‘ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ವಕ್ತಾರರಂತೆ ನಡೆದುಕೊಂಡಿದ್ದ ಅವರು ಆ ಪಕ್ಷದ ಸೋಲಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೃಪಾಶೀರ್ವಾದದಿಂದ ಸಮಾಜದ ಯುವ ಮುಖಂಡರು, ಮುತ್ಸದ್ಧಿಗಳು ಮಂತ್ರಿಗಿರಿ ಮಾತ್ರವಲ್ಲ, ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಮಾತೆ ಮಹಾದೇವಿ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಮಹಾಸಭಾ ಭಾವಿಸಿದೆ’ ಎಂದು ಅವರ ಹೇಳಿಕೆ ತಿಳಿಸಿದೆ.