್ತದೆ. ಮಲೆನಾಡಿನ ತೋಟಗಳಲ್ಲಿ, ಕಟ್ಟಡ ಕೆಲಸ ಮಾಡುವ ಕಾರ್ಮಿಕರು ಇದನ್ನು ಲಾಗಾಯ್ತಿನಿಂದ ಕುಡಿಯುವ ರೂಢಿಯಿದೆ. ಕಾರಣ ಇದು ಆಯಾಸ ನೀಗಿಸುವುದಲ್ಲದೇ, ತಕ್ಷಣಕ್ಕೆ ಎನರ್ಜಿ ನೀಡುತ್ತದೆ. ಮಧುಮೇಹಿಗಳಿಗೂ ಉಪಯುಕ್ತ. ಆದರೆ ಬೆಲ್ಲ ಹಾಕಿಕೊಳ್ಳದೇ ಕುಡಿಯಿರಿ.