<p>ಅಂತರ್ಗತ ಎಂದರೆ ಒಳಗೂಡಿಸಿಕೊಳ್ಳುವಿಕೆ. ಪ್ರಪಂಚ ಕೋವಿಡ್-19 ನಿಂದ ತತ್ತರಿಸುತ್ತಿದೆ. ನಮ್ಮೆಲ್ಲರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ನೌಕರಿಗಳ ಅನಿಶ್ಚಿತತೆ, ಆರ್ಥಿಕ ಸಂಕಷ್ಟ, ದೈಹಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿದೆ.</p>.<p>ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು, ಬದಲಾವಣೆಗಳನ್ನು ಸ್ವೀಕರಿಸಲು ಹಾಗೂ ಸಮರ್ಥವಾಗಿ ಎದುರಿಸಲು ಬೇಕು ವೈವಿಧ್ಯತೆಗಳ ಅಂತರ್ಗತ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆತಂಕ, ಖಿನ್ನತೆ, ಒತ್ತಡಗಳಿಗೆ ಒಳಗಾಗುತ್ತಾನೆ. ಈ ಬದಲಾವಣೆಗಳನ್ನು ಅಂತರ್ಗತ ಮಾಡಿಕೊಂಡಲ್ಲಿ ಅನೇಕ ಅವಕಾಶಗಳು ದಾರಿದೀಪವಾಗಿ ಕಾಣಿಸಬಹುದು. ಇದನ್ನು ನಾವು ವೈವಿಧ್ಯತೆಗಳ ಅಂತರ್ಗತ ಎನ್ನಬಹುದಾಗಿದೆ.</p>.<p><strong>ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಗಳೇನು ?</strong></p>.<p>ನಾವು ಕೆಲಸ ಮಾಡುವ ಸ್ಥಳದಲ್ಲಿರಬಹುದು, ನಮ್ಮ ದೈನಂದಿನ ಜೀವನದ ದಿನಚರಿಯಲ್ಲಿರಬಹುದು. ಮಕ್ಕಳ ವಿಧ್ಯಾಭ್ಯಾಸವಿರಬಹುದು, ನಾವು ಸೇವಿಸುವ ಆಹಾರವಿರಬಹುದು, ನಾವು ಧರಿಸುವ ಬಟ್ಟೆ–ಬರೆಗಳಿರಬಹುದು, ಜೀವನಶೈಲಿ ಎಲ್ಲದರಲ್ಲೂ ಕೋವಿಡ್ ಬದಲಾವಣೆಗಳನ್ನು ತಂದಿದೆ. ಈ ಎಲ್ಲಾ ಬದಲಾವಣೆಗಳನ್ನು ನಮ್ಮಲ್ಲಿ ಒಳಗೂಡಿಸಿಕೊಳ್ಳಬೇಕಾದ ಸವಾಲನ್ನು ಕೋವಿಡ್ ಸಂಕಷ್ಟವು ಒಡ್ಡಿದೆ. ಈ ಬದಲಾವಣೆಗಳನ್ನು, ವೈವಿಧ್ಯತೆಗಳನ್ನು ಸಕಾರಾತ್ಮಕವಾಗಿ ಅಂತರ್ಗತ ಮಾಡಿಕೊಂಡಾಗ ಮಾತ್ರ ಮುಂದಿನ ಬದುಕು ಆಶಾದಾಯಕವಾಗುತ್ತದೆ.</p>.<p><strong>ಬದಲಾವಣೆಗಳನ್ನು ಅಂತರ್ಗತ ಮಾಡಿಕೊಳ್ಳುವ ವಿಧಾನಗಳು?</strong></p>.<p>* ನಮ್ಮಂತೆಯೇ ಪರರು ಎಂಬ ಭಾವದೊಂದಿಗೆ ಸಹೃದಯತೆಯನ್ನು ಬೆಳೆಸಿಕೊಳ್ಳಬೇಕು.<br />* ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈ ತೊಳೆದುಕೊಳ್ಳುವುದು ಈ ಎಲ್ಲಾ ಅಭ್ಯಾಸಗಳು ನಮ್ಮನ್ನು ನಾವು ಆರೋಗ್ಯವಾಗಿರಲು ಹಾಗೂ ನಮ್ಮ ಅವಲಂಭಿತರನ್ನು ಸುರಕ್ಷಿತವಾಗಿಡಲು ಎಂಬುದನ್ನು ಮನಗೊಳ್ಳಬೇಕು.<br />* ನೌಕರಿಗಳ ಅನಿಶ್ಚಿತತೆ ಕಾಡುತ್ತಿದ್ದ್ರೆ ಬದಲಿ ನೌಕರಿಯನ್ನು ಸ್ವೀಕರಿಸಲು ಮನಸ್ಸು ಮಾಡಬೇಕು.<br />* ಮನೆಯಲ್ಲೇ ಕುಳಿತು ಕೆಲಸ ಮಾಡುವ ಪರಿಸ್ಥಿತಿ ಬಂದರೆ ಅದಕ್ಕೆ ನಮ್ಮ ಮನಸ್ಸನ್ನು ತಯಾರಿ ಮಾಡಿಕೊಳ್ಳಬೇಕು.<br />* ಆರ್ಥಿಕ ಸಂಕಷ್ಟಗಳು ಎದುರಾದರೆ ಪರ್ಯಾಯ ಸಂಪಾದನೆಯ ಮಾರ್ಗಗಳನ್ನು ಹುಡುಕಬೇಕು.<br />* ಮಕ್ಕಳ ವಿದ್ಯಾಭ್ಯಾಸದಲ್ಲಿ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಅಳವಡಿಸಿಕೊಳ್ಳಬೇಕು.<br />* ಬದಲಾವಣೆಯನ್ನು ತಂದೊಡ್ಡುತ್ತಿರುವ ತಂತ್ರಜ್ಞಾನಕ್ಕೆ ಮೈಮನಗಳು ಹೊಂದಿಕೊಳ್ಳುವಂತೆ ತಯಾರಿ ನಡೆಸಿಕೊಳ್ಳಬೇಕು.<br />* ಪ್ರಪಂಚವೇ ಸ್ತಬ್ಧವಾಯಿತು ಎಂಬ ಭಾವವನ್ನು ಬಿಟ್ಟು ಹೊಸತನಕ್ಕೆ ನಮ್ಮನ್ನು ಅಳವಡಿಸಿಕೊಳ್ಳಲು ಮನಸ್ಸು ಮಾಡಬೇಕು.<br />* ಯಾರು ಹೊಸತನಕ್ಕೆ ರೂಪಾಂತರಗೊಳ್ಳುತ್ತಾರೆ ಅವರಷ್ಟೇ ಪ್ರಪಂಚದಲ್ಲಿ ಬದುಕುಳಿಯಲು ಸಾಧ್ಯ ಎಂಬುದನ್ನು ಮನಗೊಳ್ಳಬೇಕು.<br />* ಬದಲಾವಣೆ ಜಗದ ನಿಯಮ, ಜೀವನಕ್ಕಿಂತ ಜೀವನಶೈಲಿ ದುಬಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಸತ್ಯವನ್ನು ಅರ್ಥಮಾಡಿಕೊಂಡಲ್ಲಿ ಆಶಾದಾಯಕ ಬದುಕು ಸಾಧ್ಯ.</p>.<p><strong>(ಲೇಖಕರು ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂತರ್ಗತ ಎಂದರೆ ಒಳಗೂಡಿಸಿಕೊಳ್ಳುವಿಕೆ. ಪ್ರಪಂಚ ಕೋವಿಡ್-19 ನಿಂದ ತತ್ತರಿಸುತ್ತಿದೆ. ನಮ್ಮೆಲ್ಲರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ನೌಕರಿಗಳ ಅನಿಶ್ಚಿತತೆ, ಆರ್ಥಿಕ ಸಂಕಷ್ಟ, ದೈಹಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿದೆ.</p>.<p>ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು, ಬದಲಾವಣೆಗಳನ್ನು ಸ್ವೀಕರಿಸಲು ಹಾಗೂ ಸಮರ್ಥವಾಗಿ ಎದುರಿಸಲು ಬೇಕು ವೈವಿಧ್ಯತೆಗಳ ಅಂತರ್ಗತ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆತಂಕ, ಖಿನ್ನತೆ, ಒತ್ತಡಗಳಿಗೆ ಒಳಗಾಗುತ್ತಾನೆ. ಈ ಬದಲಾವಣೆಗಳನ್ನು ಅಂತರ್ಗತ ಮಾಡಿಕೊಂಡಲ್ಲಿ ಅನೇಕ ಅವಕಾಶಗಳು ದಾರಿದೀಪವಾಗಿ ಕಾಣಿಸಬಹುದು. ಇದನ್ನು ನಾವು ವೈವಿಧ್ಯತೆಗಳ ಅಂತರ್ಗತ ಎನ್ನಬಹುದಾಗಿದೆ.</p>.<p><strong>ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಗಳೇನು ?</strong></p>.<p>ನಾವು ಕೆಲಸ ಮಾಡುವ ಸ್ಥಳದಲ್ಲಿರಬಹುದು, ನಮ್ಮ ದೈನಂದಿನ ಜೀವನದ ದಿನಚರಿಯಲ್ಲಿರಬಹುದು. ಮಕ್ಕಳ ವಿಧ್ಯಾಭ್ಯಾಸವಿರಬಹುದು, ನಾವು ಸೇವಿಸುವ ಆಹಾರವಿರಬಹುದು, ನಾವು ಧರಿಸುವ ಬಟ್ಟೆ–ಬರೆಗಳಿರಬಹುದು, ಜೀವನಶೈಲಿ ಎಲ್ಲದರಲ್ಲೂ ಕೋವಿಡ್ ಬದಲಾವಣೆಗಳನ್ನು ತಂದಿದೆ. ಈ ಎಲ್ಲಾ ಬದಲಾವಣೆಗಳನ್ನು ನಮ್ಮಲ್ಲಿ ಒಳಗೂಡಿಸಿಕೊಳ್ಳಬೇಕಾದ ಸವಾಲನ್ನು ಕೋವಿಡ್ ಸಂಕಷ್ಟವು ಒಡ್ಡಿದೆ. ಈ ಬದಲಾವಣೆಗಳನ್ನು, ವೈವಿಧ್ಯತೆಗಳನ್ನು ಸಕಾರಾತ್ಮಕವಾಗಿ ಅಂತರ್ಗತ ಮಾಡಿಕೊಂಡಾಗ ಮಾತ್ರ ಮುಂದಿನ ಬದುಕು ಆಶಾದಾಯಕವಾಗುತ್ತದೆ.</p>.<p><strong>ಬದಲಾವಣೆಗಳನ್ನು ಅಂತರ್ಗತ ಮಾಡಿಕೊಳ್ಳುವ ವಿಧಾನಗಳು?</strong></p>.<p>* ನಮ್ಮಂತೆಯೇ ಪರರು ಎಂಬ ಭಾವದೊಂದಿಗೆ ಸಹೃದಯತೆಯನ್ನು ಬೆಳೆಸಿಕೊಳ್ಳಬೇಕು.<br />* ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈ ತೊಳೆದುಕೊಳ್ಳುವುದು ಈ ಎಲ್ಲಾ ಅಭ್ಯಾಸಗಳು ನಮ್ಮನ್ನು ನಾವು ಆರೋಗ್ಯವಾಗಿರಲು ಹಾಗೂ ನಮ್ಮ ಅವಲಂಭಿತರನ್ನು ಸುರಕ್ಷಿತವಾಗಿಡಲು ಎಂಬುದನ್ನು ಮನಗೊಳ್ಳಬೇಕು.<br />* ನೌಕರಿಗಳ ಅನಿಶ್ಚಿತತೆ ಕಾಡುತ್ತಿದ್ದ್ರೆ ಬದಲಿ ನೌಕರಿಯನ್ನು ಸ್ವೀಕರಿಸಲು ಮನಸ್ಸು ಮಾಡಬೇಕು.<br />* ಮನೆಯಲ್ಲೇ ಕುಳಿತು ಕೆಲಸ ಮಾಡುವ ಪರಿಸ್ಥಿತಿ ಬಂದರೆ ಅದಕ್ಕೆ ನಮ್ಮ ಮನಸ್ಸನ್ನು ತಯಾರಿ ಮಾಡಿಕೊಳ್ಳಬೇಕು.<br />* ಆರ್ಥಿಕ ಸಂಕಷ್ಟಗಳು ಎದುರಾದರೆ ಪರ್ಯಾಯ ಸಂಪಾದನೆಯ ಮಾರ್ಗಗಳನ್ನು ಹುಡುಕಬೇಕು.<br />* ಮಕ್ಕಳ ವಿದ್ಯಾಭ್ಯಾಸದಲ್ಲಿ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಅಳವಡಿಸಿಕೊಳ್ಳಬೇಕು.<br />* ಬದಲಾವಣೆಯನ್ನು ತಂದೊಡ್ಡುತ್ತಿರುವ ತಂತ್ರಜ್ಞಾನಕ್ಕೆ ಮೈಮನಗಳು ಹೊಂದಿಕೊಳ್ಳುವಂತೆ ತಯಾರಿ ನಡೆಸಿಕೊಳ್ಳಬೇಕು.<br />* ಪ್ರಪಂಚವೇ ಸ್ತಬ್ಧವಾಯಿತು ಎಂಬ ಭಾವವನ್ನು ಬಿಟ್ಟು ಹೊಸತನಕ್ಕೆ ನಮ್ಮನ್ನು ಅಳವಡಿಸಿಕೊಳ್ಳಲು ಮನಸ್ಸು ಮಾಡಬೇಕು.<br />* ಯಾರು ಹೊಸತನಕ್ಕೆ ರೂಪಾಂತರಗೊಳ್ಳುತ್ತಾರೆ ಅವರಷ್ಟೇ ಪ್ರಪಂಚದಲ್ಲಿ ಬದುಕುಳಿಯಲು ಸಾಧ್ಯ ಎಂಬುದನ್ನು ಮನಗೊಳ್ಳಬೇಕು.<br />* ಬದಲಾವಣೆ ಜಗದ ನಿಯಮ, ಜೀವನಕ್ಕಿಂತ ಜೀವನಶೈಲಿ ದುಬಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಸತ್ಯವನ್ನು ಅರ್ಥಮಾಡಿಕೊಂಡಲ್ಲಿ ಆಶಾದಾಯಕ ಬದುಕು ಸಾಧ್ಯ.</p>.<p><strong>(ಲೇಖಕರು ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>