<p>ಜಗತ್ತನ್ನು ನೋಡಲು ಕಣ್ಣುಗಳು ಬೇಕು. ದೃಷ್ಟಿಯಿಲ್ಲದಿದ್ದರೆ ಜೀವನದ ಪ್ರಯಾಣ ಸುಲಭವಲ್ಲ. ಹೀಗೆ ನಮ್ಮ ಬದುಕಿಗೆ ಬೆಳಕಾಗಿರುವ ಕಣ್ಣುಗಳನ್ನು ಹೇಗೆ ಜೋಪಾನ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿ ಕೆಲವೊಂದು ಸಲಹೆ–ಸೂಚನೆಗಳಿವೆ:</p>.<p><strong>ಕಣ್ಣನ್ನು ತೊಳೆಯುವುದು:</strong> ಮುಂಜಾನೆ ಶುದ್ಧತಣ್ಣೀರಿನಲ್ಲಿ ಕಣ್ಣನ್ನು ತೊಳೆಯುವುದು, ಜೇನುತುಪ್ಪ ಮತ್ತು ತಣ್ಣೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಕಣ್ಣನ್ನು ತೊಳೆಯುವುದು ಅಕ್ಷಿಶುದ್ಧಿಕರ.</p>.<p><strong>ಕಾಡಿಗೆ ಹಚ್ಚುವುದು: </strong>ತುಪ್ಪದಲ್ಲಿ ಶುದ್ಧ ಬಿಳಿಹತ್ತಿಯ ಬತ್ತಿಯನ್ನು ಉರಿಸಬೇಕು. ದೀಪ ಉರಿಯುವಾಗ ಮಣ್ಣು/ ಬೆಳ್ಳಿ/ ಬಂಗಾರ/ ತಾಮ್ರದ ಬಟ್ಟಲಿನ ಪಾತ್ರೆಯ ತಳವನ್ನು ದೀಪದ ಮೇಲೆ ಅಡ್ಡವಾಗಿ ಹಿಡಿಯಬೇಕು. ಪೂರ್ತಿ ಉರಿದ ಮೇಲೆ ಮಸಿಯ ದಪ್ಪಪದರ ಅಂಟಿರುತ್ತದೆ. ಅದನ್ನು ಮೃದುವಾಗಿ ತೆಗೆದು ಸಂಗ್ರಹಿಸಿಡಬೇಕು. ನಿತ್ಯವೂ ಬೆಳಗ್ಗೆ ಹಲ್ಲುಜ್ಜಿದ ನಂತರ ಬೆಣ್ಣೆ/ ತುಪ್ಪದೊಂದಿಗೆ ಕಲಸಿ ಕಿರುಬೆರಳಿನಲ್ಲಿ ಕಣ್ಣಿಗೆ ಕಾಡಿಗೆಯಂತೆ ಬಳಸಬೇಕು. ಈ ಮೃದುಕಾಡಿಗೆ ದೃಷ್ಟಿವರ್ಧಕ.</p>.<p class="Subhead"><strong>ತುಪ್ಪದ ಕವಲಗ್ರಹ: </strong>ದಿವಸವೂ ಬೆಳಗ್ಗೆ ಹಲ್ಲುಜ್ಜಿದ ತಕ್ಷಣ ತುಪ್ಪದ ಮೇಲಿನ ತಿಳಿಯನ್ನು ಬೆಚ್ಚಗೆ ಮಾಡಿ ಬಾಯೊಳಗೆ ಇಟ್ಟುಕೊಳ್ಳುವುದು, ಎಂಜಲು ತುಂಬಿ ಬಂದಾಗ ಉಗಿಯುವುದು ಕೂಡ ನೇತ್ರಗಳಿಗೆ ಹಿತಕರ.</p>.<p class="Subhead"><strong>ಸರ್ವಾಂಗಗಳಿಗೂ ಅಭ್ಯಂಗ: </strong>ನಿತ್ಯವೂ ತಲೆ, ಮೈ, ಕಾಲುಗಳಿಗೆ ಎಣ್ಣೆ ಸವರಿಕೊಂಡು ಸ್ನಾನಮಾಡುವ ಉಪಾಯವನ್ನು ಆಯುರ್ವೇದವು ಹೇಳಿದೆ. ಮುಪ್ಪನ್ನು ಮುಂದೂಡುವ, ದೃಷ್ಟಿಪ್ರಸಾದನ ಮಾಡುವ ಉತ್ತಮೋತ್ತಮ ದಿನಚರಿಯಿದು.</p>.<p class="Subhead"><strong>ನಸ್ಯ: </strong>ಸ್ನಾನಕ್ಕೂ ಮುನ್ನ ಮೂಗಿಗೆ ನಾಲ್ಕಾರು ಹನಿಗಳಷ್ಟು ಕರಗಿಸಿದ ತುಪ್ಪವನ್ನು ಹಾಕುವುದು ಕಣ್ಣಿಗೆ ಹಿತ.</p>.<p class="Subhead"><strong>ಸ್ನಾನ: </strong>ತಲೆಗೆ ತಣ್ಣಗಿನ ಎಣ್ಣೆ ಮತ್ತು ತಲೆಗೆ ತಣ್ಣೀರು ಸ್ನಾನ ಮಾಡುವುದು ದೃಷ್ಟಿರಕ್ಷಕ. ತಲೆಗೆ ಬಿಸಿಬಿಸಿ ನೀರಿನಿಂದ ಸ್ನಾನ ಮಾಡುವುದು ದೃಷ್ಟಿಶಕ್ತಿಯನ್ನು ಕುಗ್ಗಿಸುತ್ತದೆ. ತಣ್ಣೀರು, ಅಥವಾ ಚಳಿಗಾಲ/ ಶೀತಪ್ರದೇಶದಲ್ಲಿ ಮೈಬಿಸಿ/ ಹೂಬಿಸಿ ನೀರಿನ ಸ್ನಾನ ಕಣ್ಣಿಗೆ ಉತ್ತಮ.</p>.<p class="Subhead"><strong>ಕಣ್ಣಿಗೆ ಬಿಂದುಗಳು: </strong>ತಾಯಿಯ ಎದೆಹಾಲನ್ನು ಹಿಂಡಿ ನಾಲ್ಕಾರು ಹನಿಗಳನ್ನು, ಹಾಲಿನ ಬಿಸಿ ಆರುವ ಮುನ್ನವೇ ಕಣ್ಣಿಗೆ ಹಾಕಿಕೊಳ್ಳುವುದು ನೇತ್ರಗಳಿಗೆ ಪುಷ್ಟಿಕರ. ಸ್ತನ್ಯ ಲಭ್ಯವಿರದಿದ್ದರೆ, ಕಾಯಿಸಿ ಆರಿಸಿದ ಹಾಲನ್ನು ಉಪಯೋಗಿಸಬಹುದು. ಕಣ್ಣಿನ ಉರಿ, ಒಣಗಿದ ತೇವವನ್ನು ಸರಿಪಡಿಸುತ್ತದೆ.</p>.<p class="Subhead"><strong>ಆಹಾರದಲ್ಲಿ ತುಪ್ಪ-ಬೆಣ್ಣೆ:</strong> ನಿತ್ಯವೂ ಬಿಸಿ ಬಿಸಿ ಆಹಾರದೊಂದಿಗೆ ಹಾಲಿನಿಂದ ತೆಗೆದ ಬೆಣ್ಣೆಯನ್ನು, ತುಪ್ಪವನ್ನು ಸೇವಿಸುವುದು ಕಣ್ಣುಗಳಿಗೆ ಹಿತಕರ.</p>.<p class="Subhead"><strong>ಹಣ್ಣಿನ ಸೇವನೆ: </strong>ಹಸಿ/ಒಣದ್ರಾಕ್ಷಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವಿಸುವುದು ಕಣ್ಣಿಗೆ ಹಿತಕರ.</p>.<p class="Subhead"><strong>ಉಪ್ಪು: </strong>ಆಹಾರದಲ್ಲಿ ಸೈಂಧವಉಪ್ಪು(ಅಥವಾ ಪಥ್ಯದ ಉಪ್ಪು/ಕಲ್ಲುಪ್ಪು/ರಾಕ್ ಸಾಲ್ಟ್) ಬಳಸುವುದು ಕಣ್ಣಿಗೆ ಹಿತ. ಬೇರೆಲ್ಲಾ ಉಪ್ಪು ದೃಷ್ಟಿನಾಶಕ. ನಿತ್ಯವೂ ಸಮುದ್ರದ ಉಪ್ಪು, ಟೇಬಲ್ ಸಾಲ್ಟ್, ಅಯೋಡಿನ್ ಉಪ್ಪಿನ ನಿತ್ಯಬಳಕೆಯಿಂದ ದೃಷ್ಟಿಶಕ್ತಿ ಕುಂದುವುದು.</p>.<p class="Subhead"><strong>ರಾತ್ರಿಯ ಆಹಾರ: </strong>ಎಂಟುಗಂಟೆಯೊಳಗೆ ರಾತ್ರಿ ಆಹಾರಸೇವನೆಯ ಅಭ್ಯಾಸ ಕಣ್ಣು ಮತ್ತು ಇತರ ಇಂದ್ರಿಯಗಳಿಗೆ ಹಿತಕರ. ಮೊಸರನ್ನು ರಾತ್ರಿಯ ಆಹಾರದಲ್ಲಿ ಸೇವಿಸಬಾರದು. ರಾತ್ರಿವೇಳೆಯಲ್ಲಿ ಮೊಸರಿನ ಸೇವನೆ ಕಣ್ಣಿನ ಹಲವು ತೊಂದರೆಗಳಿಗೆ ಕಾರಣ.</p>.<p class="Subhead"><strong>ನೆಲ್ಲಿಕಾಯಿಯ ನಿಯಮಿತ ಸೇವನೆ:</strong> ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದು ಉದಾಹರಣೆಗೆ ನೆಲ್ಲಿಕಾಯಿ ಚಟ್ನಿ, ಮಜ್ಜಿಗೆ ಹುಳಿ, ಸಾರು, ರಸಂ, ಹುಳಿಗಾಗಿ ನೆಲ್ಲಿಪುಡಿ, ನೆಲ್ಲಿ ಹಾಕಿ ಕುದಿಸಿದ ನೀರು ಇವುಗಳ ಸೇವನೆ ನೇತ್ರರಕ್ಷಕ. ನೆಲ್ಲಿಕಾಯಿ ಹೊರತುಪಡಿಸಿ ಬೇರೆ ಎಲ್ಲಾ ಹುಳಿರುಚಿಯ ಪದಾರ್ಥಗಳ ಅನಿಯಮಿತ ಸೇವನೆ ಕಣ್ಣಿಗೆ ಹಾನಿ.</p>.<p class="Subhead"><strong>ರಸಾಯನ ವಿಧಾನ:</strong> ತ್ರಿಫಲಾ ಚೂರ್ಣ ಸುಮಾರು ಕಾಲು ಚಮಚ, ತುಪ್ಪ ಒಂದು ಚಮಚ ಜೇನುತುಪ್ಪ ಎರಡು-ಮೂರು ಹನಿಗಳನ್ನು ಕಲಸಿ, ರಾತ್ರಿಮಲಗುವ ಮುನ್ನ ನೆಕ್ಕುವುದು ಕಣ್ಣಿಗೆ ಹಿತಕರ. ಈ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದು.</p>.<p class="Subhead"><strong>ರಾತ್ರಿ ನಿದ್ರೆ-ಹಗಲು ದುಡಿಮೆ:</strong> ಸಕಾಲದಲ್ಲಿ ಹಿತಮಿತ ಆಹಾರಸೇವನೆ-ನಿದ್ದೆ-ದೈನಂದಿನ ವ್ಯವಹಾರ ಕಣ್ಣಿನ ರೋಗಗಳನ್ನೂ ದೂರವಿಡುತ್ತದೆ. ಅಂದರೆ ಹಗಲು ದುಡಿಮೆ, ರಾತ್ರಿ ನಿದ್ರೆ. ತಡರಾತ್ರಿಯೂ ಕೃತಕಬೆಳಕಿನಲ್ಲಿ ಎಚ್ಚರವಿರುವ, ಟಿ.ವಿ., ಮೊಬೈಲ್, ಕಂಪ್ಯೂಟರ್ ವೀಕ್ಷಣೆ ಕಣ್ಣಿಗೆ ಹಾನಿಕರ. ಪ್ರಖರ ಬೆಳಕನ್ನು/ ಸೂರ್ಯರಶ್ಮಿಯನ್ನು ನೇರವಾಗಿ ದಿಟ್ಟಿಸುವ ಪ್ರಯತ್ನ ಮಾಡಬಾರದು. ಸಾಕಷ್ಟು ಬೆಳಕಿನಲ್ಲಿಯೇ ಓದುವ ಅಭ್ಯಾಸ, ಕಣ್ಣಿಗೆ ಹಿತವೆನಿಸುವ ನೋಟ, ಕಣ್ಣಿಗೆ ಸಾಕಷ್ಟು ವಿರಾಮ ದೃಷ್ಟಿಯ ರಕ್ಷಕ.</p>.<p class="Subhead"><strong>ಜೈವಿಕಕ್ರಿಯೆಗಳ ಕರೆಗಳನ್ನು ಆಲಿಸಿ: </strong>ಅಧೋವಾಯು, ಮಲ, ನಿದ್ರೆ, ಕಣ್ಣೀರು, ಅಜೀರ್ಣದಿಂದಾಗುವ ವಾಂತಿ - ಈ ಶಾರೀರಿಕ ಕರೆಗಳು ದೇಹದ ಅಗತ್ಯಗಳು. ಇವುಗಳಿಗೆ ಗಮನ ಕೊಡದಿದ್ದರೆ ದೃಷ್ಟಿಯೇ ನಷ್ಟವಾದೀತು. ಆದ್ದರಿಂದ, ಇವುಗಳು ಬಂದಾಗ ತಕ್ಷಣ ಅವಸರಿಸಬೇಕು, ವಿಸರ್ಜಿಸಬೇಕು.</p>.<p class="Subhead"><strong>ಇವು ದೃಷ್ಟಿಗೆ ಹಾನಿ: </strong>ಎಣ್ಣೆಯ ಅತಿಬಳಕೆ/ತಪ್ಪಾದ ಸೇವನೆ ಕಣ್ಣಿಗೆ ಹಾನಿಕರ. ಅದರಲ್ಲೂ ಅತಸೀ/ಅಗಸೆ, ಕುಸುಬೆ ಎಣ್ಣೆಗಳ ಬಳಕೆಯಲ್ಲಿ ಎಚ್ಚರವಿರಲಿ. ಎಣ್ಣೆಯನ್ನು ತೆಗೆದ ನಂತರ ಉಳಿಯುವ ಹಿಂಡಿ (ಉದಾಹರಣೆಗೆ ಸೋಯಾ ಹಿಂಡಿ/ ಸೋಯಾ ಚಂಕ್ಸ್) ಸೇವನೆ ಕಣ್ಣಿಗೆ ಹಿತವಲ್ಲ. ನಾಲ್ಕಾರು ದಿನಗಳಾದ/ಒಣಕಲು ತರಕಾರಿ, ಸೊಪ್ಪುಗಳು ಹಿತವಲ್ಲ.</p>.<p><strong>(ಲೇಖಕಿ ಆಯುರ್ವೇದವೈದ್ಯೆ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಗತ್ತನ್ನು ನೋಡಲು ಕಣ್ಣುಗಳು ಬೇಕು. ದೃಷ್ಟಿಯಿಲ್ಲದಿದ್ದರೆ ಜೀವನದ ಪ್ರಯಾಣ ಸುಲಭವಲ್ಲ. ಹೀಗೆ ನಮ್ಮ ಬದುಕಿಗೆ ಬೆಳಕಾಗಿರುವ ಕಣ್ಣುಗಳನ್ನು ಹೇಗೆ ಜೋಪಾನ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿ ಕೆಲವೊಂದು ಸಲಹೆ–ಸೂಚನೆಗಳಿವೆ:</p>.<p><strong>ಕಣ್ಣನ್ನು ತೊಳೆಯುವುದು:</strong> ಮುಂಜಾನೆ ಶುದ್ಧತಣ್ಣೀರಿನಲ್ಲಿ ಕಣ್ಣನ್ನು ತೊಳೆಯುವುದು, ಜೇನುತುಪ್ಪ ಮತ್ತು ತಣ್ಣೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಕಣ್ಣನ್ನು ತೊಳೆಯುವುದು ಅಕ್ಷಿಶುದ್ಧಿಕರ.</p>.<p><strong>ಕಾಡಿಗೆ ಹಚ್ಚುವುದು: </strong>ತುಪ್ಪದಲ್ಲಿ ಶುದ್ಧ ಬಿಳಿಹತ್ತಿಯ ಬತ್ತಿಯನ್ನು ಉರಿಸಬೇಕು. ದೀಪ ಉರಿಯುವಾಗ ಮಣ್ಣು/ ಬೆಳ್ಳಿ/ ಬಂಗಾರ/ ತಾಮ್ರದ ಬಟ್ಟಲಿನ ಪಾತ್ರೆಯ ತಳವನ್ನು ದೀಪದ ಮೇಲೆ ಅಡ್ಡವಾಗಿ ಹಿಡಿಯಬೇಕು. ಪೂರ್ತಿ ಉರಿದ ಮೇಲೆ ಮಸಿಯ ದಪ್ಪಪದರ ಅಂಟಿರುತ್ತದೆ. ಅದನ್ನು ಮೃದುವಾಗಿ ತೆಗೆದು ಸಂಗ್ರಹಿಸಿಡಬೇಕು. ನಿತ್ಯವೂ ಬೆಳಗ್ಗೆ ಹಲ್ಲುಜ್ಜಿದ ನಂತರ ಬೆಣ್ಣೆ/ ತುಪ್ಪದೊಂದಿಗೆ ಕಲಸಿ ಕಿರುಬೆರಳಿನಲ್ಲಿ ಕಣ್ಣಿಗೆ ಕಾಡಿಗೆಯಂತೆ ಬಳಸಬೇಕು. ಈ ಮೃದುಕಾಡಿಗೆ ದೃಷ್ಟಿವರ್ಧಕ.</p>.<p class="Subhead"><strong>ತುಪ್ಪದ ಕವಲಗ್ರಹ: </strong>ದಿವಸವೂ ಬೆಳಗ್ಗೆ ಹಲ್ಲುಜ್ಜಿದ ತಕ್ಷಣ ತುಪ್ಪದ ಮೇಲಿನ ತಿಳಿಯನ್ನು ಬೆಚ್ಚಗೆ ಮಾಡಿ ಬಾಯೊಳಗೆ ಇಟ್ಟುಕೊಳ್ಳುವುದು, ಎಂಜಲು ತುಂಬಿ ಬಂದಾಗ ಉಗಿಯುವುದು ಕೂಡ ನೇತ್ರಗಳಿಗೆ ಹಿತಕರ.</p>.<p class="Subhead"><strong>ಸರ್ವಾಂಗಗಳಿಗೂ ಅಭ್ಯಂಗ: </strong>ನಿತ್ಯವೂ ತಲೆ, ಮೈ, ಕಾಲುಗಳಿಗೆ ಎಣ್ಣೆ ಸವರಿಕೊಂಡು ಸ್ನಾನಮಾಡುವ ಉಪಾಯವನ್ನು ಆಯುರ್ವೇದವು ಹೇಳಿದೆ. ಮುಪ್ಪನ್ನು ಮುಂದೂಡುವ, ದೃಷ್ಟಿಪ್ರಸಾದನ ಮಾಡುವ ಉತ್ತಮೋತ್ತಮ ದಿನಚರಿಯಿದು.</p>.<p class="Subhead"><strong>ನಸ್ಯ: </strong>ಸ್ನಾನಕ್ಕೂ ಮುನ್ನ ಮೂಗಿಗೆ ನಾಲ್ಕಾರು ಹನಿಗಳಷ್ಟು ಕರಗಿಸಿದ ತುಪ್ಪವನ್ನು ಹಾಕುವುದು ಕಣ್ಣಿಗೆ ಹಿತ.</p>.<p class="Subhead"><strong>ಸ್ನಾನ: </strong>ತಲೆಗೆ ತಣ್ಣಗಿನ ಎಣ್ಣೆ ಮತ್ತು ತಲೆಗೆ ತಣ್ಣೀರು ಸ್ನಾನ ಮಾಡುವುದು ದೃಷ್ಟಿರಕ್ಷಕ. ತಲೆಗೆ ಬಿಸಿಬಿಸಿ ನೀರಿನಿಂದ ಸ್ನಾನ ಮಾಡುವುದು ದೃಷ್ಟಿಶಕ್ತಿಯನ್ನು ಕುಗ್ಗಿಸುತ್ತದೆ. ತಣ್ಣೀರು, ಅಥವಾ ಚಳಿಗಾಲ/ ಶೀತಪ್ರದೇಶದಲ್ಲಿ ಮೈಬಿಸಿ/ ಹೂಬಿಸಿ ನೀರಿನ ಸ್ನಾನ ಕಣ್ಣಿಗೆ ಉತ್ತಮ.</p>.<p class="Subhead"><strong>ಕಣ್ಣಿಗೆ ಬಿಂದುಗಳು: </strong>ತಾಯಿಯ ಎದೆಹಾಲನ್ನು ಹಿಂಡಿ ನಾಲ್ಕಾರು ಹನಿಗಳನ್ನು, ಹಾಲಿನ ಬಿಸಿ ಆರುವ ಮುನ್ನವೇ ಕಣ್ಣಿಗೆ ಹಾಕಿಕೊಳ್ಳುವುದು ನೇತ್ರಗಳಿಗೆ ಪುಷ್ಟಿಕರ. ಸ್ತನ್ಯ ಲಭ್ಯವಿರದಿದ್ದರೆ, ಕಾಯಿಸಿ ಆರಿಸಿದ ಹಾಲನ್ನು ಉಪಯೋಗಿಸಬಹುದು. ಕಣ್ಣಿನ ಉರಿ, ಒಣಗಿದ ತೇವವನ್ನು ಸರಿಪಡಿಸುತ್ತದೆ.</p>.<p class="Subhead"><strong>ಆಹಾರದಲ್ಲಿ ತುಪ್ಪ-ಬೆಣ್ಣೆ:</strong> ನಿತ್ಯವೂ ಬಿಸಿ ಬಿಸಿ ಆಹಾರದೊಂದಿಗೆ ಹಾಲಿನಿಂದ ತೆಗೆದ ಬೆಣ್ಣೆಯನ್ನು, ತುಪ್ಪವನ್ನು ಸೇವಿಸುವುದು ಕಣ್ಣುಗಳಿಗೆ ಹಿತಕರ.</p>.<p class="Subhead"><strong>ಹಣ್ಣಿನ ಸೇವನೆ: </strong>ಹಸಿ/ಒಣದ್ರಾಕ್ಷಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವಿಸುವುದು ಕಣ್ಣಿಗೆ ಹಿತಕರ.</p>.<p class="Subhead"><strong>ಉಪ್ಪು: </strong>ಆಹಾರದಲ್ಲಿ ಸೈಂಧವಉಪ್ಪು(ಅಥವಾ ಪಥ್ಯದ ಉಪ್ಪು/ಕಲ್ಲುಪ್ಪು/ರಾಕ್ ಸಾಲ್ಟ್) ಬಳಸುವುದು ಕಣ್ಣಿಗೆ ಹಿತ. ಬೇರೆಲ್ಲಾ ಉಪ್ಪು ದೃಷ್ಟಿನಾಶಕ. ನಿತ್ಯವೂ ಸಮುದ್ರದ ಉಪ್ಪು, ಟೇಬಲ್ ಸಾಲ್ಟ್, ಅಯೋಡಿನ್ ಉಪ್ಪಿನ ನಿತ್ಯಬಳಕೆಯಿಂದ ದೃಷ್ಟಿಶಕ್ತಿ ಕುಂದುವುದು.</p>.<p class="Subhead"><strong>ರಾತ್ರಿಯ ಆಹಾರ: </strong>ಎಂಟುಗಂಟೆಯೊಳಗೆ ರಾತ್ರಿ ಆಹಾರಸೇವನೆಯ ಅಭ್ಯಾಸ ಕಣ್ಣು ಮತ್ತು ಇತರ ಇಂದ್ರಿಯಗಳಿಗೆ ಹಿತಕರ. ಮೊಸರನ್ನು ರಾತ್ರಿಯ ಆಹಾರದಲ್ಲಿ ಸೇವಿಸಬಾರದು. ರಾತ್ರಿವೇಳೆಯಲ್ಲಿ ಮೊಸರಿನ ಸೇವನೆ ಕಣ್ಣಿನ ಹಲವು ತೊಂದರೆಗಳಿಗೆ ಕಾರಣ.</p>.<p class="Subhead"><strong>ನೆಲ್ಲಿಕಾಯಿಯ ನಿಯಮಿತ ಸೇವನೆ:</strong> ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದು ಉದಾಹರಣೆಗೆ ನೆಲ್ಲಿಕಾಯಿ ಚಟ್ನಿ, ಮಜ್ಜಿಗೆ ಹುಳಿ, ಸಾರು, ರಸಂ, ಹುಳಿಗಾಗಿ ನೆಲ್ಲಿಪುಡಿ, ನೆಲ್ಲಿ ಹಾಕಿ ಕುದಿಸಿದ ನೀರು ಇವುಗಳ ಸೇವನೆ ನೇತ್ರರಕ್ಷಕ. ನೆಲ್ಲಿಕಾಯಿ ಹೊರತುಪಡಿಸಿ ಬೇರೆ ಎಲ್ಲಾ ಹುಳಿರುಚಿಯ ಪದಾರ್ಥಗಳ ಅನಿಯಮಿತ ಸೇವನೆ ಕಣ್ಣಿಗೆ ಹಾನಿ.</p>.<p class="Subhead"><strong>ರಸಾಯನ ವಿಧಾನ:</strong> ತ್ರಿಫಲಾ ಚೂರ್ಣ ಸುಮಾರು ಕಾಲು ಚಮಚ, ತುಪ್ಪ ಒಂದು ಚಮಚ ಜೇನುತುಪ್ಪ ಎರಡು-ಮೂರು ಹನಿಗಳನ್ನು ಕಲಸಿ, ರಾತ್ರಿಮಲಗುವ ಮುನ್ನ ನೆಕ್ಕುವುದು ಕಣ್ಣಿಗೆ ಹಿತಕರ. ಈ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದು.</p>.<p class="Subhead"><strong>ರಾತ್ರಿ ನಿದ್ರೆ-ಹಗಲು ದುಡಿಮೆ:</strong> ಸಕಾಲದಲ್ಲಿ ಹಿತಮಿತ ಆಹಾರಸೇವನೆ-ನಿದ್ದೆ-ದೈನಂದಿನ ವ್ಯವಹಾರ ಕಣ್ಣಿನ ರೋಗಗಳನ್ನೂ ದೂರವಿಡುತ್ತದೆ. ಅಂದರೆ ಹಗಲು ದುಡಿಮೆ, ರಾತ್ರಿ ನಿದ್ರೆ. ತಡರಾತ್ರಿಯೂ ಕೃತಕಬೆಳಕಿನಲ್ಲಿ ಎಚ್ಚರವಿರುವ, ಟಿ.ವಿ., ಮೊಬೈಲ್, ಕಂಪ್ಯೂಟರ್ ವೀಕ್ಷಣೆ ಕಣ್ಣಿಗೆ ಹಾನಿಕರ. ಪ್ರಖರ ಬೆಳಕನ್ನು/ ಸೂರ್ಯರಶ್ಮಿಯನ್ನು ನೇರವಾಗಿ ದಿಟ್ಟಿಸುವ ಪ್ರಯತ್ನ ಮಾಡಬಾರದು. ಸಾಕಷ್ಟು ಬೆಳಕಿನಲ್ಲಿಯೇ ಓದುವ ಅಭ್ಯಾಸ, ಕಣ್ಣಿಗೆ ಹಿತವೆನಿಸುವ ನೋಟ, ಕಣ್ಣಿಗೆ ಸಾಕಷ್ಟು ವಿರಾಮ ದೃಷ್ಟಿಯ ರಕ್ಷಕ.</p>.<p class="Subhead"><strong>ಜೈವಿಕಕ್ರಿಯೆಗಳ ಕರೆಗಳನ್ನು ಆಲಿಸಿ: </strong>ಅಧೋವಾಯು, ಮಲ, ನಿದ್ರೆ, ಕಣ್ಣೀರು, ಅಜೀರ್ಣದಿಂದಾಗುವ ವಾಂತಿ - ಈ ಶಾರೀರಿಕ ಕರೆಗಳು ದೇಹದ ಅಗತ್ಯಗಳು. ಇವುಗಳಿಗೆ ಗಮನ ಕೊಡದಿದ್ದರೆ ದೃಷ್ಟಿಯೇ ನಷ್ಟವಾದೀತು. ಆದ್ದರಿಂದ, ಇವುಗಳು ಬಂದಾಗ ತಕ್ಷಣ ಅವಸರಿಸಬೇಕು, ವಿಸರ್ಜಿಸಬೇಕು.</p>.<p class="Subhead"><strong>ಇವು ದೃಷ್ಟಿಗೆ ಹಾನಿ: </strong>ಎಣ್ಣೆಯ ಅತಿಬಳಕೆ/ತಪ್ಪಾದ ಸೇವನೆ ಕಣ್ಣಿಗೆ ಹಾನಿಕರ. ಅದರಲ್ಲೂ ಅತಸೀ/ಅಗಸೆ, ಕುಸುಬೆ ಎಣ್ಣೆಗಳ ಬಳಕೆಯಲ್ಲಿ ಎಚ್ಚರವಿರಲಿ. ಎಣ್ಣೆಯನ್ನು ತೆಗೆದ ನಂತರ ಉಳಿಯುವ ಹಿಂಡಿ (ಉದಾಹರಣೆಗೆ ಸೋಯಾ ಹಿಂಡಿ/ ಸೋಯಾ ಚಂಕ್ಸ್) ಸೇವನೆ ಕಣ್ಣಿಗೆ ಹಿತವಲ್ಲ. ನಾಲ್ಕಾರು ದಿನಗಳಾದ/ಒಣಕಲು ತರಕಾರಿ, ಸೊಪ್ಪುಗಳು ಹಿತವಲ್ಲ.</p>.<p><strong>(ಲೇಖಕಿ ಆಯುರ್ವೇದವೈದ್ಯೆ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>